ಪಾಕಿಸ್ತಾನದ ಮೇಲೆ ಪರೋಕ್ಷ ವಾಗ್ದಾಳಿ ನಡೆಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಮಾನವ ಜನಾಂಗ ಎದುರಿಸುತ್ತಿರುವ ಅತಿದೊಡ್ಡ ಅಪಾಯಕಾರಿ ಬೆದರಿಕೆಗಳಲ್ಲಿ ದೇಶೀಯ ಪ್ರಾಯೋಜಿತ ಭಯೋತ್ಪಾದನೆ ಒಂದಾಗಿದ್ದು ಇದರ ವಿರುದ್ಧ ಒಟ್ಟಾಗಿ ಹೋರಾಡಲು ವಿಶ್ವ ನಾಯಕರು ಒಂದಾಗಬೇಕು ಎಂದು ಕರೆ ನೀಡಿದ್ದಾರೆ.
ಅಲ್ಲಿನ ಸಂಸತ್ತು ಮಜ್ಲಿಸ್ ನ್ನು ಉದ್ದೇಶಿಸಿ ಮಾತನಾಡಿ, ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸಂಬಂಧ ಇತಿಹಾಸಕ್ಕಿಂತಲೂ ಹಳೆಯದಾಗಿದೆ. ಮಾಲ್ಡೀವ್ಸ್ ದೇಶದ ಪ್ರಜಾಪ್ರಭುತ್ವವನ್ನು ಬಲಪಡಿಸಲು ಪ್ರತಿಯೊಬ್ಬ ಭಾರತೀಯನೂ ಕೂಡ ನಿಮ್ಮಂಗಿರುತ್ತಾರೆ ಎಂದು ಹೇಳಲು ಇಚ್ಛಿಸುತ್ತೇನೆ ಎಂದರು.
ದೇಶಕ್ಕೆ ಮಾತ್ರವಲ್ಲದೆ ಇಡೀ ನಾಗರಿಕತೆಗೆ ಭಯೋತ್ಪಾದನೆ ಎಂಬುದು ಬೆದರಿಕೆಯ ವಿಷಯ. ಹವಾಮಾನ ಬದಲಾವಣೆಯಂತಹ ಇಂದು ವಿಶ್ವ ಎದುರಿಸುತ್ತಿರುವ ಸವಾಲುಗಳ ಬಗ್ಗೆ ವಿಶ್ವದ ಸಮುದಾಯಗಳು ಸಮ್ಮೇಳನ, ಸಭೆಗಳನ್ನು ನಡೆಸುತ್ತದೆ. ಅದರ ಜೊತೆಗೆ ಭಯೋತ್ಪಾದನೆಯಂತಹ ವಿಷಯಗಳ ಬಗ್ಗೆ ಕೂಡ ವಿಶ್ವದ ರಾಷ್ಟ್ರಗಳು ಒಂದಾಗಬೇಕು. ನೀರು ನಮ್ಮ ತಲೆಯ ಮೇಲೆ ಏರುತ್ತಿದೆ.ಭಯೋತ್ಪಾದನೆ ಕುರಿತು ಜಾಗತಿಕ ಸಮ್ಮೇಳನಗಳನ್ನು ನಡೆಸಲು ಇದು ಸರಿಯಾದ ಸಮಯ. ಎಂದು ಪ್ರಧಾನಿ ಮೋದಿ ಪುನರುಚ್ಛರಿಸಿದರು.
ಭಾರತದಲ್ಲಿ ಈ ಹಿಂದೆ ನಡೆದ ಭಯೋತ್ಪಾದಕ ದಾಳಿಗಳು ಪಾಕಿಸ್ತಾನ ನಡೆಸಿದವುಗಳು ಎಂದು ಆರೋಪಿಸಿದ್ದ ಭಾರತ, ಭಯೋತ್ಪಾದಕ ಸಂಘಟನೆಗಳಿಗೆ ತನ್ನ ನೆಲದಲ್ಲಿ ಬೆಂಬಲ ನೀಡದಂತೆ ಭಾರತ ಪಾಕಿಸ್ತಾನಕ್ಕೆ ಮನವಿ ಮಾಡಿತ್ತು.
ಭಯೋತ್ಪಾದನೆ ಮತ್ತು ಮೂಲಭೂತೀಕರಣ ವಿರುದ್ಧ ಹೋರಾಡುವುದು ವಿಶ್ವ ನಾಯಕರಿಗೆ ಇಂದು ನಿಜವಾದ ಅಗ್ನಿ ಪರೀಕ್ಷೆಯಾಗಿದೆ ಎಂದರು.