- Tag results for Sandalwood
![]() | ಫಸ್ಟ್ ನೈಟ್ ವಿತ್ ದೇವ: ಪ್ರಥಮ್ ನಟನೆಯ ಚಿತ್ರದ ಮೂಲಕ ಕನ್ನಡಕ್ಕೆ ಮಿಸ್ ಇಂಡಿಯಾ ರನ್ನರ್ ಅಪ್ ಪದಾರ್ಪಣೆ!ಬಿಗ್ ಬಾಸ್ ಕನ್ನಡ ಸೀಸನ್ 4ರ ವಿಜೇತ ನಟ ಪ್ರಥಮ್ ಇದೇ ತಿಂಗಳು ಮದುವೆಯಾಗುತ್ತಿದ್ದಾರೆ. ಇದರೊಂದಿಗೆ ತಮ್ಮ ಮುಂದಿನ ಯೋಜನೆಯಾದ 'ಫಸ್ಟ್ ನೈಟ್ ವಿತ್ ದೇವ' ನವೆಂಬರ್ 16 ರಂದು ಸೆಟ್ಟೇರಲಿದೆ. ಈ ಸಿನಿಮಾದ ಮೂಲಕ ಮಿಸ್ ಇಂಡಿಯಾದಲ್ಲಿ ಭಾಗವಹಿಸಿದ್ದ ಮಾನ್ಯ ಸಿಂಗ್ ಅವರು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. |
![]() | ಅಭಿಷೇಕ್ ಅಂಬರೀಶ್ ನಟನೆಯ 'ಬ್ಯಾಡ್ ಮ್ಯಾನರ್ಸ್' ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ನಿರ್ದೇಶಕ ಸೂರಿ ಅವರ ಮುಂಬರುವ ಚಿತ್ರ 'ಬ್ಯಾಡ್ ಮ್ಯಾನರ್ಸ್' ನವೆಂಬರ್ 24 ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಚರಣ್ ರಾಜ್ ಸಂಗೀತ ಸಂಯೋಜಿಸಿರುವ ಚಿತ್ರದ ಹಾಡುಗಳಿಗೆ ಈಗಾಗಲೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನವೆಂಬರ್ 12 ರಂದು ಅದ್ಧೂರಿ ಸಮಾರಂಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ. |
![]() | ಯೋಗರಾಜ್ ಭಟ್ ನಿರ್ದೇಶನದ ಗರಡಿ ಚಿತ್ರಕ್ಕೆ ಯಶಸ್ ಸೂರ್ಯ ಆಯ್ಕೆಯಾಗಿದ್ದೇಗೆ; ನಟ ಹೇಳಿದ್ದೇನು?ಯುಗ ಯುಗಗಳೇ ಸಾಗಲಿ ಎಂಬ ಸಿನಿಮಾ ಮೂಲಯ ತಮ್ಮ ನಟನಾ ಪಯಣ ಆರಂಭಿಸಿದ ಯಶಸ್ ಸೂರ್ಯ ಅವರು, ತಮ್ಮ 15 ವರ್ಷಗಳ ಪಯಣದಲ್ಲಿ ಸುಮಾರು 23 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಸ್ಟಾರ್ಡಮ್ ಸಾಧಿಸುವ ಗುರಿಯನ್ನು ಹೊಂದಿರುವ ಅವರು, ಯೋಗರಾಜ್ ಭಟ್ ನಿರ್ದೇಶನದ ಗರಡಿ ಚಿತ್ರಕ್ಕೆ ಆಯ್ಕೆಯಾಗಿದ್ದು ಹೇಗೆ ಎಂಬುದರ ಬಗ್ಗೆ ಹೇಳಿದ್ದಾರೆ. |
