ಭಾರತ 'ದುಸ್ಸಾಹಸ'ಕ್ಕೆ ಮುಂದಾದರೆ ಬಾಲಾಕೋಟ್ ಪ್ರತೀಕಾರಕ್ಕಿಂತಲೂ ತೀಕ್ಷ್ಣ ಪ್ರತ್ಯುತ್ತರ: ಪಾಕಿಸ್ತಾನ ಎಚ್ಚರಿಕೆ

ಜೈಷ್ - ಇ- ಮೊಹಮ್ಮದ್ ಸಂಘಟನೆಯ ಸ್ಥಾಪಕ ಮಸೂದ್ ಅಝರ್ ಗೆ ಜಾಗತಿಕ ಉಗ್ರ ಪಟ್ಟ ದೊರೆತ ಬೆನ್ನಲ್ಲೇ ಪಾಕಿಸ್ತಾನ, ಭಾರತದ ಮೇಲೆ ಮತ್ತೆ ಸೇಡು ತೀರಿಸಿಕೊಳ್ಳಲು ಮುಂದಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಇಸ್ಲಾಮಾಬಾದ್:  ಜೈಷ್ - ಇ- ಮೊಹಮ್ಮದ್ ಸಂಘಟನೆಯ ಸ್ಥಾಪಕ  ಮಸೂದ್ ಅಝರ್ ಗೆ ಜಾಗತಿಕ ಉಗ್ರ ಪಟ್ಟ ದೊರೆತ  ಬೆನ್ನಲ್ಲೇ ಪಾಕಿಸ್ತಾನ, ಭಾರತದ ಮೇಲೆ ಮತ್ತೆ ಸೇಡು ತೀರಿಸಿಕೊಳ್ಳಲು ಮುಂದಾಗಿದೆ.
ಭಾರತ ಯಾವುದೇ ದುಸಹಾಸಕ್ಕೆ ಮುಂದಾದರೆ ಫೆಬ್ರವರಿ 27 ರಂದು ನಡೆದ ಬಾಲಾಕೋಟ್ ಪ್ರತೀಕಾರಕ್ಕಿಂತಲೂ ತೀಕ್ಷ್ಣ ಪ್ರತ್ಯುತ್ತರ ನೀಡುವುದಾಗಿ ಪಾಕಿಸ್ತಾನ ವಾಯುಪಡೆ  ಎಚ್ಚರಿಸಿದೆ.
ಭಾರತದಿಂದ ಮತ್ತೆ ದಾಳಿ ನಡೆಯಬಹುದೆಂಬ  ಭೀತಿಯಲ್ಲಿರುವ ಪಾಕಿಸ್ತಾನ, ಭಾರತದಿಂದ ಮತ್ತೆ ಏನಾದರೂ ವಿದ್ವಂಸಕ ಕೃತ್ಯಗಳು ನಡೆದರೆ ಸೂಕ್ತ ಪ್ರತ್ಯುತ್ತರ ನೀಡುವುದಾಗಿ  ಏರ್ ಸ್ಟಾಪ್ ಮಾರ್ಷಲ್ ಮುಖ್ಯಸ್ಥ  ಮುಜಾಹಿದ್ ಅನ್ವಾರ್ ಖಾನ್ ಎಚ್ಚರಿಕೆ ನೀಡಿದ್ದಾರೆ.
ಒಂದು ವೇಳೆ ಭಾರತ ದುಸಾಹಸಕ್ಕೆ ಮುಂದಾದರೆ ಬಾಲಕೋಟ್ ಗಿಂತಲೂ ಪ್ರತೀಕಾರಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ಪ್ರತ್ಯುತ್ತರ ನೀಡಲಾಗುವುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com