- Tag results for Somanna
![]() | ಡಾ. ಅರುಣ್ ಸೋಮಣ್ಣಗೆ ಬಿಜೆಪಿಯಲ್ಲಿ ಸ್ಥಾನ: ತಣ್ಣಗಾಯ್ತು ವಸತಿ ಸಚಿವರ ಅಸಮಾಧಾನ!ವಸತಿ ಮತ್ತು ಮೂಲಸೌಕರ್ಯ ಸಚಿವ ವಿ.ಸೋಮಣ್ಣ ಅವರ ಅಸಮಾಧಾನಕ್ಕೆ ಮದ್ದು ಅರೆದಿರುವ ಬಿಜೆಪಿ, ಅವರ ಪುತ್ರ ಡಾ.ಅರುಣ್ ಸೋಮಣ್ಣ ಅವರನ್ನು ಪಕ್ಷದ ತುಮಕೂರು ಜಿಲ್ಲಾ ಘಟಕ ಉಪಾಧ್ಯಕ್ಷರನ್ನಾಗಿ ನೇಮಿಸಿದೆ. |
![]() | ಬಿಜೆಪಿಯೊಳಗೆ ನನ್ನ ತೇಜೋವಧೆಗೆ ಪ್ರಯತ್ನ,3 ಸುಳ್ಳು ಕೊಲೆ ಪ್ರಕರಣಗಳಲ್ಲಿ ನನ್ನನ್ನು ಸಿಕ್ಕಿಹಾಕಿಸಲು ಪ್ರಯತ್ನಿಸಿದರು, ದೇವರು ನನ್ನ ಕಾಪಾಡಿದರು: ಮತ್ತೆ ಭಾವುಕರಾದ ಸೋಮಣ್ಣಪಕ್ಷದ ಹೈಕಮಾಂಡ್ ಎಲ್ಲಿ ಚುನಾವಣೆಯಲ್ಲಿ ನಿಲ್ಲುವಂತೆ ಹೇಳುತ್ತಾರೋ ಅಲ್ಲಿ ನಿಲ್ಲುತ್ತೇನೆ, ನನ್ನ ಇದುವರೆಗಿನ ಚುನಾವಣಾ ರಾಜಕೀಯದಲ್ಲಿ 2 ಚುನಾವಣೆ ಸೋತಿರಬಹುದು, ಆದರೆ ಸಂಸ್ಕಾರ, ಸಂಸ್ಕೃತಿ, ಸ್ವಾಭಿಮಾನವನ್ನು ಎಂದಿಗೂ ಬಿಟ್ಟುಕೊಟ್ಟಿಲ್ಲ, ಪಕ್ಷ ಟಿಕೆಟ್ ಕೊಟ್ಟರೆ ನಿಲ್ಲುತ್ತೇನೆ ಎಂದು ಇತ್ತೀಚೆಗೆ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಮಗನ ವಿರುದ್ಧ ಸಿಡಿಮಿಡಿಗೊಂಡು ದೆಹ |
![]() | ಬಿಎಸ್ವೈ-ಸೋಮಣ್ಣ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ: ಸಚಿವ ಮುರುಗೇಶ್ ನಿರಾಣಿಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ವಸತಿ ಸಚಿವ ವಿ ಸೋಮಣ್ಣ ನಡುವಿನ ಭಿನ್ನಾಭಿಪ್ರಾಯಗಳ ವದಂತಿಗಳನ್ನು ಸಚಿವ ಮುರುಗೇಶ್ ನಿರಾಣಿ ಅವರು ಶುಕ್ರವಾರ ನಿರಾಕರಸಿದರು. |
![]() | ಸೋಮಣ್ಣ ಬಂಡಾಯಕ್ಕೆ ಸೂತ್ರಧಾರರು ಯಾರು? (ಸುದ್ದಿ ವಿಶ್ಲೇಷಣೆ)-ಯಗಟಿ ಮೋಹನ್ ಯಡಿಯೂರಪ್ಪ ವಿರುದ್ಧ ಸಿಟ್ಟಿಗೆದ್ದ ವಸತಿ ಸಚಿವ ಸೋಮಣ್ಣ ಮೊಳಗಿಸಿರುವ ಬಂಡಾಯದ ಕಹಳೆ ಹಿನ್ನಲೆಯನ್ನು ಅದರಿಡೀ ಪ್ರಕರಣದ ತೆರೆಯಲ್ಲಿ ನಡೆದಿರುವ ವಿದ್ಯಮಾನಗಳನ್ನು ಗಮನಿಸಿದರೆ ಇದು ಇಷ್ಟಕ್ಕೇ ನಿಲ್ಲುವುದಿಲ್ಲ ಎಂಬ ಅಂಶ ಸ್ಪಷ್ಟವಾಗುತ್ತದೆ. |
