2016 ರಲ್ಲಿ ಭಾರತವನ್ನು ತೊರೆದಿದ್ದ ಜಾಕಿರ್ ನಾಯ್ಕ್ ಮುಸ್ಲಿಂ ರಾಷ್ಟ್ರ ಮಲೇಷ್ಯಾದಲ್ಲಿ ಆಶ್ರಯ ಪಡೆದಿದ್ದು, ಶಾಶ್ವತ ವಾಸಸ್ಥಾನವನ್ನು ಪಡೆದುಕೊಂಡಿದ್ದಾನೆ. ಜಾಕಿರ್ ನಾಯ್ಕ್ ಬಗ್ಗೆ ಅಲ್ಲಿನ ಪ್ರಧಾನಿ ಮಹತಿರ್ ಮಾತನಾಡಿದ್ದು, ಆತ ಭಾರತಕ್ಕೆ ಹೋದರೆ ನ್ಯಾಯ ಸಮ್ಮತವಾದ ವಿಚಾರಣೆ ನಡೆಯುವುದಿಲ್ಲ ಎಂದೆನಿಸಿದೆ ಎಂದು ನೀಡಿರುವ ಹೇಳಿಕೆ ಈಗ ಬಹಿರಂಗವಾಗಿದೆ.