ಪುಲ್ವಾಮಾ ಉಗ್ರರ ದಾಳಿ: ಹುತಾತ್ಮ ಯೋಧರ ಕುಟುಂಬಕ್ಕೆ ಭಾರತೀಯ ಮೂಲದ ದುಬೈ ಉದ್ಯಮಿಗಳಿಂದ 1 ಕೋಟಿ ರು.

ಪುಲ್ವಾಮಾ ಉಗ್ರರ ದಾಳಿ ಪ್ರಕರಣದಲ್ಲಿ ಹುತಾತ್ಮರಾದ 40 ಸೈನಿಕರ ಕುಟುಂಬಗಳಿಗೆ ದುಬೈನಲ್ಲಿರುವ ಭಾರತೀಯ ಮೂಲದ ಇಬ್ಬರು ಸಹೋದರರು 1ಕೋಟಿ ರು ...
ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸೈನಿಕರು
ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸೈನಿಕರು
ದುಬೈ: ಪುಲ್ವಾಮಾ ಉಗ್ರರ ದಾಳಿ ಪ್ರಕರಣದಲ್ಲಿ ಹುತಾತ್ಮರಾದ 40 ಸೈನಿಕರ ಕುಟುಂಬಗಳಿಗೆ  ದುಬೈನಲ್ಲಿರುವ ಭಾರತೀಯ ಮೂಲದ ಇಬ್ಬರು ಸಹೋದರರು 1ಕೋಟಿ ರು ಹಣ ನೀಡುವುದಾಗಿ ತಿಳಿಸಿದ್ದಾರೆ.
ಜೆಮಿನಿ ರಿಯಲ್ ಎಸ್ಟೇಟ್ ಗ್ರೂಪ್ ನ ಸುಧಾಕರ್ ರಾವ್ ಮತ್ತು ಪ್ರಭಾಕರ್ ರಾವ್ ಹುತಾತ್ಮ ಯೋಧರ ಕುಟುಂಬಕ್ಕೆ 1 ಕೋಟಿ ರು ಧನ ಸಹಾಯ ಮಾಡುವುದಾಗಿ ಘೋಷಿಸಿದ್ದಾರೆ. ಉದ್ಯಮಗಳ ಈ ಧನ ಸಹಾಯಕ್ಕೆ  ಭಾರತೀಯ ರಾಯಭಾರಿ ಜನರಲ್ ವಿಪುಲ್ ಧನ್ಯವಾದ ಹೇಳಿದ್ದಾರೆ.
ನಮ್ಮ ರಕ್ಷಣೆಗಾಗಿ ಜೀವ ಒತ್ತೆ ಇಡುವ ಸೈನಿಕರಿಗಾಗಿ ನಾವು ಇಷ್ಟಾದರೂ ಸಹಾಯ ಮಾಡಬೇಕು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com