![]() | ಎಲ್ಲವೂ ಸರಿಹೋಗುತ್ತದೆ, ಯಾರನ್ನೂ ಕಡೆಗಣಿಸುವುದಿಲ್ಲ; ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಗುರಿ: ಬಿ ಎಸ್ ಯಡಿಯೂರಪ್ಪವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ಪಕ್ಷದೊಳಗೆ ನಾಯಕರು ಭಿನ್ನಮತ, ಅಸಮಾಧಾನ ಹೇಳಿಕೆ ನೀಡಿದರೆ, ಅಸಮಾಧಾನದಿಂದ ವರ್ತಿಸಿದರೆ ಅದು ಪಕ್ಷಕ್ಕೆ ಒಳ್ಳೆಯದಲ್ಲ, ಅದನ್ನು ಶಮನಗೊಳಿಸುವ ಪ್ರಯತ್ನವನ್ನು ಹಿರಿಯ ನಾಯಕರು ಮಾಡುತ್ತಿರುತ್ತಾರೆ. |
![]() | ನಾನು ದೆಹಲಿಗೆ ಬಂದ ಕೆಲಸ ಸುಸೂತ್ರವಾಗಿ ನಡೆದಿದೆ: ವಿ ಸೋಮಣ್ಣ; ಬಿಜೆಪಿಯನ್ನು ಅಧಿಕಾರಕ್ಕೆ ತರುವ ಎದೆಗಾರಿಕೆ ಇದೆಯಾ ಎಂದ ವಿಜಯೇಂದ್ರರಾಜ್ಯ ಬಿಜೆಪಿಯಲ್ಲಿ ಲಿಂಗಾಯತ ಧರ್ಮದ ಪ್ರಬಲ ನಾಯಕ ವಸತಿ ಸಚಿವ ವಿ ಸೋಮಣ್ಣ ಅವರ ಅಸಮಾಧಾನದ ನಡೆ, ಹೇಳಿಕೆಗಳು ಬಹು ಚರ್ಚಿತ ವಿಷಯ. ಅದು ಬಿಜೆಪಿಯ ರಾಜಾಹುಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕುಟುಂಬದ ಮೇಲೆಯೇ ಅವರು ನೇರವಾಗಿ ಅಸಮಾಧಾನ ಹೊಂದಿದ್ದಾರೆ ಎಂಬುದು ವಿಶೇಷ. |
![]() | ಮಗನಿಗೆ ಅಸಮಾಧಾನ ಇದ್ದರೆ ಅವನನ್ನು ಕೇಳಿ, ನನಗೂ ವಿಜಯೇಂದ್ರಗೂ ಸಂಬಂಧ ಇಲ್ಲ: ವಿ ಸೋಮಣ್ಣ; ಎಲ್ಲಾ ಸರಿಯಿದೆ ಎಂದ ಬಿ ಎಸ್ ಯಡಿಯೂರಪ್ಪಬೆಂಗಳೂರಿನಲ್ಲಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ಭಾವುಕರಾಗಿ ಮಾತನಾಡುತ್ತಾ ಬೆಂಗಳೂರಿಗೆ ಬಂದ ಆರಂಭ ದಿನಗಳಲ್ಲಿ ತಾವು ಪಟ್ಟ ಕಷ್ಟ, ಜೀವನ, ರಾಜಕೀಯ ಜೀವನದ ಆರಂಭದ ಬಗ್ಗೆ ಮೆಲುಕು ಹಾಕುತ್ತಾ ಭಾವುಕರಾಗಿದ್ದ ಸಚಿವ ವಿ ಸೋಮಣ್ಣ ಇಂದು ಬುಧವಾರ ದೆಹಲಿಗೆ ತೆರಳಿದ್ದಾರೆ. ಅಲ್ಲಿ ಅವರು ವರಿಷ್ಠರನ್ನು ಭೇಟಿ ಮಾಡಲಿದ್ದಾರೆ. |
