ಇಸ್ಲಾಮಾಬಾದ್: ಸಿಂಧೂ ನದಿ ನೀರು ಒಪ್ಪಂದ ಪ್ರಕಾರ ಪಾಕಿಸ್ತಾನ ಕಡೆಗೆ ಹರಿಯುವ ನೀರನ್ನು ತಡೆಯಲು ಭಾರತಕ್ಕೆ ಸಾಧ್ಯವಿಲ್ಲ. ಒಂದು ವೇಳೆ ರಾವಿ, ಸಟ್ಲೇಜ್ ಮತ್ತು ಬೀಯಾಸ್ ನದಿ ನೀರನ್ನು ಸ್ಥಗಿತಗೊಳಿಸಿದರೆ ಮಧ್ಯಸ್ಥಿಕೆಗಾಗಿ ಅಂತಾರಾಷ್ಟ್ರೀಯ ನ್ಯಾಯಾಲಯವನ್ನು ಕೋರಲಾಗುವುದು ಎಂದು ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತವು ನಿರಂತರವಾಗಿ "ನೀರಿನ ಆಕ್ರಮಣದಲ್ಲಿ ತೊಡಗಿಸಿಕೊಂಡಿದೆ ಎಂದು ಸಿಂಧೂ ನೀರಿಗಾಗಿ ಶಾಶ್ವತ ಆಯೋಗದ ಅಧಿಕಾರಿ ಆರೋಪಿಸಿದ್ದಾರೆ.
Advertisement