ರಾಣಿ ಅಬ್ಬಕ್ಕ: ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿಯ ಸಾಕ್ಷ್ಯಚಿತ್ರ
ಬ್ರಿಟಿಷರ ಆಳ್ವಿಕೆ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಭಾರತದ ನೇತಾರರು ಹೋರಾಡಿದ ಸುದೀರ್ಘ ಯುದ್ಧ ಇತಿಹಾಸದಲ್ಲಿ ಅನೇಕ ಮಹನೀಯರು ಕೊಡುಗೆ ನೀಡಿದ್ದಾರೆ. ಭಾರತವು ತನ್ನ ಗತಕಾಲದುದ್ದಕ್ಕೂ ಪೋರ್ಚುಗೀಸರಂತಹ ದುಷ್ಟ ಆಡಳಿತಗಾರರ ಕೈಗೆ ಸಹ ಬಿದ್ದಿತ್ತು. ಇತಿಹಾಸದಲ್ಲಿ ಕೆಲವರ ಹೆಸರುಗಳು ಮಾತ್ರ ಅಜರಾಮರವಾಗಿದೆ.
Published: 08th May 2022 03:13 PM | Last Updated: 08th May 2022 03:13 PM | A+A A-

ರಾಣಿ ಅಬ್ಬಕ್ಕ
ಮಂಗಳೂರು: ಬ್ರಿಟಿಷರ ಆಳ್ವಿಕೆ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಭಾರತದ ನೇತಾರರು ಹೋರಾಡಿದ ಸುದೀರ್ಘ ಯುದ್ಧ ಇತಿಹಾಸದಲ್ಲಿ ಅನೇಕ ಮಹನೀಯರು ಕೊಡುಗೆ ನೀಡಿದ್ದಾರೆ. ಭಾರತವು ತನ್ನ ಗತಕಾಲದುದ್ದಕ್ಕೂ ಪೋರ್ಚುಗೀಸರಂತಹ ದುಷ್ಟ ಆಡಳಿತಗಾರರ ಕೈಗೆ ಸಹ ಬಿದ್ದಿತ್ತು. ಇತಿಹಾಸದಲ್ಲಿ ಕೆಲವರ ಹೆಸರುಗಳು ಮಾತ್ರ ಅಜರಾಮರವಾಗಿದೆ. ಕೆಲವರಿಗೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತು ಪೋರ್ಚುಗೀಸರ ವಿರುದ್ಧ ಹೋರಾಟದಲ್ಲಿ ನೀಡಿದ ಕೊಡುಗೆಗೆ ಸರಿಯಾದ ಮಾನ್ಯತೆಯೇ ಸಿಕ್ಕಿಲ್ಲ.
ಈ ತಪ್ಪನ್ನು ಸರಿಪಡಿಸಲು ದೆಹಲಿ ಮೂಲದ ಲೇಖಕಿ, ಪ್ರಸ್ತುತ ಭಾರತೀಯ ನೌಕಾಪಡೆಯ ಇತಿಹಾಸ ವಿಭಾಗದಲ್ಲಿ ಸಂಶೋಧಕಿಯಾಗಿ ಕೆಲಸ ಮಾಡುತ್ತಿರುವ ತಿಯಾ ಚಟರ್ಜಿ ರಾಣಿ ಅಬ್ಬಕ್ಕ ಕುರಿತ ಸಾಕ್ಷ್ಯಚಿತ್ರ ತಯಾರಿಸಲು ಮುಂದಾಗಿದ್ದಾರೆ.
