social_icon
  • Tag results for Karnataka Floods

ಅಪಾರ್ಟ್ ಮೆಂಟ್ ಮಾಲೀಕರ ಮನವಿ: ಬಿಬಿಎಂಪಿ ಒತ್ತುವರಿ ತೆರವು ಪ್ರಕ್ರಿಯೆಗೆ ಹೈಕೋರ್ಟ್ ತಡೆ!

ಬೆಂಗಳೂರು ಭಾರಿ ಮಳೆ, ಪ್ರವಾಹದ ಬಳಿಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಡೆಸುತ್ತಿರುವ ಒತ್ತುವರಿ ತೆರವು ಪ್ರಕ್ರಿಯೆಗೆ ಹೈಕೋರ್ಟ್ ತಡೆ ನೀಡಿದೆ.

published on : 21st September 2022

ಮೂಲಭೂತ ಸೌಕರ್ಯ ಸಮಸ್ಯೆ, ಒತ್ತುವರಿ ತೆರವು ಭೀತಿ: ಸಿಲಿಕಾನ್ ಸಿಟಿಯಿಂದ ಖಾಸಗಿ ಕಂಪನಿಗಳ ಕಾಲು ತೆಗೆತ: ಇಂಡಿಯಾ ಇಂಕ್  ಆತಂಕ!

ಪ್ರವಾಹ ಮತ್ತು ಇತ್ತೀಚಿನ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆಯಂತಹ ಘಟನೆಗಳಿಂದಾಗಿ ಬೆಂಗಳೂರಿನಲ್ಲಿರುವ ಖಾಸಗಿ ಕಂಪನಿಗಳು ನಗರದಿಂದ ಹೊರಗೆ ಹೋಗುವ ಅಪಾಯವಿದೆ ಎಂದು ಇಂಡಿಯಾ ಇಂಕ್ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

published on : 19th September 2022

ಚನ್ನಪಟ್ಟಣ: ಭಾರಿ ಮಳೆ, ಪ್ರವಾಹಕ್ಕೆ ಮುಳುಗಿದ ಶಾಲೆ; ದೇವಸ್ಥಾನದಲ್ಲಿ ಅಕ್ಷಾರಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು!

ರಾಮನಗರ ಜಿಲ್ಲೆಯಲ್ಲಿ ಭಾರೀ ಮಳೆ ಸುರಿದು ತತ್ತರಿಸಿ ಮೂರು ವಾರಗಳೇ ಕಳೆದರೂ, ಹಲವು ಪ್ರದೇಶಗಳು ಈಗಲೂ ಜಲಾವೃತವಾಗಿವೆ. ಭಾರಿ ಮಳೆ, ಪ್ರವಾಹಕ್ಕೆ ಸರ್ಕಾರಿ ಶಾಲೆಯೊಂದು ಮುಳುಗಿದ್ದು, ವಿದ್ಯಾರ್ಥಿಗಳು ಬೇರೆ ಮಾರ್ಗವಿಲ್ಲದೇ ಸ್ಥಳೀಯ ದೇವಸ್ಥಾನದಲ್ಲಿ ಪಾಠ ಕೇಳುವಂತಾಗಿದೆ.

published on : 19th September 2022

ಮಹಾಮಳೆ: ನೀರು ಕಡಿಮೆಯಾದರೂ ಮಹದೇವಪುರ ನಿವಾಸಿಗಳಿಗೆ ಈಗ ಸೋಂಕಿನ ಭೀತಿ!

ಮಹದೇವಪುರದಲ್ಲಿ ದಾಖಲೆ ಮಳೆ ಸುರಿದು ಹಲವು ಮನೆಗಳಿಗೆ ನೀರು ನುಗ್ಗಿದ್ದು, ಇದೀಗ ಕಲುಷಿತಗೊಂಡಿರುವ ಬೆಳ್ಳಂದೂರು ಕೆರೆಯ ಚರಂಡಿ ನೀರು ಹಾಗೂ ಚರಂಡಿಗಳ ಕೊಳಚೆಯಿಂದ ಹೊಸ ಸೋಂಕು ಹರಡುವ ಭೀತಿ ಇಲ್ಲಿನ ನಿವಾಸಿಗಳಿಗೆ ಎದುರಾಗಿದೆ. 

published on : 11th September 2022

ಬೆಂಗಳೂರು 'ಮಹಾ' ಮಳೆಗೆ ಕೊನೆಗೂ ಕಾರಣ ಕಂಡು ಹಿಡಿದ ವಿಜ್ಞಾನಿಗಳು..!! ಏನು ಗೊತ್ತಾ?

