ಸದಾ ನಗುಮೊಗದೊಡನೆ ರೋಗಿಗಳ ಆರೈಕೆ ಮಾಡುವ ಗದಗದ 'ನಡೆದಾಡುವ ದೇವರು'! 

ನಡೆದಾಡುವ ದೇವರು" ಎಂದೇ ಖ್ಯಾತವಾಗಿದ್ದ ತುಮಕೂರಿನ ಸಿದ್ದಗಂಗಾ ಶ್ರೀಗಳ ಬಗೆಗೆ ನಮಗೆಲ್ಲಾ ತಿಳಿದಿದೆ. ಆದರೆ ಗದಗದಲ್ಲಿರುವ ಓರ್ವ ವೈದ್ಯ ಸಹ ಇದೇ ಹೆಸರಿನಿಂದ ಪ್ರಖ್ಯಾತಿ ಹೊಂದಿದ್ದಾರೆ. 
ಸದಾ ನಗುಮೊಗದೊಡನೆ ರೋಗಿಗಳ ಆರೈಕೆ ಮಾಡುವ ಗದಗದ 'ನಡೆದಾಡುವ ದೇವರು'!
ಸದಾ ನಗುಮೊಗದೊಡನೆ ರೋಗಿಗಳ ಆರೈಕೆ ಮಾಡುವ ಗದಗದ 'ನಡೆದಾಡುವ ದೇವರು'!

ಗದಗ: "ನಡೆದಾಡುವ ದೇವರು" ಎಂದೇ ಖ್ಯಾತವಾಗಿದ್ದ ತುಮಕೂರಿನ ಸಿದ್ದಗಂಗಾ ಶ್ರೀಗಳ ಬಗೆಗೆ ನಮಗೆಲ್ಲಾ ತಿಳಿದಿದೆ. ಆದರೆ ಗದಗದಲ್ಲಿರುವ ಓರ್ವ ವೈದ್ಯ ಸಹ ಇದೇ ಹೆಸರಿನಿಂದ ಪ್ರಖ್ಯಾತಿ ಹೊಂದಿದ್ದಾರೆ. 24X7  ಗಂಟೆ ಕಾಲ ರೋಗಿಗಳ ಸೇವೆಗೆ ಸದಾ ಲಭ್ಯವಿರುವ ಡಾ. ಸಿ ಸಿ ಸೊಲೊಮನ್,ತಮ್ಮಿಂದ ಚಿಕಿತ್ಸೆ ಹೊಂದಿದ ತೋಗಿಗಳ ಹಾಗೂ ಅವರ ಕುಟುಂಬದವರ ಹೃದಯದಲ್ಲಿ ಸದಾ ನೆಲೆಸಿದ್ದಾರೆ.ಸಹಾಯಕ್ಕಾಗಿ ತನ್ನ ಬಳಿಗೆ ಬರುವ ಯಾರನ್ನೂ ಎಂದಿಗೂ  ನಿರಾಶೆಗೊಳಿಸದ ಈ ವೈದ್ಯವೃತ್ತಿಜೀವನದ ಕಳೆದ 40 ವರ್ಷಗಳಲ್ಲಿ ಅವರು ತೋರಿದ  ತಾಳ್ಮೆಯೇ ಅಗಾಧವಾಗಿದೆ.

