ಕಾಶ್ಮೀರ ಮತ್ತು ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿರುವುದನ್ನು ನೋಡಿದರೆ ಭಾರತ ಭರವಸೆ ಕಳೆದುಕೊಂಡಿರುವುದು ಸ್ಪಷ್ಟವಾಗಿದೆ ಹಿಂದೆ ಅವರನ್ನು ಬೆಂಬಲಿಸುತ್ತಿದ್ದ ಕಾಶ್ಮೀರಿ ನಾಯಕರು ಗೃಹಬಂಧನದಲ್ಲಿದ್ದಾರೆ. ಇಂದು, ಭಾರತ ಮತ್ತೊಮ್ಮೆ ಕಾಶ್ಮೀರ ಸಮಸ್ಯೆಯನ್ನು ಮತ್ತಷ್ಟು ಕಗ್ಗಟ್ಟು ಮಾಡಿ ಅಂತಾರಾಷ್ಟ್ರೀಯ ವಿಷಯವನ್ನಾಗಿ ಮಾಡಿದೆ, ಇದು ಸಮಸ್ಯೆ ಪರಿಹರಿಸದೇ ಮತ್ತಷ್ಟು ಜಠಿಲಗೊಳಿಸಲಿದ್ದು ಅಂತಾರಾಷ್ಟ್ರೀಯ ಸಮುದಾಯ ಭಾರತದ ಈ ನಡೆಯನ್ನು ಖಂಡಿಸುವ ಅಗತ್ಯವಿದೆ ಎಂದು ಖುರೇಷಿ ಹೇಳಿದರು.