ಮೈಸೂರಿನವರಾದ ಪರಿಚಯ ಅವರ ತಂದೆ ಸೆಕ್ಯುರಿಟಿ ಗಾರ್ಡ್ ಆಗಿದ್ದ ಮಹದೇವ್ ಹಾಗೂ ತಾಯಿ ತರಕಾರಿ ವ್ಯಾಪಾರಿ ಅಲಮೇಲಮ್ಮ ಅವರುಗಳಾಗಿದ್ದರು."ನಾನು 13 ವರ್ಷ ವಯಸ್ಸಿನವನಾಗಿದ್ದಾಗ ನನಗೇನೋ ಸರಿಯಿಲ್ಲ ಎಂದು ಬಾಸವಾಗಿತ್ತು, ಆದರೆ ಆಗೇನೂ ಮಾಡಲಾಗಲಿಲ್ಲ. ನಾನು 17 ವರ್ಷದವನಾಗಿದ್ದಾಗ, ನನ್ನ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಅದೊಂದು ದಿನ ಪಾಕೆಟ್ ನಲ್ಲೆ ಕೆಲವು ರು. ಹಣವಿಟ್ಟುಕೊಂಡು ಮೈಸೂರಿನಿಂದ ಬೆಂಗಳೂರಿಗೆ ಬಂದೆನು. ಆಗ ಬೆಂಗಳೂರು ಪ್ಯಾಸೆಂಜರ್ ರೈಲಿಗೆ 21 ರು. ದರವಿತ್ತು. ನಾನು ಬೆಂಗಳೂರಿಗೆ ಬಂದು ಮೆಜೆಸ್ಟಿಕ್ ಸುತ್ತ ಮುತ್ತ ಗೋಡೆ, ಮರಗಳಿಗೆ ಅಂಟಿಸಿದ್ದ ಜಾಹೀರಾತುಗಳಲ್ಲಿರುವ ಅನೇಕ ಸಂಖ್ಯೆಗಳಿಗೆ ಕರೆ ಮಾಡಿ ಉದ್ಯೋಗಕ್ಕಾಗಿ ವಿಚಾರಿಸಿದೆ. ಆದರೆ ಯಾವುದೂ ಫಲಕಾರಿಯಾಗಿರಲಿಲ್ಲ. ಆಗ ಕಡೆಗೊಮ್ಮೆ ಅನಾಥಾಶ್ರಮದಲ್ಲಿ ಕೆಲಸ ದೊರಕಿತು. ಅವರೇ ನನಗೆ ಊಟ, ವಸತಿಯ ಏರ್ಪಾಡು ಸಹ ಮಾಡಿದ್ದರು. ಮಲ್ಲೇಶ್ವರದಲ್ಲಿನ ಅನಾಥಾಶ್ರಮದಲ್ಲಿ ನಾನು ಎರಡು ವರ್ಷಗಳ ಕಾಲ ಕಳೆದಿದ್ದೇನೆ" ಪರಿಚಯ ತನ್ನ ನೆನಪನ್ನು ತಿರುವಿ ಹಾಕಿದ್ದಾರೆ.