![]() | ಹಣದ ಆಮಿಷಕ್ಕೆ ಮರುಳಾಗದಿರಿ: ಮತದಾರರಿಗೆ ಸಚಿವ ವಿ.ಸೋಮಣ್ಣ ಮನವಿಹಣದ ಆಮಿಷಕ್ಕೆ ಮರುಳಾಗದಿರಿ ಎಂದು ಮತದಾರರಿಗೆ ವಸತಿ ಸಚಿವ ವಿ.ಸೋಮಣ್ಣ ಅವರು ಮಂಗಳವಾರ ಮನವಿ ಮಾಡಿಕೊಂಡಿದ್ದಾರೆ. |
![]() | ಒಂದು ಚುನಾವಣೆ ಗೆದ್ದ ತಕ್ಷಣ ಮರಿಹುಲಿ ಎಂದು ಕರೆದರೆ ಹೇಗೆ? ನಮ್ಮನ್ನು ತುಳಿಯಲು ಬಂದರೆ ಸುಮ್ಮನಿರಲ್ಲ: ವಿಜಯೇಂದ್ರಗೆ ಅರುಣ್ ಸೋಮಣ್ಣ ವಾರ್ನಿಂಗ್ಪಕ್ಷಕ್ಕೆ ಸೋಮಣ್ಣ ಅವರ ಕೊಡುಗೆ ದೊಡ್ಡದು. ನನ್ನ ತಂದೆಗೆ ಅವಮಾನ ಆದ್ರೆ ಸಹಿಸುವುದಿಲ್ಲ. ಹೀಗಾಗಿ ನಾನು ಮಾತನಾಡಿದ್ದೇನೆ. 2008 ಮತ್ತು 2013 ರ ವಿಧಾನಸಭಾ ಚುನಾವಣೆಯಲ್ಲಿ ಸೋಮಣ್ಣ ಅವರ ಸೋಲಿಗೆ ಕಾರಣರು ಯಾರು? ಈ ಬಗ್ಗೆ ಚರ್ಚೆಗೆ ನಾನು ಸಿದ್ಧನಿದ್ದೇನೆ. |
![]() | ಬಿಜೆಪಿ ತೊರೆಯಲ್ಲ: ಊಹಾಪೋಹಗಳಿಗೆ ತೆರೆ ಎಳೆದ ಸಚಿವ ವಿ. ಸೋಮಣ್ಣಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡಿದರೆ ಸ್ಪರ್ಧಿಸುತ್ತೇನೆ, ಇಲ್ಲದಿದ್ದರೆ ಪಕ್ಷದ ಕೆಲಸ ಮಾಡಿಕೊಂಡು ಹೋಗುತ್ತೇನೆ. ಆದರೆ, ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ ಎಂದು ಸಚಿವ ವಿ.ಸೋಮಣ್ಣ ಅವರು ಸ್ಪಷ್ಟಪಡಿಸಿದ್ದಾರೆ. |
![]() | ವಿ. ಸೋಮಣ್ಣ ಕಾಂಗ್ರೆಸ್ ಸೇರ್ಪಡೆ ವದಂತಿ ಬೆನ್ನಲ್ಲೇ ಫೋಟೋ ವೈರಲ್: ವಸತಿ ಸಚಿವರ ಪ್ರತಿಕ್ರಿಯೆರಾಜ್ಯ ರಾಜಧಾನಿ ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ವಸತಿ ಸಚಿವ ವಿ. ಸೋಮಣ್ಣ ಅವರು ಕಾಂಗ್ರೆಸ್ ಸೇರ್ಪಡೆ ಆಗುತ್ತಾರೆ ಎಂಬ ವಿಚಾರ ಮುನ್ನೆಲೆಗೆ ಬಂದಿದ್ದು, ತಮ್ಮ ಪುತ್ರನಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದ ಬಗ್ಗೆ ಸ್ವತಃ ಸೋಮಣ್ಣ ಮುನಿಸು ವ್ಯಕ್ತಪಡಿಸಿದ್ದರು. |
