ಅಯೋಧ್ಯೆ ರಾಮಜನ್ಮಭೂಮಿ ಸುಪ್ರೀಂ ತೀರ್ಪಿನ ಬಗ್ಗೆ ಪಾಕ್ ಪ್ರತಿಕ್ರಿಯೆ: ಇಲ್ಲಿದೆ ಮಾಹಿತಿ 

ಅಯೋಧ್ಯೆ ರಾಮಜನ್ಮಭೂಮಿಯ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಪಾಕಿಸ್ತಾನ ಪ್ರತಿಕ್ರಿಯೆ ನೀಡಿದೆ. 
ಅಯೋಧ್ಯೆ ರಾಮಜನ್ಮಭೂಮಿ ಸುಪ್ರೀಂ ತೀರ್ಪಿನ ಬಗ್ಗೆ ಪಾಕ್ ಪ್ರತಿಕ್ರಿಯೆ: ಇಲ್ಲಿದೆ ಮಾಹಿತಿ
ಅಯೋಧ್ಯೆ ರಾಮಜನ್ಮಭೂಮಿ ಸುಪ್ರೀಂ ತೀರ್ಪಿನ ಬಗ್ಗೆ ಪಾಕ್ ಪ್ರತಿಕ್ರಿಯೆ: ಇಲ್ಲಿದೆ ಮಾಹಿತಿ

ಇಸ್ಲಾಮಾಬಾದ್: ಅಯೋಧ್ಯೆ ರಾಮಜನ್ಮಭೂಮಿಯ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಪಾಕಿಸ್ತಾನ ಪ್ರತಿಕ್ರಿಯೆ ನೀಡಿದೆ. 

ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಷಿ ಮಾತನಾಡಿದ್ದು, ಈ ತೀರ್ಪು ಮುಸ್ಲಿಮರ ಮೇಲೆ ಮತ್ತಷ್ಟು ಒತ್ತಡ ಹಾಕಲಿದೆ. ಅಲ್ಲದೇ ಕರ್ತಾರ್ ಪುರ ಕಾರಿಡಾರ್ ನ ಉದ್ಘಾಟನೆ ಸಂದರ್ಭದಲ್ಲೇ ಈ ತೀರ್ಪು ಬಂದಿರುವುದರಿಂದ ಅತೀವವಾದ ಬೇಸರವಾಗಿದೆ. ಇನ್ನು ಕೆಲವು ದಿನಗಳು ಕಾಯ್ದು ಆ ನಂತರ ತೀರ್ಪು ಕೊಡಲು ಆಗುತ್ತಿರಲಿಲ್ಲವೇ? ಈ ತೀರ್ಪಿನಿಂದಾಗಿ ಕರ್ತಾರ್ ಪುರ ಕಾರಿಡಾರ್ ನ ಮೇಲಿನ ಗಮನವನ್ನ ಬೇರೆಡೆ ಸೆಳೆದಂತಾಗಿದೆ ಎಂದು ಹೇಳಿದ್ದಾರೆ. 

ಅಯೋಧ್ಯೆಯಲ್ಲಿ ಈವರೆಗೂ ವಿವಾದಿತ ಪ್ರದೇಶವಾಗಿದ್ದ ಭೂಮಿಯನ್ನು ರಾಮಲಲ್ಲಾನಿಗೆ ಸೇರಿದ್ದು ಎಂದು ಹೇಳುವ ಮೂಲಕ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಐತಿಹಾಸಿಕ ತೀರ್ಪು ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com