ಸೊಲೊಮನ್ 1970 ರ ದಶಕದ ಉತ್ತರಾರ್ಧದಲ್ಲಿ ಗದಗಕ್ಕೆ ಬಂದರು ಕಳೆದ ನಾಲ್ಕು ದಶಕಗಳಿಂದ ಅವರು ಜರ್ಮನ್ ಆಸ್ಪತ್ರೆ  ಎಂದು ಖ್ಯಾತವಾಗಿರುವ ಗದಗ್ ಸಿಎಸ್‌ಐ ಆಸ್ಪತ್ರೆಯಲ್ಲಿ ಸ್ಥಳೀಯರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಡಾ ಸೊಲೊಮನ್ ಯಾವುದೇ ರೋಗವನ್ನು ಗುಣಪಡಿಸುವ ಮಾಂತ್ರಿಕ ಸ್ಪರ್ಶವನ್ನು ಹೊಂದಿದ್ದಾರೆ ಎಂದು ಹಲವರು ನಂಬಿರುವ ಕಾರಣ, ಅವನನ್ನು ಸಂಪರ್ಕಿಸಲು ಹತ್ತಿರ ಹಾಗೂ ದೂರದ ಊರುಗಳಿಂದ ಜನರು ಆಗಮಿಸುತ್ತಾರೆ. ಸೊಲೊಮನ್ ವೆಲ್ಲೂರು ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಿಂದ ಎಂಬಿಬಿಎಸ್ ಮತ್ತು ಎಂಡಿ ಪದವಿ ಪಡೆದಿದ್ದಾರೆ.

ಜರ್ಮನ್ ಟ್ರಸ್ಟ್ ನಡೆಸುತ್ತಿರುವ ಆಸ್ಪತ್ರೆಯು ರೋಗಿಗಳಿಗೆ ಒಂದು ತಿಂಗಳ ಸಮಾಲೋಚನೆಗಾಗಿ ಕೇವಲ 50 ರೂ. ಪಡೆಯುವ ವೈದ್ಯ  ಈ ಅವಧಿಯಲ್ಲಿ, ರೋಗಿಯು ಹೆಚ್ಚುವರಿ ಶುಲ್ಕ ವಿಧಿಸದೆ ಆಸ್ಪತ್ರೆಗೆ ಹಲವು ಬಾರಿ ಭೇಟಿ ಕೊಡುವ ಅವಕಾಶ ಕಲ್ಪಿಸಿದ್ದಾರೆ. ಸೀಮಿತ ಬಜೆಟ್ಟಿನಲ್ಲಿ ಈ ವೈದ್ಯ ಬಡವರಿಗೆ ಉತ್ತಮ ವಾರ್ಡ್ ಕೊಠಡಿಗಳ ನಿರ್ಮಾಣ ಂಆಡಿದ್ದಾರೆ. ಅದಕ್ಕೆ ರೋಗಿಗಳು ದಿನಕ್ಕೆ  ಕೇವಲ 200-300 ರೂ.ಪಾವತಿಸಿದರೆ ಸಾಕು. ಡಾ. ಸೊಲೊಮನ್ ಅವರ ಉತ್ಸಾಹವನ್ನು ನೋಡಿದ ನಂತರ, ಸಿಎಸ್ಐ ಮಿಷನ್ ಅವರಿಗೆ ಆಸ್ಪತ್ರೆಯನ್ನು ನಡೆಸುವ ಜವಾಬ್ದಾರಿಯನ್ನು ನೀಡಿತು. ಮತ್ತು ಅವರು ಆಸ್ಪತ್ರೆಯ ಕಾರ್ಯ ವಿಧಾನವನ್ನು ಬದಲಾಯಿಸಿದರು. , ಬಡವರ  ಆರೋಗ್ಯ ರಕ್ಷಣೆಗೆ ವಿಶೇಷ ಗಮನ ನೀಡುವ ಇವರು ಇಲ್ಲಿ ಕೆಲಸ ಮಾಡುವ ದಾದಿಯರಿಗೂ ಅದಕ್ಕೆ ಅನುಗುಣವಾಗಿ ತರಬೇತಿ ನೀಡುತ್ತಾರೆ.

