ಲಂಕಾದ ತಮ್ಮ ಸಹವರ್ತಿಗಳ ಜತೆ ಮಾತನಾಡಿದ ನಂತರ ಸುಷ್ಮಾ ಸ್ವರಾಜ್ ತಾವು ಸರಣಿ ಟ್ವೀಟ್ ಮೂಲಕ ಈ ಮಾಹಿತಿ ಬಹಿರಂಗಪಡಿಸಿದ್ದಾರೆ.ಶ್ರೀಲಂಕಾದ ನ್ಯಾಷನಲ್ ಹಾಸ್ಪಿಟಲ್ ಜತೆ ಭಾರತ ಹೈಕಮಿಷನರ್ ಕಛೇರಿ ಸಂಪರ್ಕಿಸಿದೆ. ಬಾಂಬ್ ಸ್ಪೋಟದಲ್ಲಿ ಮೂವರು ಭಾರತೀಯರು ಸಾವಿಗೀಡಾಗಿದ್ದು ಖಚಿತವಾಗಿದ್ದು ಮೃತರನ್ನು ಲಕ್ಷ್ಮಿ, ನಾರಾಯಣ್ ಚಂದ್ರಶೇಖರ್ ಮತ್ತು ರಮೇಶ್ ಎಂದು ಗುರುತಿಸಲಾಗಿದೆ ಎಂದು ಅವರು ಬರೆದಿದ್ದಾರೆ.