![]() | ವಿನೋದ್ ಪ್ರಭಾಕರ್ ನಟನೆಯ ನೆಲ್ಸನ್ ಚಿತ್ರಕ್ಕೆ ನಟಿ ಲಿಯೋನಿಲ್ಲಾ ಶ್ವೇತಾ ಡಿಸೋಜಾ ನಾಯಕಿ!ನಟ ವಿನೋದ್ ಪ್ರಭಾಕರ್ ನಟನೆಯ ಗೊಂಬೆಗಳ ಲವ್ ಖ್ಯಾತಿಯ ನಟ ಅರುಣ್ ಕುಮಾರ್ ಇದೀಗ ನಿರ್ದೇಶಕರಾಗಿರುವ ನೆಲ್ಸನ್ ಸಿನಿಮಾ ಸದ್ಯ ನಿರ್ಮಾಣ ಹಂತದಲ್ಲಿದೆ. ವ್ಯಾಪಕ ಹುಡುಕಾಟದ ನಂತರ, ಅವರು ಈಗ ಮಹತ್ವದ ಪಾತ್ರಕ್ಕಾಗಿ ಲಿಯೋನಿಲ್ಲಾ ಶ್ವೇತಾ ಡಿಸೋಜಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ. |
![]() | ಚೀತಾ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ಗೆ ಜೊತೆ ಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ ಜೋಡಿ!ನಟ ಪ್ರಜ್ವಲ್ ದೇವರಾಜ್ ಸದ್ಯ ನೃತ್ಯ ಸಂಯೋಜಕ-ನಿರ್ದೇಶಕ ರಾಜಾ ಕಲೈ ಕುಮಾರ್ ಅವರ ಚೊಚ್ಚಲ ಸಿನಿಮಾ 'ಚೀತಾ' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರವು ಈ ವಾರವಷ್ಟೇ ಸೆಟ್ಟೇರಿದ್ದು, ಇತ್ತೀಚಿನ ಅಪ್ಡೇಟ್ಸ್ ಪ್ರಕಾರ, ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ನಟಿ ಮೇಘಾ ಶೆಟ್ಟಿ ಈಗ ಚಿತ್ರತಂಡ ಸೇರಿಕೊಂಡಿದ್ದಾರೆ. |
![]() | ಪ್ರೇಮದ ಬಗೆಗಿನ ಮಹಿಳೆಯ ದೃಷ್ಟಿಕೋನವೇ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ 'ಮೆಲ್ಲಗೆ' ಹಾಡು: ರಾಜ್ ಬಿ ಶೆಟ್ಟಿಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಸದ್ಯ ಚಿತ್ರತಂಡ ಸಿನಿಮಾದ 'ಮೆಲ್ಲಗೆ' ಶೀರ್ಷಿಕೆಯ ಹಾಡೊಂದನ್ನು ಬಿಡುಗಡೆ ಮಾಡಿದೆ. ರಾಜ್ ಬಿ ಶೆಟ್ಟಿ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ನಟಿ ರಮ್ಯಾ ಅವರ ನಿರ್ಮಾಣ ಸಂಸ್ಥೆಯಾದ ಆ್ಯಪಲ್ ಬಾಕ್ಸ್ ಸ್ಟುಡಿಯೋಸ್ ಮೂಲಕ ರಾಜ್ ಬಿ ಶೆಟ್ಟಿಯವರ ಲೈಟರ್ ಬುದ್ಧ ಫಿಲ್ಮ್ಸ್ ಸಹಯೋಗದೊಂದಿಗೆ ನಿರ್ಮಿಸಲಾಗಿದೆ |
![]() | ವಿನಯ್ ರಾಜ್ಕುಮಾರ್ ನಟನೆಯ, ಸಿಂಪಲ್ ಸುನಿ ನಿರ್ದೇಶನದ 'ಒಂದು ಸರಳ ಪ್ರೇಮ ಕಥೆ' ಶೂಟಿಂಗ್ ಪೂರ್ಣಗಣೇಶ್ ಅಭಿನಯದ ಸಕತ್, ಶರಣ್ ಅಭಿನಯದ ಅವತಾರ ಪುರುಷ ಚಿತ್ರಗಳ ಮೂಲಕ ಎರಡು ಬ್ಯಾಕ್ ಟು ಬ್ಯಾಕ್ ರಿಲೀಸ್ ಮಾಡಿದ್ದ, ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ ಖ್ಯಾತಿಯ ನಿರ್ದೇಶಕ ಸಿಂಪಲ್ ಸುನಿ ಇದೀಗ ತಮ್ಮ ಮುಂದಿನ ಚಿತ್ರವಾದ 'ಒಂದು ಸರಳ ಪ್ರೇಮ ಕಥೆ'ಯ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. |
