ಮಾದ್ಯಮದವರೊಡನೆ ಮಾತನಾಡಿದ ಅಜಯ್ ತಂದೆ "ನನ್ನ ಮಗ ಮಾನಸಿಕ ಅಸಮತೋಲನ ಹೊಂದಿದ್ದವ. ಚಿಕ್ಕ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡಿದ್ದ. ಊರಿನಲ್ಲಿ ಬಹುತೇಕ ಎಲ್ಲಾ ಮದುವೆಗೆ ಆತ ಹಾಜರಾಗುತ್ತಿದ್ದ. ನನ್ನ ಮದುವೆ ಯಾವಾಗಲೆಂದು ಆಗಾಗ ನನ್ನನ್ನು ವಿಚಾರಿಸುತ್ತಿದ್ದ. ಆದರೆ ಅವನನ್ನು ಒಪ್ಪುವ ವಧು ಸಿಕ್ಕುವುದಿಲ್ಲ ಎಂಬುದು ನಮಗೆ ತಿಳಿದಿತ್ತು. ನಾನು ನನ್ನ ಪರಿವಾರ, ಕುಟುಂಬದವರೊಡನೆ ಮಾತನಾಡಿ ವಧುವಿಲ್ಲದೆ ವಿವಾಹ ಮಾಡಲು ನಿಶ್ಚಯಿಸಿದೆವು. ಅದರಂತೆ ಮಗನ ಆಸೆ ಈಡೇರುವಂತಾಗಲು ನಾವಿಂದು ವಿವಾಹ ನಡೆಸಿದ್ದೇವೆ" ಎಂದಿದ್ದಾರೆ. ಮಗನ ಸಂತೋಷದ ಹೊರತು ನನಗಾವುದೂ ದೊಡ್ಡದಲ್ಲ ಎಂಬುದು ಅವರ ನಿರ್ಧಾರವಾಗಿದೆ.