ಆತ್ಮ ವಿಶ್ವಾಸ ಕಳೆದುಕೊಳ್ಳಬೇಡಿ, ಮುಂದಿದೆ ಅಚ್ಚೆ ದಿನ: ರಾಣಿ ಎಲಿಜಬೆತ್ 

ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ `ಕೊರೋನಾ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರೂ  ದೇಶದಲ್ಲಿ ಮುಂದೆ ಉತ್ತಮ ದಿನಗಳು  ಮರಳಿ ಬರಲಿವೆ ಎಂದು ರಾಣಿ ಎಲಿಜಬೆತ್ ಹೇಳಿದ್ದಾರೆ
ರಾಣಿ ಎಲಿಜಬೆತ್
ರಾಣಿ ಎಲಿಜಬೆತ್

ಲಂಡನ್ : ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ `ಕೊರೋನಾ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರೂ  ದೇಶದಲ್ಲಿ ಮುಂದೆ ಉತ್ತಮ ದಿನಗಳು  ಮರಳಿ ಬರಲಿವೆ ಎಂದು ರಾಣಿ ಎಲಿಜಬೆತ್ ಹೇಳಿದ್ದಾರೆ

ಭಾನುವಾರ ರಾತ್ರಿ  ಪ್ರಸಾರ ಭಾಷಣ ಮಾಡಿದ ಅವರು, ಜನತೆ ಭರವಸೆ, ಆತ್ಮ ವಿಶ್ವಾಸ ಕಳೆದು ಕೊಳ್ಳುವುದು ಬೇಡ,  ಕರೋನ  ವಿರುದ್ಧದ ಹೋರಾಟದಲ್ಲಿ ಬ್ರಿಟನ್ ಯಶಸ್ವಿಯಾಗಲಿದೆ ಎಂದು ಧೈರ್ಯ ತುಂಬಿದ್ದಾರೆ

ಕೊರೋನವೈರಸ್ ಹಾವಳಿ  ಬಗ್ಗೆ  ಹೇಗೆ ಪ್ರತಿಕ್ರಿಯಿಸಲಿ, ಹೆಚ್ಚು ಸವಾಲಿನ ಸಮಯದಲ್ಲಿ  ನಾನು ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ ದೇಶದಲ್ಲಿ ಉತ್ತಮ ದಿನಗಳು ಮರಳಿ ಬರಲಿವೆ  ಕೊರೋನಾ  ವಿರುದ್ಧದ ಹೋರಾಟದಲ್ಲಿ ದೇಶ ಯಶಸ್ವಿಯಾಗಲಿದೆ ಎಂಬ ನಂಬಿಕೆಯಿದೆ ಎಂದಿದ್ದಾರೆ.

ದೇಶದ  ಜನರ ಜೀವನಕ್ಕೆ ಅಡ್ಡಿಯಾಗಿದ್ದು  ಕೆಲವರಿಗೆ ತಂದಿರುವ ನೋವು ಸಂಕಟವನ್ನು ವಿವರಿಸಿದ್ದಾರೆ  ಅನೇಕರಿಗೆ ಆರ್ಥಿಕ ತೊಂದರೆಗಳಾಗಿದೆ, ದೈನಂದಿನ ಜೀವನದಲ್ಲಿ ಅಗಾಧ ಬದಲಾವಣೆ ಆಗಿರುವ ಕುರಿತಂತೆ ರಾಣಿ ಎಲಿಜಬೆತ್ ಮಾತನಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com