- Tag results for Sandalwood
![]() | 'TRP ರಾಮ' ಮೂಲಕ ಬೆಳ್ಳಿತೆರೆಗೆ ಮಹಾಲಕ್ಷ್ಮಿ; ಎರಡನೇ ಇನಿಂಗ್ಸ್ ಬಗ್ಗೆ ಮನಬಿಚ್ಚಿ ಮಾತನಾಡಿದ ನಟಿ1980ರ ದಶಕದ ಆರಂಭದಿಂದ 1991 ರವರೆಗೆ ಚಿತ್ರರಂಗದಲ್ಲಿ ಗಮನಾರ್ಹ ಹೆಸರು ಮಾಡಿದ್ದ ನಟಿ ಮಹಾಲಕ್ಷ್ಮಿ ಅವರು 30 ವರ್ಷಗಳ ಸುದೀರ್ಘ ವಿರಾಮದ ನಂತರ ಇದೀಗ 'TRP ರಾಮ' ಚಿತ್ರದ ಮೂಲಕ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. |
![]() | ರಮಣೀಯ ಬಾಬಾ ಬುಡನ್ ಗಿರಿ ಬೆಟ್ಟಗಳಲ್ಲಿ ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಗೌರಿ' ಚಿತ್ರದ ಚಿತ್ರೀಕರಣಇಂದ್ರಜಿತ್ ಲಂಕೇಶ್ ಅವರು ತಮ್ಮ ಮುಂಬರುವ ನಿರ್ದೇಶನದ ಗೌರಿ ಚಿತ್ರದ ಮೂಲಕ ತಮ್ಮ ಮಗ ಸಮರ್ಜಿತ್ ಅನ್ನು ಸ್ಯಾಂಡಲ್ವುಡ್ಗೆ ಪರಿಚಯಿಸುತ್ತಿದ್ದಾರೆ. ಇದೀಗ ಒಂದು ವೇಳಾಪಟ್ಟಿಯಂತೆ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ನೈಜ ಘಟನೆಗಳನ್ನು ಆಧರಿಸಿದ ಈ ಚಿತ್ರದಲ್ಲಿ ರಮಣೀಯ ಬಾಬಾ ಬುಡನ್ ಗಿರಿ ಬೆಟ್ಟಗಳಲ್ಲಿ ಕೆಲವು ಪ್ರಮುಖ ಕ್ಷಣಗಳನ್ನು ಸೆರೆಹಿಡಿದಿದ್ದಾರೆ. |
![]() | Kannada Rajyotsava: ನಮ್ಮ ಪರಂಪರೆ, ನಮ್ಮ ಹೆಮ್ಮೆಕರ್ನಾಟಕ ರಾಜ್ಯ ರಚನೆಯ 68ನೇ ವಾರ್ಷಿಕೋತ್ಸವದಂದು, ಸ್ಯಾಂಡಲ್ವುಡ್ನ ಕನ್ನಡಿಗರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಕನ್ನಡ ರಾಜ್ಯೋತ್ಸವ ದಿನದ ಮಹತ್ವದ ಬಗ್ಗೆ ಮಾತನಾಡಿದ್ದಾರೆ. |
![]() | ಪ್ರಜ್ವಲ್ ದೇವರಾಜ್ ನಟನೆಯ, ರಾಜಾ ಕಲೈ ಕುಮಾರ್ ನಿರ್ದೇಶನದ ಚಿತ್ರದ ಟೈಟಲ್ ರಿವೀಲ್!ಖ್ಯಾತ ನೃತ್ಯ ನಿರ್ದೇಶಕ ರಾಜಾ ಕಲೈ ಕುಮಾರ್ ಅವರು ಪ್ರಜ್ವಲ್ ದೇವರಾಜ್ ಅಭಿನಯದ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ ಎಂದು ಈ ಹಿಂದೆ ವರದಿ ಮಾಡಲಾಗಿತ್ತು. ಇದೀಗ ಚಿತ್ರಕ್ಕೆ 'ಚೀತಾ' ಎಂದು ಹೆಸರಿಡಲಾಗಿದೆ ಎಂದು ಚಿತ್ರತಂಡ ಘೋಷಿಸಿದೆ. |
