ಅವರು ತಮ್ಮ ಭಾಷಣದಲ್ಲಿ ಹೇಳಿದ ಮಾತುಗಳ ಸಾರಾಂಶ ಇಂತಿದೆ: ''ನಿಮ್ಮ ಕನಸು ಈ ಕ್ಷಣಕ್ಕೆ ಈಡೇರಿಸಲು ಸಾಧ್ಯವಿಲ್ಲ ಎಂದು ಅನಿಸಬಹುದು. ಆದರೆ ಅದು ವಾಸ್ತವವಾಗಲು ಕನಸಿನ ಬೆನ್ನತ್ತಿ ನೀವು ಹೋಗಬೇಕು, ಅದಕ್ಕೆ ಕಠಿಣ ಶ್ರಮ, ಸಾಧನೆ ಬೇಕು. ನಾನು ಸಾಧನೆಯನ್ನು ಹಂತ ಹಂತವಾಗಿ ಏರಿದ್ದು, ಈ ಮಧ್ಯೆ ಕೆಲವು ತಪ್ಪುಗಳನ್ನು ಮಾಡಿದ್ದೇನೆ, ಆದರೆ ಅವುಗಳಿಂದ ಕಲಿತು, ತಿದ್ದುಕೊಂಡು ಮುಂದುವರಿದೆ.