![]() | ಸಂಜು ವೆಡ್ಸ್ ಗೀತಾ II ಚಿತ್ರದ ಮತ್ತೊಬ್ಬ ನಾಯಕನಾಗಿ ಮೈನಾ ಖ್ಯಾತಿಯ ನಟ ಚೇತನ್ ಆಯ್ಕೆ?ನಿರ್ದೇಶಕ ನಾಗಶೇಖರ್ ತಮ್ಮ ಬಹು ನಿರೀಕ್ಷಿತ ಸಂಜು ವೆಡ್ಸ್ ಗೀತಾ II ಸಿನಿಮಾದ ಕೆಲಸ ಪ್ರಾರಂಭಿಸಿದ್ದಾರೆ. ಈ ಯೋಜನೆಯ ಇತ್ತೀಚಿನ ಅಪ್ಡೇಟ್ಸ್ ಪ್ರಕಾರ, ಸಂಜು ವೆಡ್ಸ್ ಗೀತಾ II ನಲ್ಲಿ ಪ್ರಮುಖ ಪಾತ್ರಕ್ಕಾಗಿ ನಾಗಶೇಖರ್ ಅವರು ಮೈನಾ ಚಿತ್ರಕ್ಕೆ ಹೆಸರುವಾಸಿಯಾದ ನಟ ಚೇತನ್ ಅವರನ್ನು ಬೆಳ್ಳಿತೆರೆಗೆ ಮರಳಿ ಕರೆತರುತ್ತಿದ್ದಾರೆ ಎನ್ನಲಾಗಿದೆ. |
![]() | ಯೋಗರಾಜ್ ಭಟ್ ನಿರ್ದೇಶನದ 'ಗರಡಿ' ಬಗ್ಗೆ ಮನಬಿಚ್ಚಿ ಮಾತನಾಡಿದ ನಟಿ ಸೋನಲ್ ಮೊಂತೆರೋ!ನಟಿ ಸೋನಲ್ ಮೊಂತೆರೋ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಸಿನಿಮಾ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ ನಟಿ ಇದೀಗ ಯೋಗರಾಜ್ ಭಟ್ ನಿರ್ದೇಶನದ ಗರಡಿ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಚಿತ್ರದ ಬಿಡುಗಡೆಗಾಗಿ ಕುತೂಹಲದಿಂದ ಎದುರು ನೋಡುತ್ತಿದ್ದಾರೆ. |
![]() | ಧನುಷ್-ಶ್ರಾವ್ಯಾ ರಾವ್ ನಟನೆಯ ರಾಯಲ್ ಮೆಕ್ ಸಿನಿಮಾ ಬಿಡುಗಡೆಗೆ ಸಿದ್ಧವೃತ್ತಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿರುವ ಧನುಷ್, ಸಿನಿಮಾ ನಿರ್ಮಾಣಕ್ಕೂ ಮುಂದಾಗಿದ್ದಾರೆ. ಇದೀಗ ರಾಯಲ್ ಮೆಕ್ ಎನ್ನುವ ಸಿನಿಮಾದ ಮೂಲಕ ತಮ್ಮ ನಟನೆಗೆ ಇಳಿದಿದ್ದಾರೆ. ಸ್ಕ್ರಿಪ್ಟ್ ಬರೆಯುವುದಷ್ಟೇ ಅಲ್ಲದೆ ಪ್ರಮುಖ ಪಾತ್ರದಲ್ಲೂ ನಟಿಸಿದ್ದಾರೆ. |