![]() | ಕಾಂತಾರ ಖ್ಯಾತಿಯ ಮಂಜುನಾಥ್ ನಾಗಬಾ ನಿರ್ದೇಶನದ 'ಗರುಡ ಪುರಾಣ' ಬಿಡುಗಡೆಗೆ ದಿನಾಂಕ ಫಿಕ್ಸ್ಮಂಜುನಾಥ್ ಬಿ ನಾಗಬಾ ಬರೆದು ನಿರ್ದೇಶಿಸಿರುವ 'ಗರುಡ ಪುರಾಣ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ನವೆಂಬರ್ 3 ರಂದು ಬಿಡುಗಡೆಯಾಗಲಿದೆ. ಟಿವಿ ಧಾರಾವಾಹಿಗಳು ಮತ್ತು ರತ್ನನ್ ಪ್ರಪಂಚ ಮತ್ತು ಕಬ್ಜ ಮುಂತಾದ ಚಿತ್ರಗಳಿಗೆ ಆನ್ಲೈನ್ ಫಿಲ್ಮ್ ಎಡಿಟಿಂಗ್ ಡೆಸ್ಕ್ನಲ್ಲಿ ಕೆಲಸ ಮಾಡಿದ ಅನುಭವವನ್ನು ರಂಗಭೂಮಿ ಕಲಾವಿದ ಮಂಜುನಾಥ್ ಹೊಂದಿದ್ದಾರೆ. |
![]() | ಸಾಕು ನಾಯಿ ದಾಳಿ ಆರೋಪ: ನಟ ದರ್ಶನ್ ತೂಗುದೀಪ ವಿರುದ್ಧ ಮಹಿಳೆ ಪೊಲೀಸ್ ದೂರುಸಾಕು ನಾಯಿ ದಾಳಿ ಆರೋಪದ ಮೇರೆಗೆ ಖ್ಯಾತ ನಟ ತೂಗುದೀಪ ದರ್ಶನ್ (Darshan Thoogudeepa) ಅವರ ವಿರುದ್ಧ ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. |
![]() | ಜಿಯೋ MAMI ಚಿತ್ರೋತ್ಸವದಲ್ಲಿ ವರ್ಲ್ಡ್ ಪ್ರೀಮಿಯರ್ ಆಗಲಿದೆ ನಟ ರಕ್ಷಿತ್ ಶೆಟ್ಟಿ ನಿರ್ಮಾಣದ 'ಮಿಥ್ಯ' ಸಿನಿಮಾಅಕ್ಟೋಬರ್ 27ರಿಂದ ನವೆಂಬರ್ 5 ರವರೆಗೆ ನಡೆಯಲಿರುವ ಜಿಯೋ ಎಂಎಎಂಐ ಮುಂಬೈ ಫಿಲ್ಮ್ ಫೆಸ್ಟಿವಲ್ನಲ್ಲಿ ವರ್ಲ್ಡ್ ಪ್ರೀಮಿಯರ್ ಆಗುತ್ತಿರುವ 250 ಚಲನಚಿತ್ರಗಳಲ್ಲಿ ನಟ ರಕ್ಷಿತ್ ಶೆಟ್ಟಿಯವರ ಪರಂವಃ ಪಿಕ್ಚರ್ಸ್ ನಿರ್ಮಿಸಿರುವ 'ಮಿಥ್ಯ' ಸಿನಿಮಾ ಕೂಡ ಸೇರಿದೆ. |
![]() | ಮತ್ತೆ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ನಟ ಕಿಶೋರ್; ಗನ್ಸ್ ಅಂಡ್ ರೋಸಸ್ ಚಿತ್ರತಂಡ ಸೇರ್ಪಡೆ!ಕನ್ನಡ ಚಿತ್ರರಂಗದಲ್ಲಿ ಸುಮಾರು ವರ್ಷಗಳಿಂದ ಹೆಸರಾಂತ ಚಿತ್ರಗಳಿಗೆ ಕಥೆ ಬರೆದಿರುವ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ಅಭಿನಯದ ಚೊಚ್ಚಲ ಸಿನಿಮಾ 'ಗನ್ ಅಂಡ್ ರೋಸಸ್' ಚಿತ್ರತಂಡಕ್ಕೆ ದಕ್ಷಿಣ ಭಾರತದ ನಟ ಕಿಶೋರ್ ಸೇರಿಕೊಂಡಿದ್ದಾರೆ. ಎಚ್ಎಸ್ ಶ್ರೀನಿವಾಸ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಕಿಶೋರ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. |