ಡಾ. ಸೊಲೊಮನ್ ಮುಂಜಾನೆ ವಾರ್ಡ್‌ಗಳಿಗೆ ಮತ್ತು ಸರದಿಯಲ್ಲಿ ನಿಂತ ರೋಗಿಗಳ ಸಂದರ್ಶನ ಮಾಡುತ್ತಾರೆ. ಆ ಮೂಲಕ ಅವರು ದಿನವನ್ನು ಪ್ರಾರಂಭಿಸುತ್ತಾರೆ. ಈ ರೌಂಡ್ಸ್  ಸಂಜೆ 4 ರ ಸುಮಾರಿಗೆ ಕೊನೆಗೊಳ್ಳುತ್ತವೆ, ನಂತರ ಅವರು ಊಟ ಮುಗಿಸುತ್ತಾರೆ.  ಸಂಜೆ 4.30 ರ ಹೊತ್ತಿಗೆ ತನ್ನ ಕೆಲಸವನ್ನು ಪುನರಾರಂಭಿಸುತ್ತಾನೆ. ನಿಯಮಿತ ದಿನವು ಮಧ್ಯರಾತ್ರಿಯಲ್ಲಿ ಕೊನೆಗೊಳ್ಳುತ್ತದೆ, ಆದರೆ ಡಾ. ಸೊಲೊಮನ್ ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲ ಸಹ ಲಭ್ಯವಿರುತ್ತಾರೆ. ರೋಗಿಗಳು ಅವರನ್ನು "ನಡೆದಾಡುವ ದೇವರು"ಎಂದು ಕರೆಯುತ್ತಾರೆ. “ನಾನು ನನ್ನ ಉದ್ಯೋಗವನ್ನು ಕಮರ್ಷಿಯಲ್ ಆಗಿ ಕಾಣುವುದಿಲ್ಲ. ಅಗತ್ಯವಿಲ್ಲದಿದ್ದರೆ ನಾನು ಎಂದಿಗೂ ದುಬಾರಿ ಔಷಧಿಗಳನ್ನು  ಶಿಫಾರಸು ಮಾಡಿಲ್ಲ. ನಮ್ಮ ಆಸ್ಪತ್ರೆ ಬಡವರಿಗಾಗಿ, ಮತ್ತು ನನ್ನ ರೋಗಿಗಳು ನನ್ನನ್ನು ಪ್ರೀತಿಸುತ್ತಾರೆ ಏಕೆಂದರೆ ಅವರ ಸಮಸ್ಯೆಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ನಾನು ಉತ್ತಮ ವೈದ್ಯನಲ್ಲದಿರಬಹುದು, ಆದರೆ ನಾನು ಮನುಷ್ಯ. ” ಅವರು ಹೇಳೀದ್ದಾರೆ.

ಲಕ್ಕುಂಡಿ ಗ್ರಾಮದ ರೋಗಿಯಾದ ಮಲ್ಲವ್ವ ಮಡಿವಾಳರ್ ಮಾತನಾಡಿ “ನನಗೆ ಪಿತ್ತಜನಕಾಂಗದ ಸಮಸ್ಯೆಗಳಿದ್ದವು, ಅದನ್ನು ತಪ್ಪಾಗಿ ನಿರ್ಣಯಿಸಲಾಗಿತ್ತು.  ಇದಕ್ಕಾಗಿ ನಾನು ಸಾಕಷ್ಟು ಹಣವನ್ನು ಖರ್ಚು ಮಾಡಿದೆ. ಆದರೆ ನಾನು ಡಾ. ಸೊಲೊಮನ್ ಬಳಿಗೆ ಹೋದಾಗ, ಅವರು ಅದನ್ನು ಕಾಮಾಲೆ ಎಂದು ಸರಿಯಾಗಿ ಪತ್ತೆ ಹಚ್ಚಿದರು ಮತ್ತು 1995 ರಲ್ಲಿ ಟ್ಯಾಬ್ಲೆಟ್‌ಗೆ ಕೇವಲ  1 ರು.ಗೆ ಔಷಧಿಗಳನ್ನು ನೀಡಿದ್ದರು. ನಾನು ಕೇವಲ 30 ರೂಗಳನ್ನು ಖರ್ಚು ಮಾಡಿ30 ದಿನಗಳಲ್ಲಿ ಚೆನ್ನಾಗಿ ಗುಣಹೊಂದಿದ್ದೆ. ನ್ನ ಕುಟುಂಬದ ಎಲ್ಲ ಸದಸ್ಯರು ಕಳೆದ 25 ವರ್ಷಗಳಿಂದ ಅದೇ ವೈದ್ಯರ ಬಳಿ ಹೋಗುತ್ತಿದ್ದೇವೆ" ಎಂದರು.