ಕಳೆದೊಂದು ತಿಂಗಳಿನಿಂದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಹಾಮಳೆಗೆ ಕೊನೆಗೂ ವಿಜ್ಞಾನಿಗಳು ಕಾರಣ ಕಂಡುಹಿಡಿದಿದ್ದಾರೆ.

published on : 9th September 2022

ಭಾರೀ ಮಳೆ ಅವಾಂತರ: 'ಭಾರತದ ಯಾವುದೇ ನಗರವೂ ಹೊರತಾಗಿಲ್ಲ'; ಬೆಂಗಳೂರು ಬೆನ್ನಿಗೆ ನಿಂತ ತೆಲಂಗಾಣ ಸಚಿವ ಕೆಟಿಆರ್

ಕಳೆದೊಂದು ತಿಂಗಳಿನಿಂದ ಸುರಿಯುತ್ತಿರುವ ಭಾರಿ ಮಳೆ ಮತ್ತು ಅದರ ಸಂಬಂಧಿತ ಅವಾಂತರಗಳು ಸಿಲಿಕಾನ್ ಸಿಟಿ ಎಂಬ ಖ್ಯಾತಿ ಪಡೆದಿದ್ದ ಬೆಂಗಳೂರಿಗೆ ಕುಖ್ಯಾತಿ ತರುತ್ತಿರುವ ಹೊತ್ತಿನಲ್ಲೇ ತೆಲಂಗಾಣದ ಸಚಿವ ಕೆಟಿ ರಾಮಾರಾವ್ ಅವರು ಬೆಂಗಳೂರಿನ ಬೆನ್ನಿಗೆ ನಿಂತಿದ್ದಾರೆ.

published on : 6th September 2022

51 ವರ್ಷಗಳಲ್ಲಿ 2ನೇ ದಾಖಲೆಯ ಗರಿಷ್ಠ ಮಳೆ: ಸೆಪ್ಟೆಂಬರ್‌ ಆರಂಭದಲ್ಲೇ 709 ಮಿ.ಮೀ ವರ್ಷಧಾರೆ!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಲವು ಅವಾಂತರಗಳನ್ನು ಸೃಷ್ಟಿ ಮಾಡುತ್ತಿರುವಂತೆಯೇ ಈ ಹಿಂದಿನ ದಾಖಲೆಗಳನ್ನೂ ಕೂಡ ಮುರಿಯುತ್ತಾ ಸಾಗಿದೆ.

published on : 6th September 2022

ಸಿಲಿಕಾನ್ ಸಿಟಿ ಬೆಂಗಳೂರು ಜಲಾವೃತ; ಟ್ರ್ಯಾಕ್ಟರ್‌ನಲ್ಲಿ ಕಚೇರಿಗೆ ಹೊರಟ ಟೆಕ್ಕಿಗಳು!

ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ ಅಬ್ಬರ ಮುಂದುವರೆದಿರುವಂತೆಯೇ ನಗರದ ಬಹುತೇಕ ಭಾಗಗಳು ನೀರಿನಲ್ಲಿ ಜಲಾವೃತವಾಗಿದ್ದು, ಟೆಕಿಗಳು ಟ್ರ್ಯಾಕ್ಟರ್‌ನಲ್ಲಿ ಕಚೇರಿಗೆ ಹೊರಟ ದೃಶ್ಯ ಇದೀಗ ವ್ಯಾಪಕ ಚರ್ಚೆಗೀಡಾಗುತ್ತಿದೆ.

published on : 6th September 2022

ಮಳೆಗೆ ಮನೆಗಳ ಕುಸಿತ: ದೇಗುಲಗಳಲ್ಲಿ ಆಶ್ರಯ ಪಡೆದ ಡಂಬಲ್ ಗ್ರಾಮಸ್ಥರು

ರಾಜ್ಯದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಜನತೆ ತತ್ತರಿಸಿ ಹೋಗಿದ್ದು, ಮನೆ ಕಳೆದುಕೊಂಡು ಇದೀಗ ದೇಗುಲಗಳಲ್ಲಿ ಆಶ್ರಯ ಪಡೆಯುವ ಸ್ಥಿತಿಗೆ ಬಂದಿದ್ದಾರೆ.