![]() | ಕಿರಣ್ ನಾರಾಯಣ್ ಅಭಿನಯದ 'ಸ್ನೇಹರ್ಷಿ' ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್!ರಂಗಭೂಮಿ ಕಲಾವಿದ ಕಿರಣ್ ನಾರಾಯಣ್ ನಾಯಕನಾಗಿ, ನಿರ್ದೇಶಕನಾಗಿ ಹಾಗೂ ನಿರ್ಮಾಪಕನಾಗಿಯೂ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅವರ ಚೊಚ್ಚಲ ಸಿನಿಮಾ 'ಸ್ನೇಹರ್ಷಿ' ವಿವಿಧ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಇದೀಗ ನವೆಂಬರ್ 24 ರಂದು ರಾಜ್ಯದಾದ್ಯಂತ ಬಿಡುಗಡೆಗೆ ಸಜ್ಜಾಗಿದೆ. |
![]() | ವಿನೋದ್ ಪ್ರಭಾಕರ್ ಅಭಿನಯದ ಚಿತ್ರದ ಶೀರ್ಷಿಕೆ ಅನಾವರಣ; 'ನೆಲ್ಸನ್' ಟೀಸರ್ ರಿಲೀಸ್ ಮಾಡಿದ ಉಪೇಂದ್ರಗೊಂಬೆಗಳ ಲವ್ ಖ್ಯಾತಿಯ ನಟ ಅರುಣ್ ಕುಮಾರ್ ಅವರು ಇದೇ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದು, ನಟ ವಿನೋದ್ ಪ್ರಭಾಕರ್ ಅಭಿನಯದ ಮುಂಬರುವ ಚಿತ್ರಕ್ಕೆ 'ನೆಲ್ಸನ್' ಎಂದು ಹೆಸರಿಡಲಾಗಿದೆ. |
![]() | ಅನೀಶ್ ತೇಜೇಶ್ವರ್, ಮಿಲನಾ ನಾಗರಾಜ್ ನಟನೆಯ 'ಆರಾಮ್ ಅರವಿಂದ ಸ್ವಾಮಿ' ಸಿನಿಮಾ ಚಿತ್ರೀಕರಣ ಪೂರ್ಣಆರಾಮ್ ಅರವಿಂದ್ ಸ್ವಾಮಿ ಚಿತ್ರದ ಶೂಟಿಂಗ್ ಮುಗಿದಿದ್ದು, ಸದ್ಯ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಅಭಿಷೇಕ್ ಶೆಟ್ಟಿ ನಿರ್ದೇಶನ ಈ ಚಿತ್ರದಲ್ಲಿ ಅನೀಶ್ ತೇಜೇಶ್ವರ್ (ನಮ್ ಏರಿಯಾಲ್ ಒಂದಿನ), ಕೌಸಲ್ಯ ಸುಪ್ರಜಾ ರಾಮ ಖ್ಯಾತಿಯ ಮಿಲನ್ ನಾಗರಾಜ್ ಮತ್ತು ಹೃತಿಕಾ ಶ್ರೀನಿವಾಸ್ ಪ್ರಮುಖ ಪಾತ್ರಗಳಲ್ಲಿದ್ದಾರೆ. |