ಡಾ. ಸೊಲೊಮನ್ ರೋಗಿಗಳಲ್ಲಿ ಇನ್ನೊಬ್ಬ, ನಿವೃತ್ತ ಪ್ರಾಧ್ಯಾಪಕ ಬಿ ಆರ್ ಜಲಿಹಾಳ್ ಮಾತನಾಡಿ “ನಾವು ಕಳೆದ 30 ವರ್ಷಗಳಿಂದ ಇದೇ ವೈದ್ಯರ  ಬಳಿಗೆ ಹೋಗುತ್ತಿದ್ದೇವೆ. ಅವರು ನಮಗೆ ದಯೆ ತೋರಿಸಿದ್ದಾರೆ ಮತ್ತು ಅವರ ಮುಖದಲ್ಲಿ ಯಾವಾಗಲೂ ನಗು ಇರುತ್ತದೆ. ಅವರು ಮನೆಗೆ ಭೇಟಿ ನೀಡಿದಾಗ ಅವರು ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ” ಎಂದಿದ್ದಾರೆ.

ಆಸ್ಪತ್ರೆಯಲ್ಲಿ ಇನ್ನಿಬ್ಬರು ವೈದ್ಯರು ಇದ್ದರೂ, ರೋಗಿಗಳು ಡಾ. ಸೊಲೊಮನ್ ಅವರನ್ನು  ಮಾತ್ರ ಭೇಟಿಯಾಗಬೇಕೆಂದು ಒತ್ತಾಯಿಸುತ್ತಾರೆ, ಆದ್ದರಿಂದ ಅವರು ಬೆಳಿಗ್ಗೆನ ಜಾವ 1 ಗಂಟೆಗಾದರೂ ಸರಿ ಅವರನ್ನು ಭೇಟಿ ಮಾಡಲು ಪ್ರಯತ್ನಿಸುತ್ತಾರೆ. ಡಾ. ಸೊಲೊಮನ್ ಅವರ ಭೇಟಿಯ ಶುಲ್ಕ ಹೆಚ್ಚಳಕ್ಕಾಗಿ ಆಸ್ಪತ್ರೆ ನಡೆಸಿದ ಅನೇಕ ಪ್ರಯತ್ನಗಳೂ ವ್ಯರ್ಥವಾಗಿದೆ.

2017 ರಲ್ಲಿ ಡಾ. ಸೊಲೊಮನ್ ನಿವೃತ್ತಿಯ ನಂತರ, ರೋಗಿಗಳ ಸಂಖ್ಯೆ ಕಡಿಮೆಯಾಯಿತು, ಆದ್ದರಿಂದ ಬಾಸೆಲ್ ಮಿಷನ್ ಅಧಿಕಾರಿಗಳು ಅವರಿಗೆ ಇನ್ನೂ ಎರಡು ವರ್ಷಗಳ ಕಾಲ ಇರಬೇಕೆಂದು ಮನವಿ ಮಾಡಿದ್ದರು. ಅವರು ಮೇ ತಿಂಗಳಲ್ಲಿ ರಾಜೀನಾಮೆ ನೀಡಲು ನಿರ್ಧರಿಸಿದ್ದರೂ, ರೋಗಿಗಳ ಒತ್ತಡವು ಅವರನ್ನು ಕೆಲಸ ಮುಂದುವರಿಸುವಂತೆ ಮಾಡಿದೆ.