published on : 4th September 2022

ದಾಖಲೆ ಬರೆದ ಬೆಂಗಳೂರಿನ ಆಗಸ್ಟ್ ಮಳೆ; 1998ರ ಬಳಿಕ ಅತೀ ಹೆಚ್ಚು ವರ್ಷಧಾರೆ

ಸಿಲಿಕಾನ್ ಸಿಟಿಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಈ ಹಿಂದಿನ ದಾಖಲೆಗಳನ್ನೆಲ್ಲಾ ಹಿಂದಿಕ್ಕಿದ್ದು, ಬೆಂಗಳೂರು ಇತಿಹಾಸದಲ್ಲೇ ಆಗಸ್ಟ್ ತಿಂಗಳಲ್ಲಿ ಸುರಿದ ಅತೀ ಹೆಚ್ಚು ಮಳೆಯಾಗಿದೆ.

published on : 30th August 2022

ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ ಮುನ್ನೆಚ್ಚರಿಕೆ; ಬೆಂಗಳೂರಿನಲ್ಲಿ ಮಳೆ ಮುಂದುವರಿಕೆ ಸಾಧ್ಯತೆ

ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಕಲಬುರ್ಗಿ, ಯಾದಗಿರಿ  ಹಾಗೂ ದಕ್ಷಿಣ ಒಳನಾಡಿನ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿಯಿಂದ ಅತಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

published on : 30th August 2022

ಭಾರಿ ಮಳೆ: ಮಂಗಳವಾರ ಬೆಂಗಳೂರಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರಿ ಮಳೆ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

published on : 30th August 2022

ನಟ, ಸಂಸದ ಜಗ್ಗೇಶ್ ಮನೆಗೆ ನುಗ್ಗಿದ ಮಳೆ ನೀರು, ಗಮನ ಹರಿಸುವಂತೆ ಅಧಿಕಾರಿಗಳಿಗೆ ಮನವಿ

ಬಿಜೆಪಿಯ ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್‌ ಅವರ ಮನೆಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದು, ಈ ಕುರಿತು ಗಮನ ಹರಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಗ್ಗೇಶ್ ಮನವಿ ಮಾಡಿದ್ದಾರೆ.

published on : 29th August 2022

ಕೊಪ್ಪಳ: ವಾರದಿಂದ ಪ್ರವಾಹ ನಡುಗಡ್ಡೆಯಲ್ಲಿ ಸಿಲುಕಿದ್ದ ಕುರಿಗಾಹಿ, ಕುರಿಗಳ ರಕ್ಷಣೆ

ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರೆದಿರುವಂತೆಯೇ ನದಿಗಳು ಉಕ್ಕಿ ಹರಿಯುತ್ತಿದ್ದು ಅತ್ತ ಕೊಪ್ಪಳದಲ್ಲಿ ಕುರಿ ಕಾಯಲು ಹೋಗಿ ಒಂದು ವಾರದಿಂದ ಪ್ರವಾಹಕ್ಕೆ ಸಿಲುಕಿದ್ದ ಕುರಿಗಾಹಿಗಳನ್ನು ಮತ್ತು ನೂರಾರು ಕುರಿಗಳನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

published on : 13th August 2022

ಕಾಲು ಸಂಕ ದಾಟುವಾಗ ಕಾಲು ಜಾರಿ ನೀರಿಗೆ ಬಿದ್ದಿದ್ದ ವಿದ್ಯಾರ್ಥಿನಿ ಸನ್ನಿಧಿ ಮೃತದೇಹ ಪತ್ತೆ

ಕಾಲು ಸಂಕ ದಾಟುವಾಗ ಕಾಲು ಜಾರಿ ನೀರಿಗೆ ಬಿದ್ದಿದ್ದ ವಿದ್ಯಾರ್ಥಿನಿ ಸನ್ನಿಧಿ ಮೃತದೇಹ ಕೊನೆಗೂ ಪತ್ತೆಯಾಗಿದೆ.

published on : 10th August 2022
1 2 > 

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9