ಭಾರತ ಸ್ವಾತಂತ್ರ್ಯದ ಮೊದಲ ಹೋರಾಟಗಾರ್ತಿ ಎಂಬ ಬಿರುದನ್ನು ರಾಣಿ ಅಬ್ಬಕ್ಕ ಹೊಂದಿದ್ದಾರೆ. ರಾಣಿ ಅಬ್ಬಕ್ಕರ ಜೀವನಚರಿತ್ರೆಯನ್ನು ದಾಖಲಿಸಲು ಭಾರತದ ಕಡಲ ಇತಿಹಾಸದ ಪ್ರಿಸ್ಮ್ ಮೂಲಕ ಮುಂದಾಗಿದ್ದಾರೆ. ಲಾಭದಾಯಕ ಸಾಗರೋತ್ತರ ವ್ಯಾಪಾರದಲ್ಲಿ ತೊಡಗಿರುವ ನಾವಿಕರ ದೇಶವಾಗಿದ್ದಾಗ ಭಾರತದಲ್ಲಿ ಸಾಂಸ್ಕೃತಿಕ ಸಮ್ಮಿಲನಕ್ಕೆ ಹೇಗೆ ಕಾರಣವಾಯಿತು ಎಂಬುದನ್ನು ಸಹ ಈ ಸಾಕ್ಷ್ಯಚಿತ್ರ ತೋರಿಸುತ್ತದೆ.
ತಿಯಾ ಚಟರ್ಜಿ ಎರಡು ವರ್ಷಗಳ ಹಿಂದೆ ಸಮುದ್ರ ಸಂಶೋಧನೆಗಾಗಿ ಮಂಗಳೂರಿಗೆ ಬಂದಿದ್ದರು. ಅಲ್ಲಿಂದ ಇಂಗ್ಲಿಷ್ ಸಾಕ್ಷ್ಯಚಿತ್ರಕ್ಕಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಭಾರತದಲ್ಲಿನ ಪರಂಪರೆಯು ಮೂರ್ತ ಮತ್ತು ಅಮೂರ್ತ ಎರಡೂ ವಿಸ್ತಾರವಾಗಿದೆ. ನಿರಾಸಕ್ತಿ ಮತ್ತು ಮೆಚ್ಚುಗೆಯ ಕೊರತೆಯ ಕರಾಳ ಮೋಡಗಳು ಅವುಗಳ ಅಸ್ತಿತ್ವಕ್ಕೆ ಧಕ್ಕೆ ತರುತ್ತವೆ ಎಂದು ಬೇಸರದಿಂದ ಹೇಳುತ್ತಾರೆ ತಿಯಾ ಚಟರ್ಜಿ.
ಆರಂಭದಲ್ಲಿ, ತಿಯಾ ಪುಸ್ತಕ ಬರೆಯಲು ನಿರ್ಧರಿಸಿದ್ದರಂತೆ. ಆದರೆ ನಂತರ ಸಾಕ್ಷ್ಯಚಿತ್ರ ತಯಾರಿಸಲು ಮುಂದಾದರು. ಬೃಹದಾಕಾರದ ಪುಸ್ತಕಗಳಿಗಿಂತ ಈಗ ಸಾರ್ವಜನಿಕರು ತಮ್ಮ ಜೀವನಾಧಾರಿತ ಸಾಕ್ಷ್ಯಚಿತ್ರಗಳನ್ನು ಇಷ್ಟಪಡುತ್ತಾರೆ. 1969 ರ ಬೇಸಿಗೆಯಲ್ಲಿ ಕಪ್ಪು ಇತಿಹಾಸ, ಸಂಸ್ಕೃತಿ ಮತ್ತು ಫ್ಯಾಶನ್ ಅನ್ನು ಆಚರಿಸುವ ಮಹಾಕಾವ್ಯದ ಘಟನೆಯ ಮೇಲೆ ಬೆಳಕು ಚೆಲ್ಲಿದ್ದಕ್ಕಾಗಿ ಈ ವರ್ಷ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದ ರವೀಂದ್ರನಾಥ ಟ್ಯಾಗೋರ್ ಅವರ ಕುರಿತು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ ಖ್ಯಾತ ಚಲನಚಿತ್ರ ನಿರ್ಮಾಪಕ ಸತ್ಯಜಿತ್ ರೇ ಅವರಿಂದ 'ಸಮ್ಮರ್ ಆಫ್ ಸೋಲ್ಸ್' ವರೆಗೆ, ಆಡಿಯೋವಿಶುಯಲ್ ಇತಿಹಾಸವನ್ನು ಚಿತ್ರಿಸುವ ಮಾಧ್ಯಮವು ವರ್ಷಗಳಲ್ಲಿ ಹೆಚ್ಚು ಶಕ್ತಿಶಾಲಿಯಾಗಿದೆ ಎನ್ನುತ್ತಾರೆ ತಿಯಾ.