ಡಾ. ಸೊಲೊಮನ್ ರೋಗಿ, ಬೆಟಗೇರಿಯ ಚೇತನ್ ಭಜಂತ್ರಿ ಹೇಳಿದಂತೆ "ನನ್ನ ಮನೆ ಡಾ. ಸೊಲೊಮನ್ ಕೆಲಸ ಮಾಡುವ ಆಸ್ಪತ್ರೆಯ ಬಳಿ ಇದೆ. ಅನೇಕ ರೋಗಿಗಳು ಅವರನ್ನು ಕೇಳುತ್ತಾ ನನ್ನ ಬಳಿ ಬರುತ್ತಾರೆ.ಅವರಿಂದ  ಚಿಕಿತ್ಸೆ ಪಡೆದ ನೂರಾರು ರೋಗಿಗಳನ್ನು ನಾನು ನೋಡಿದ್ದೇನೆ, ಅವರ ಬಗ್ಗೆ ಹೇಳುವುದಕ್ಕೆ ಒಳ್ಳೆಯ ವಿಚಾರಗಳಷ್ಟೇ ಇದೆ"

ಖಾಸಗಿ ಬ್ಲಡ್ ಬ್ಯಾಂಕಿನ  ಮಂಜುನಾಥ್ ಎನ್ ಮಾತನಾಡಿ , “ಡಾ. ಸೊಲೊಮನ್ ಕರುಣಾಳು. ಅವರ ರೋಗಿಗಳಿಗೆ ರಕ್ತದ ಅಗತ್ಯವಿರುವಾಗ ಮತ್ತು ನಮ್ಮಲ್ಲಿ ಸ್ಟಾಕ್ ಇಲ್ಲದಿದ್ದಾಗ, ನಾವು ಅದನ್ನು ತರಿಸಿಕೊಡುತ್ತೇವೆಂದು ಅವರು ಯಾವಾಗಲೂ ಖಚಿತಪಡಿಸಿಕೊಳ್ಳುತ್ತಾರೆ. ಮತ್ತು ರಕ್ತದಾನ ಮಾಡುವ ಜನರನ್ನು ಸಹ ಸೂಚಿಸುತ್ತಾರೆ. ” ಎಂದರು.

ವೈದ್ಯರ ಸೇವೆಗೆ ಕಲಾಂ ಶ್ಲಾಘನೆ

ಮಾಜಿ ರಾಷ್ಟ್ರಪತಿಡಾ. ಎಪಿಜೆ ಅಬ್ದುಲ್ ಕಲಾಂ ಅವರು 2009 ರಲ್ಲಿ ಗದಗಕ್ಕೆ  ಭೇಟಿ ನೀಡಿದರು. ಡಾ ಸಿ ಸೊಲೊಮನ್ ಮತ್ತು ಅವರ ಕೆಲಸದ ಬಗ್ಗೆ ಕೇಳಿದಾಗ ಕಲಾಂ ಅವರನ್ನು ಭೇಟಿ ಮಾಡಿ ಅವರ ಸೇವೆಯನ್ನು ಶ್ಲಾಘಿಸಿದರು. ಆ ವೇಳೆ ಆಸ್ಪತ್ರೆಯಲ್ಲಿ ಅವರಿಗೆ ವಡಾ ಸಾಂಬಾರ್, ಚಹಾ ನೀಡಿ ಸತ್ಕರಿಸಲಾಗಿತ್ತು. 

96 ಬಾರಿ  ರಕ್ತದಾನ

ಡಾ ಸೊಲೊಮನ್ 96 ಬಾರಿ ರಕ್ತದಾನ ಮಾಡಿದ್ದಾರೆ! ಅಗತ್ಯವಿದ್ದಾಗ, ರಕ್ತದಾನ ಮಾಡಲು ಅವನು ಎಂದಿಗೂ ಹಿಂಜರಿಯುವುದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com