![]() | ನಿರ್ದೇಶಕನಾಗುವ ಕನಸು ಹೊತ್ತ ಯುವ ಪ್ರತಿಭೆ ಪಾತ್ರದಲ್ಲಿ ಅನೀಶ್, ಸೆನ್ಸಾರ್ ಪಾಸಾದ 'ಮಾಯಾನಗರಿ'ನಟ ಅನೀಶ್ ನಟನೆಯ, ಇದೇ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿರುವ ಶಂಕರ್ ಆರಾಧ್ಯ ನಿರ್ದೇಶನದ 'ಮಾಯಾನಗರಿ' ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರದ ಬಿಡುಗಡೆಗೆ ಚಿತ್ರತಂಡ ಕುತೂಹಲದಿಂದ ಎದುರುನೋಡುತ್ತಿದೆ. ಈ ಚಿತ್ರವು ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. |
![]() | ಎಸ್ತಾರ್ ನರೋನಾ ಚೊಚ್ಚಲ ನಿರ್ದೇಶನದ 'ದಿ ವೆಕೆಂಟ್ ಹೌಸ್' ಬಿಡುಗಡೆ ದಿನಾಂಕ ಘೋಷಣೆನಾವಿಕ, ಅತಿರಥ, ನುಗ್ಗಿಕಾಯಿ, ಲೋಕಲ್ ಟ್ರೇನ್ ಮತ್ತು ಲಂಕೆಯಂತಹ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿರುವ ಎಸ್ತಾರ್ ನರೋನಾ ಇದೀಗ ದಿ ವೆಕೆಂಟ್ ಹೌಸ್ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. |
![]() | 'ಡೆವಿಲ್-ದಿ ಹೀರೋ' ಸಂಪೂರ್ಣ ಮಾಸ್ ಎಂಟರ್ಟೈನರ್ ಚಿತ್ರ; ಡಿ ಬಾಸ್ ಅಭಿಮಾನಿಗಳಿಗೆ 'ಹಬ್ಬ': ಪ್ರಕಾಶ್ ವೀರ್ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಬಿಡುಗಡೆಗೂ ಮೊದಲೇ ಮತ್ತೊಂದು ಸಿನಿಮಾ ಸೆಟ್ಟೇರಲು ಸಜ್ಜಾಗಿದೆ. |
![]() | ಯಶಸ್ಸು ಸಿಕ್ಕಾಗ ಎಲ್ಲರೂ ಜೊತೆಗಿರುತ್ತಾರೆ, ಸೋಲಿನಲ್ಲಿ ಒಂಟಿ: ನಟ ಬಿ.ಸಿ. ಪಾಟೀಲ್ವೃತ್ತಿಯಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಬಿ.ಸಿ.ಪಾಟೀಲ್, ರಾಜಕೀಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರೂ ನಟರಾಗಿ ಜನಪ್ರಿಯರಾಗಿದ್ದಾರೆ. ಕೌರವ ಚಿತ್ರದಲ್ಲಿನ ತಮ್ಮ ಅಪ್ರತಿಮ ಪಾತ್ರಕ್ಕಾಗಿ ಪ್ರಸಿದ್ಧರಾಗಿದ್ದಾರೆ. ಅವರು ತಮ್ಮ ವೃತ್ತಿ ಮತ್ತು ನಟನೆ ಎರಡನ್ನೂ ಸಮರ್ಥವಾಗಿ ನಿಭಾಯಿಸಿದ್ದಾರೆ |
![]() | ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ಚಿತ್ರಕ್ಕೆ ಸದ್ದಿಲ್ಲದೆ ಮುಹೂರ್ತ!ಸ್ಯಾಂಡಲ್ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹುತೇಕ 'ಕಾಟೇರಾ' ಚಿತ್ರೀಕರಣ ಪೂರ್ಣಗೊಳಿಸುತ್ತಿದ್ದಂತೆ, ಮತ್ತೊಂದು ಸಿನಿಮಾಗೆ ಸಜ್ಜಾಗುತ್ತಿದ್ದಾರೆ. |