![]() | 'ಬೇರೆ ರಾಜಕಾರಣಿ ಮಕ್ಕಳಿಗೆ ಟಿಕೆಟ್ ಇಲ್ಲ ಅನ್ನೋದಾದ್ರೆ ನನಗೂ ಬೇಡ; ರಾಜಕಾರಣದಲ್ಲಿ ಕವಲುದಾರಿಗಳು ಇರುತ್ತವೆ, ನಾನೇನು ಸನ್ಯಾಸಿ ಅಲ್ಲ'ರಾಜಕಾರಣದಲ್ಲಿ ಕವಲುದಾರಿಗಳು ಇರುತ್ತವೆ, ಹಾಗಂತ ನಾನೇನೂ ಸನ್ಯಾಸಿ ಅಲ್ಲ ಎಂದು ಸಚಿವ ವಿ. ಸೋಮಣ್ಣ ಹೇಳುವ ಮೂಲಕ ತಮ್ಮ ಮುಂದಿನ ಹೆಜ್ಜೆಯ ಕುರಿತಾಗಿ ಕುತೂಹಲ ಕೆರಳಿಸಿದ್ದಾರೆ. |
![]() | ನನಗೆ 72 ವರ್ಷ, ನಾನು ನಿಂತ ನೀರಲ್ಲ, ಹರಿಯುವ ನೀರು: ಮಗನ ರಾಜಕೀಯ ಹಿತಾಸಕ್ತಿ ನಿರ್ಲಕ್ಷಿಸಿದರೆ ಬಿಜೆಪಿಗೆ ಸೋಮಣ್ಣ ಗುಡ್ ಬೈ?ವಸತಿ ಸಚಿವ ವಿ ಸೋಮಣ್ಣ ಅವರು ಒಂದೆರಡು ವಾರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಸಾಧ್ಯತೆಯಿದೆ, ಅವರ ಈ ಕ್ರಮದಿಂದ ಕಾಂಗ್ರೆಸ್ ಗೆ ಸಹಾಯವಾಗಲಿದೆ. ಆದರೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಕೇಸರಿ ಪಕ್ಷದ ಮಹತ್ವಾಕಾಂಕ್ಷೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. |
![]() | ಬಿಜೆಪಿ ಪ್ರಚಾರ ಸಮಿತಿ ಮತ್ತು ಚುನಾವಣಾ ನಿರ್ವಹಣಾ ಸಮಿತಿ ಎರಡರಿಂದಲೂ ಸಚಿವ ವಿ.ಸೋಮಣ್ಣ ಔಟ್!ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿಯ ತಂತ್ರಗಾರಿಕೆ ಜೋರಾಗಿದೆ. ಚುನಾವಣೆ ಎದುರಿಸಲು ಹೊಸ ತಂಡವನ್ನ ರಚಿಸಿದ್ದು, ಕಮಲ ನಾಯಕರ ಹೆಗಲಿಗೆ ಪ್ರಮುಖ ಜವಾಬ್ದಾರಿ ವಹಿಸಲಾಗಿದೆ. |
![]() | ನಾನು ಹಳ್ಳಿಯಿಂದ ಬಂದವನು, 45 ವರ್ಷಗಳಿಂದ ಮಣ್ಣು ಹೊರುತ್ತಿದ್ದೇನೆ; ಒಂದು ಸಣ್ಣ ಅವಮಾನವಾದರೂ ಸಹಿಸಲಾಗದು: ಸೋಮಣ್ಣನನ್ನ ಮನಸ್ಸು ಹಾಗೂ ಆರೋಗ್ಯ ಎರಡೂ ಸರಿ ಇಲ್ಲ. ಹೀಗಾಗಿ ಪಕ್ಷದ ಕೆಲವು ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಿಲ್ಲ. ಕಾಂಗ್ರೆಸ್ ಸೇರ್ಪಡೆ ವಿಚಾರ ಕೇವಲ ಮಾಧ್ಯಮಗಳ ಸೃಷ್ಟಿ. ಸದ್ಯ ಅಂತಹ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದರು. |