ಚಟರ್ಜಿಯವರ ಸಾಕ್ಷ್ಯಚಿತ್ರವು ಸಂಶೋಧನೆ, ಮೌಖಿಕ ಇತಿಹಾಸ ಮತ್ತು ಪ್ರಾಧ್ಯಾಪಕರ ಸಂದರ್ಶನಗಳನ್ನು ಆಧರಿಸಿದೆ. ಮಂಗಳೂರಿನ ಉಳ್ಳಾಲದ ರಾಣಿ ಅಬ್ಬಕ್ಕ 16 ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ್ದರು. ಉಳ್ಳಾಲದ ಅಭಿವೃದ್ಧಿ ಹೊಂದುತ್ತಿರುವ ಸಣ್ಣ ಬಂದರು ಅರಬ್ಬರು ಮತ್ತು ಪರ್ಷಿಯನ್ನರೊಂದಿಗೆ ವ್ಯಾಪಾರ ಸಂಪರ್ಕವನ್ನು ಹೊಂದಿತ್ತು. ಎಲ್ಲರೂ ಸಮಾನರು ಎಂದು ಪರಿಗಣಿಸುವ ಆಡಳಿತವನ್ನು ಹೊಂದಿತ್ತು. ಇಂತಹ ಅಬ್ಬಕ್ಕನ ಕುರಿತು ಸುಂದರ ಸಾಕ್ಷ್ಯಚಿತ್ರ ತಯಾರಾಗುತ್ತಿದೆ. ಸಂಶೋಧನೆಯ ಸಮಯದಲ್ಲಿ, ಚಟರ್ಜಿಯವರು ಪ್ರಾಥಮಿಕವಾಗಿ ಪೋರ್ಚುಗೀಸ್ ಮತ್ತು ಇಟಾಲಿಯನ್ ಮೂಲಗಳಿಂದ ಮತ್ತು ಕನ್ನಡದಲ್ಲಿ ಮಾಹಿತಿಯನ್ನು ಪಡೆದಿದ್ದಾರೆ.
ಕೆಚ್ಚೆದೆಯ ಹೋರಾಟಗಾರ್ತಿ, ಆಡಳಿತಗಾರ್ತಿ ರಾಣಿ ಅಬ್ಬಕ್ಕರ ಇತಿಹಾಸವನ್ನು ಮರುಶೋಧಿಸುವುದು ಮತ್ತು ಮೌಖಿಕ ಸಂಪ್ರದಾಯಗಳು ಮತ್ತು ಐತಿಹಾಸಿಕ ಅವಶೇಷಗಳ ಆಧಾರದ ಮೇಲೆ ನಿರೂಪಣೆಯನ್ನು ಮಾಡುವುದು ಸಾಕ್ಷ್ಯಚಿತ್ರದ ಉದ್ದೇಶವಾಗಿದೆ.
ಕಳೆದ ನವೆಂಬರ್ನಲ್ಲಿ ಚಿತ್ರೀಕರಣ ಪೂರ್ಣಗೊಂಡಿದ್ದು, 95 ನಿಮಿಷಗಳ ಅವಧಿಯ ‘ರಾಣಿ ಅಬ್ಬಕ್ಕ-ದಿ ಇನ್ಡೋಮಿಟಬಲ್ ಸ್ಪಿರಿಟ್ ಆಫ್ ತುಳುನಾಡು’ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಯಂಗ್ ಇಂಡಿಯನ್ಸ್ ವತಿಯಿಂದ ನಿನ್ನೆ ಶನಿವಾರ ಮಂಗಳೂರಿನಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಅವರ ಸಮ್ಮುಖದಲ್ಲಿ ಆಯೋಜಿಸಲಾಗಿತ್ತು.