ದುಬೈಯಲ್ಲಿ ಬಸ್ ಅಪಘಾತ; ಮೃತಪಟ್ಟ 17 ಮಂದಿಯಲ್ಲಿ 8 ಭಾರತೀಯರು

ಓಮನ್ ನಿಂದ ಪ್ರಯಾಣಿಸುತ್ತಿದ್ದ ಬಸ್ ದುಬೈಯಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟ 17 ಪ್ರಯಾಣಿಕರಲ್ಲಿ 8 ...
ರಶಿದಿಯಾ ಬಳಿ ಸಂಭವಿಸಿದ ಬಸ್ ಅಪಘಾತ
ರಶಿದಿಯಾ ಬಳಿ ಸಂಭವಿಸಿದ ಬಸ್ ಅಪಘಾತ
ದುಬೈ: ಓಮನ್ ನಿಂದ ಪ್ರಯಾಣಿಸುತ್ತಿದ್ದ ಬಸ್ ದುಬೈಯಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟ 17 ಪ್ರಯಾಣಿಕರಲ್ಲಿ 8 ಮಂದಿ ಭಾರತೀಯರಾಗಿದ್ದಾರೆ.
ಬಸ್ಸಿನಲ್ಲಿ ವಿವಿಧ ದೇಶಗಳ 31 ಜನರು ಪ್ರಯಾಣಿಸುತ್ತಿದ್ದರು. ದುಬೈಯ ರಶಿದಿಯಾ ಬಳಿ ಟ್ರಾಫಿಕ್ ಸಿಗ್ನಲ್ ನಲ್ಲಿ ಮಗುಚಿಬಿದ್ದು ನಿನ್ನೆ ಸಂಜೆ ಈ ದುರ್ಘಟನೆ ನಡೆದಿದೆ. ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. ದುಬೈಯಲ್ಲಿರುವ ಭಾರತೀಯ ರಾಯಭಾರಿ ಕನಿಷ್ಠ 8 ಮಂದಿ ಭಾರತೀಯರು ಮೃತಪಟ್ಟಿದ್ದಾರೆ ಎಂದು ಖಚಿತಪಡಿಸಿದ್ದಾರೆ.
ಮೃತ ಭಾರತೀಯರನ್ನು ರಾಜಗೋಪಾಲನ್, ಫೆರೋಜ್ ಖಾನ್ ಪಠಾಣ್, ರೇಶ್ಮಾ ಫೆರೊಜ್ ಖಾನ್ ಪಠಾಣ್, ದೀಪಕ್ ಕುಮಾರ್, ಜಮಾಲುದ್ದೀನ್ ಅರಕ್ಕವೀಟ್ಟಿಲ್, ಕಿರಣ್ ಜಾನ್ನಿ, ವಾಸುದೇವ್ ಮತ್ತು ತಿಲಕ್ರಾಮ್ ಜವಾಹರ್ ಠಾಕೂರ್ ಎಂದು ಗುರುತಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com