ಜಲಂಧರ್: ಕೆನಡಾದಲ್ಲಿ ಸಂಭವಿಸಿದ Ykರಸ್ತೆ ಅಪಘಾತದಲ್ಲಿ ಮೂವರು ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.
ಮೃತಪಟ್ಟವರನ್ನು ಪಂಜಾಬ್ನ ಗುರುದಾಸ್ಪುರ್, ಜಲಂಧರ್ ಜಿಲ್ಲೆಗಳಿಗೆ ಸೇರಿದ ತನ್ವೀರ್ ಸಿಂಗ್, ಗುರ್ವಿಂದರ್ ಸಿಂಗ್ ಮತ್ತು ಗುರುದಾಸ್ಪುರದ ಹರ್ಪ್ರೀತ್ ಕೌರ್ ಎಂದು ಗುರುತಿಸಲಾಗಿದೆ.
ಉನ್ನತ ವ್ಯಾಸಂಗ ನಡೆಸಲು ಕೆನಡಾಕ್ಕೆ ತೆರಳಿದ್ದ ಈ ಮೂವರು ವಿದ್ಯಾರ್ಥಿಗಳು ಶುಕ್ರವಾರ ಮಧ್ಯರಾತ್ರಿ ಕಾರಿನಲ್ಲಿ ತೆರಳುತ್ತಿದ್ದರು. ಆದರೆ, ಅವರ ಕಾರು ಒಂಟಾರಿಯೊದಲ್ಲಿರುವ ಅಯಾಲ್ ಹೆರಿಟೇಜ್ ರಸ್ತೆಯಲ್ಲಿ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಮೂವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತ ಸುದ್ದಿ ಕೇಳಿ ವಿದ್ಯಾರ್ಥಿಗಳ ಕುಟುಂಬಗಳಲ್ಲಿ ಶೋಕಮಡುಗಟ್ಟಿದೆ. ತನ್ವೀರ್ ಸಿಂಗ್ ಈ ವರ್ಷದ ಆರಂಭದಲ್ಲಿ ಕೆನಡಾಕ್ಕೆ ಪ್ರಯಾಣ ಬೆಳೆಸಿದ್ದ ಇತರ ಇಬ್ಬರು ಏಪ್ರಿಲ್ನಲ್ಲಿ ಅಲ್ಲಿಗೆ ತೆರಳಿದ್ದರು ಕುಟುಂಬ ಸದಸ್ಯರು ಹೇಳಿದ್ದಾರೆ.
Advertisement