ಈ ಬಗ್ಗೆ ಸಮೂಹ ಹತ್ಯೆ ತಡೆ ಕುರಿತ ವಿಶ್ವಸಂಸ್ಥೆಯ ಸಲಹೆಗಾರರಾದ ಆಡಮ್ ಡೈಂಗ್ ಮತ್ತು ರಕ್ಷಣೆಯ ಜವಾಬ್ದಾರಿ ಕುರಿತ ವಿಶ್ವಸಂಸ್ಥೆಯ ವಿಶೇಷ ಸಲಹೆಗಾರರಾದ ಕರನ್ ಸ್ಮಿತ್ ಅವರು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, 'ಶ್ರೀಲಂಕಾದ ವಾಯವ್ಯ ಪ್ರಾಂತ್ಯದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ಮೇಲೆ ನಡೆಯುತ್ತಿರುವ ಧರ್ಮಾಧಾರಿತ ಹಿಂಸಾಚಾರ ‘ದ್ವೇಷಮಯ ದಾಳಿ'ಗಳನ್ನು ಕೊನೆಗೊಳಿಸಬೇಕು' ಎಂದು ವಿಶ್ವಸಂಸ್ಥೆಯ ಇಬ್ಬರು ವಿಶೇಷ ಸಲಹೆಗಾರರು ಶ್ರೀಲಂಕಾ ಸರ್ಕಾರಕ್ಕೆ ಕರೆ ನೀಡಿದ್ದಾರೆ. "ಶ್ರೀಲಂಕಾದ ಎಲ್ಲಾ ಜನಾಂಗೀಯ ಮತ್ತು ಧಾರ್ಮಿಕ ಗುಂಪುಗಳ ಜೊತೆಗೆ, ಸರ್ಕಾರ, ವಿರೋಧ ಪಕ್ಷ, ನಾಗರಿಕ ಸಮಾಜ ಮತ್ತು ಭದ್ರತಾ ಸಿಬ್ಬಂದಿ ಕೂಡ ಈ ದ್ವೇಷದ ದಾಳಿಗಳನ್ನು ತಕ್ಷಣ ನಿಲ್ಲಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.