ಮದರಸಾದಲ್ಲಿ ಕಲಿಯುತ್ತಿದ್ದ ನುಸ್ರತ್ ಜಹಾನ್ ರಫಿ ಎಂಬ 19 ವರ್ಷದ ಯುವತಿ, ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿರುದ್ಧ ದೂರು ನೀಡಿದ್ದಳು. ದುರ್ದೈವ ಎಂದರೆ ಸಂತ್ರಸ್ತ ಹುಡುಗಿಯ ನೆರವಿಗೆ ಬರಬೇಕಾದವರು, ಮದರಸಾದ ಘನತೆಗೆ ಧಕ್ಕೆ ತಂದಿದ್ದಾಳೆ ಎಂದು ಸೀಮೆಯೆಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾರೆ. ಈ ಘಟನೆ ಧರ್ಮದ ಕಪಿಮುಷ್ಠಿಯಲ್ಲಿ ನಲುಗುತ್ತಿರುವ ಬಾಂಗ್ಲಾದೇಶದಂತಹ ರಾಷ್ಟ್ರಗಳಲ್ಲಿ ಹೆಣ್ಣಿನ ದಯನೀಯ ಸ್ಥಿತಿಯನ್ನು ಜಗತ್ತಿಗೆ ಸಾರುತ್ತಿದೆ.