ಮಂಜಿನಲ್ಲಿ ವರಾಹಾವತಾರ ಸೃಷ್ಟಿ: ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತೀಯರಿಗೆ ಮೊದಲ ಬಹುಮಾನ!

ಜಪಾನ್ ನ ನಯೋರೋದಲ್ಲಿ ನಡೆದ ಅಂತರಾಷ್ಟ್ರೀಯ ಸ್ನೋ ಸ್ಕಲ್ಪ್‌ಟಿಂಗ್‌ ಕಾಂಪಿಟೀಷನ್‌ನಲ್ಲಿ ಮೂವರು ಭಾರತೀಯರು ಪ್ರಥಮ ಬಹುಮಾನ ಗಳಿಸಿದ್ದಾರೆ.
ಮಂಜಿನಲ್ಲಿ ವರಾಹಾವತಾರ ಸೃಷ್ಟಿ
ಮಂಜಿನಲ್ಲಿ ವರಾಹಾವತಾರ ಸೃಷ್ಟಿ
ನಯೋರೋ(ಜಪಾನ್): ಜಪಾನ್ ನ ನಯೋರೋದಲ್ಲಿ ನಡೆದ ಅಂತರಾಷ್ಟ್ರೀಯ ಸ್ನೋ ಸ್ಕಲ್ಪ್‌ಟಿಂಗ್‌ ಕಾಂಪಿಟೀಷನ್‌ನಲ್ಲಿ ಮೂವರು ಭಾರತೀಯರು ಪ್ರಥಮ ಬಹುಮಾನ ಗಳಿಸಿದ್ದಾರೆ. 
ಭಾರತ ಮೂಲದ  ರವಿ ಪ್ರಕಾಶ್‌, ಸುನೀಲ್‌ ಕುಮಾರ್‌ ಕುಶ್ವಾಹ ಮತ್ತು ರಜನೀಶ್‌ ವರ್ಮಾ ಈ ಸಾಧನೆ ಮಾಡಿದ್ದು ಇವರು ಮಂಜಿನಲ್ಲಿ ವಿಷ್ಣುವಿನ ವರಾಹಾವತಾರ ಕಲಾಕೃತಿಗೆ ಮೊದಲ ಬಹುಮಾನ ಗಿಟ್ಟಿಸಿಕೊಂಡಿದ್ದಾರೆ.
ಫೆಬ್ರವರಿ 6-9ರಂದು ನಡೆದಿದ್ದ ಈ ಸ್ಪರ್ಧೆಯಲ್ಲಿ ಈ ಮೂವರೂ ಮೈನಸ್‌ 25 ಡಿಗ್ರಿ ಉಷ್ಣಾಂಶದ ನಡುವೆ 4 ಮೀಟರ್‌ ಎತ್ತರದ ವರಾಹ ಮೂರ್ತಿಯನ್ನು ನಿರ್ಮಿಸಿದ್ದರು. ಅಭ್ಯುದಯ ತಂಡದ ಸದಸ್ಯರಾಗಿರುವ ಈ ಸಾಧಕ ತ್ರಯರು ಇದೇ ಮೊದಲ ಬಾರಿಗೆ ರಾಷ್ಟ್ರಕ್ಕೆ ಮೊದಲ ಬಹುಮಾನ ಸಿಗುವಂತೆ ಮಾಡಿದ್ದು ದೇಶವಾಸಿಗ ಹೆಮ್ಮೆಗೆ ಇನ್ನೊಂದು ಗರಿ ಮೂಡಿಸಿದ್ದಾರೆ. ಅಂದಹಾಗೆಯೇ ಅಂತರಾಷ್ಟ್ರೀಯ ಸ್ನೋ ಸ್ಕಲ್ಪ್‌ಟಿಂಗ್‌ ಕಾಂಪಿಟೀಷನ್‌ನಲ್ಲಿ ಭಾಗವಹಿಸಿದ ಮೊದಲ ಭಾರತೀಯ ತಂಡ ಸಹ ಇದ್ದೇ ಆಗಿದೆ.
ಕಳೆದ 19 ವರ್ಷಗಳಿಂದ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ಈ ಸಾಲಿನಲ್ಲಿ ರಷ್ಯಾ, ಥಾಯ್ ಲ್ಯಾಂಡ್, ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಲಭಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com