![]() | ಮಂಜು ಮಸ್ಕಲ್ ಮಟ್ಟಿ ನಿರ್ದೇಶನದ 'ವರಾಹಚಕ್ರ' ಚಿತ್ರದಲ್ಲಿ ನಟಿ ಪ್ರೇಮಾ; ಐವರು ನಾಯಕರು'ಮನಸುಗಳ ಮಾತು ಮಧುರ' ಖ್ಯಾತಿಯ ನಿರ್ದೇಶಕ ಮಂಜು ಮಸ್ಕಲ್ ಮಟ್ಟಿ ಅವರು 'ವರಾಹಚಕ್ರ' ಚಿತ್ರದ ಮೂಲಕ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಬಳ್ಳಾರಿ, ಹಿರಿಯೂರು, ಬೆಂಗಳೂರು, ಚಿತ್ರದುರ್ಗ, ಉತ್ತರ ಪ್ರದೇಶದ ವಾರಣಾಸಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ. |
![]() | ದೊಡ್ಮನೆ ಕುಡಿ ಯುವ ರಾಜಕುಮಾರ್ ಅಭಿನಯದ 'ಯುವ' ಸಿನಿಮಾ ಬಿಡುಗಡೆ ದಿನಾಂಕ ಮುಂದಕ್ಕೆ!ಸಂತೋಷ್ ಆನಂದ್ರಾಮ್ ನಿರ್ದೇಶನದ 'ಯುವ' ಚಿತ್ರದ ಮೂಲಕ ದೊಡ್ಮನೆ ಕುಡಿ ಯುವ ರಾಜ್ಕುಮಾರ್ ಅವರನ್ನು ಸ್ಯಾಂಡಲ್ವುಡ್ಗೆ ಪರಿಚಯಿಸುತ್ತಿರುವ ಪ್ರೊಡಕ್ಷನ್ ಹೌಸ್ ಹೊಂಬಾಳೆ ಫಿಲ್ಮ್ಸ್ ಆರಂಭದಲ್ಲಿ ಡಿಸೆಂಬರ್ 22ರಂದು ಚಿತ್ರವನ್ನು ಬಿಡುಗಡೆ ಮಾಡಲು ಯೋಜಿಸಿತ್ತು. ಈಗ ಯುವ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲು ಹೊಂಬಾಳೆ ಫಿಲ್ಮ್ಸ್ ನಿರ್ಧರಿಸಿದೆ. |
![]() | ಯೋಗರಾಜ್ ಭಟ್ ನಿರ್ದೇಶನದ ಗರಡಿ ಸಿನಿಮಾಗೆ ಯು/ಎ ಪ್ರಮಾಣ ಪತ್ರ; ನವೆಂಬರ್ 10 ರಂದು ತೆರೆಗೆ!ಯೋಗರಾಜ್ ಭಟ್ ಅವರ ಬಹು ನಿರೀಕ್ಷಿತ ಗರಡಿ ಸಿನಿಮಾಗೆ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣಪತ್ರ ಸಿಕ್ಕಿದೆ. ಇದೀಗ ಚಿತ್ರ ನವೆಂಬರ್ 10 ರಂದು ಗ್ರ್ಯಾಂಡ್ ರಿಲೀಸ್ಗೆ ಸಜ್ಜಾಗಿದೆ. ಚಿತ್ರದಲ್ಲಿ ಯಶಸ್ ಸೂರ್ಯ ಮತ್ತು ಸೋನಲ್ ಮೊಂತೆರೋ ಪ್ರಮುಖ ಪಾತ್ರಗಳಲ್ಲಿದ್ದಾರೆ. |
![]() | ನವೆಂಬರ್ 24ಕ್ಕೆ 'ಬ್ಯಾಡ್ ಮ್ಯಾನರ್ಸ್' ಗ್ರ್ಯಾಂಡ್ ರಿಲೀಸ್!ಸೂರಿ ನಿರ್ದೇಶನದ ಅಭಿಷೇಕ್ ಅಂಬರೀಶ್ ಅಭಿನಯದ ಆಕ್ಷನ್ ಥ್ರಿಲ್ಲರ್ ಚಿತ್ರ 'ಬ್ಯಾಡ್ ಮ್ಯಾನರ್ಸ್' ಗ್ರ್ಯಾಂಡ್ ರಿಲೀಸ್'ಗೆ ಸಜ್ಜಾಗಿದೆ. ಕೆಲವು ಅನಿಶ್ಚಿತತೆ ನಂತರ ಚಿತ್ರ ತಯಾರಕರು ಕೊನೆಗೂ ರಿಲೀಸ್ ಡೇಟ್ ಫಿಕ್ಸ್ ಮಾಡಿದ್ದು, ನವೆಂಬರ್ 24 ರಂದು ಥಿಯೇಟರ್ಗಳಲ್ಲಿ ಬರಲಿದೆ ಎಂದು ಖಚಿತಪಡಿಸಿದ್ದಾರೆ. |