"ತುರ್ತು ಸಂದರ್ಭಗಳಲ್ಲಿ, ವಿಶೇಷವಾಗಿ ಹೆರಿಗೆ ಪ್ರಕರಣಗಳಲ್ಲಿ ಜನರನ್ನು ಉಳಿಸಿಕೊಳ್ಳುವುದು ನನ್ನ ಕರ್ತವ್ಯ. ಇಲ್ಲಿ, ನಾವು ತಾಯಿ ಮತ್ತು ಮಗುವಿನ ಆರೈಕೆಯನ್ನು ಮಾಡಬೇಗುತ್ತದೆ. ಮೊದಲ ಬಾರಿಗೆ ನನಗದು ಕಠಿಣವಾಗಿ ಕಂಡಿತ್ತು. ಆದರೆ ಅದೊಮ್ಮೆ ತಾಯಿ ಹಾಗೂ ಮಗು ಇಬ್ಬರನ್ನೂ ಕ್ಷೇಮವಾಗಿ ಉಳಿಸಲು ಸಾಧ್ಯವಾದ ಬಳಿಕ ನನಗೆ ಧಯ್ರ್ಯ ಬಂದಿದೆ. ಸಾಮಾನ್ಯವಾಗಿ ನಾವು ಗರ್ಭಿಣಿಯರಿಗೆ ನೋವು ನಿವಾರಕಗಳನ್ನು ನೀಡಿ ಆವರನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತೇವೆ. ಆದರೆ ಪರಿಸ್ಥಿತಿ ಕೈಮೀರಿದೆ ಎಂದು ಕಂಡು ಬಂದರೆ ನಾವು ಅಂಬ್ಯುಲೆನ್ಸ್ ನಿಲ್ಲಿಸಿ ವಾಹನದಲ್ಲೇ ಹೆರಿಗೆ ಮಾಡಿಸಿದ ಬಳಿಕ ತಾಯಿ, ಮಗು ಇಬ್ಬರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸುತ್ತೇವೆ" ಅವರು ಹೇಳಿದ್ದಾರೆ.