ಕೋವಿಡ್ ಸಂಕಷ್ಟ ಕಾಲದಲ್ಲಿ ಉತ್ತಮ ಸೇವೆ: ಭಾರತೀಯ ಮೂಲದ ದಾದಿಗೆ ಸಿಂಗಾಪುರ ಪ್ರೆಸಿಡೆಂಟ್ ಅವಾರ್ಡ್

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅತ್ಯಂತ ಮುತುವರ್ಜಿಯಿಂದ ಸೇವೆ ಸಲ್ಲಿಸಿದ್ದಕ್ಕಾಗಿ  ಸಿಂಗಾಪುರದ 59 ವರ್ಷದ ಭಾರತೀಯ ಮೂಲದ ದಾದಿಯೊಬ್ಬರಿಗೆ ದಾದಿಯರಿಗೆ ನೀಡಲಾಗುವ ಅತ್ಯುನ್ನತ ಪುರಸ್ಕಾರದಲ್ಲಿ ಒಂದಾದ ಪ್ರೆಸಿಡೆಂಟ್ ಅವಾರ್ಡ್ ಫಾರ್ ನರ್ಸ್ ನೀಡಿ ಸನ್ಮಾನಿಸಲಾಗಿದೆ.
 ಕಲಾ ನಾರಾಯಣಸಾಮಿ
 ಕಲಾ ನಾರಾಯಣಸಾಮಿ

ಸಿಂಗಾಪುರ: ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅತ್ಯಂತ ಮುತುವರ್ಜಿಯಿಂದ ಸೇವೆ ಸಲ್ಲಿಸಿದ್ದಕ್ಕಾಗಿ  ಸಿಂಗಾಪುರದ 59 ವರ್ಷದ ಭಾರತೀಯ ಮೂಲದ ದಾದಿಯೊಬ್ಬರಿಗೆ ದಾದಿಯರಿಗೆ ನೀಡಲಾಗುವ ಅತ್ಯುನ್ನತ ಪುರಸ್ಕಾರದಲ್ಲಿ ಒಂದಾದ ಪ್ರೆಸಿಡೆಂಟ್ ಅವಾರ್ಡ್ ಫಾರ್ ನರ್ಸ್ ನೀಡಿ ಸನ್ಮಾನಿಸಲಾಗಿದೆ.

ಭಾರತ ಮೂಲದವರಾದ  ಕಲಾ ನಾರಾಯಣಸಾಮಿ ಈ ಪ್ರತಿಷ್ಠಿತ ಗೌರವ ಸ್ವೀಕರಿಸಿದವರೆಂದು ತಿಳಿದುಬಂದಿದೆ. ಪ್ರಶಸ್ತಿಯು ಟ್ರೋಫಿ, ಅಧ್ಯಕ್ಷ ಹಲೀಮಾ ಯಾಕೋಬ್ ಸಹಿ ಮಾಡಿದ ಪ್ರಮಾಣಪತ್ರ ಮತ್ತು 10,000  ಸಿಂಗಾಪುರ ಡಾಲರ್ ( 7,228 ಅಮೆರಿಕನ್ ಡಾಲರ್) ನಗದನ್ನು ಒಳಗೊಂಡಿದೆ.

ವುಡ್ ಲ್ಯಾಂಡ್ಸ್ ಹೆಲ್ತ್ ಕ್ಯಾಂಪ್ ನ;ಲ್ಲಿ ನರ್ಸಿಂಗ್ ವಿಭಾಗದ ಉಪನಿರ್ದೇಶಕರಾಗಿರುವ ನಾರಾಯಣಸ್ವಾಮಿ  ಅವರಿಗೆ ಸೋಂಕಿನ ನಿಯಂತ್ರಣ ಅಭ್ಯಾಸದ ವೇಳೆ ಉತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ  ಪ್ರಶಸ್ತಿ ನೀಡಲಾಯಿತು, ಕೋವಿಡ್ 19 ರೋಗಿಗಳ ಆರೈಕೆಗಾಗಿ ಯಿಶುನ್ ಸಮುದಾಯ ಆಸ್ಪತ್ರೆಯಲ್ಲಿ ವಾರ್ಡ್‌ಗಳನ್ನು ಪರಿವರ್ತಿಸಲು ಕೆಲಸದ ಹರಿವು ಮತ್ತು ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು ಪರಿಚಯಿಸುವ ಮೂಲಕ ನಾರಾಯಣಸ್ವಾಮಿ ಉತ್ತಮ ಸಾಧನೆ ಮಾಡಿದ್ದಾರೆ.

"ನಾವು ಸಾರ್ಸ್ ನಿಂದ ಕಲಿತದ್ದೆಲ್ಲವನ್ನೂ ಇಲ್ಲಿ ಪ್ರಯೋಗಕ್ಕೆ ಒಳಪಡಿಸಿದ್ದೇವೆ,. " ನಾರಾಯಣಸ್ವಾಮಿಯವರ ಹೆಸರು ಉಲ್ಲೇಖಿಸಿ ಚಾನೆಲ್ ನ್ಯೂಸ್ ಏಷ್ಯಾ  ವರದಿ ಹೇಳಿದೆ. ಸಿಂಗಾಪುರದಲ್ಲಿ ಶುಶ್ರೂಷೆಯ ಆಧುನೀಕರಣದೊಂದಿಗೆ ಅವರು ತೊಡಗಿಸಿಕೊಂಡಿದ್ದಾರೆ, ವಸ್ತುಗಳ ಬಳಕೆಯನ್ನು ಪತ್ತೆಹಚ್ಚಲು ಸ್ವಯಂಚೆಕ್ ಔಟ್ ದಾಸ್ತಾನು ನಿರ್ವಹಣಾ ವಿತರಣಾ ಮಾದರಿಯ ಜಾರಿ ಸೇರಿದಂತೆ  ನಿಖರವಾದ  ಮಾಪನಗಳು ಮತ್ತು ಇಮೇಜ್ ಸೆರೆಹಿಡಿಯುವಿಕೆಯನ್ನು ಒದಗಿಸುವ ಸುವ್ಯವಸ್ಥಿತ ಮೌಲ್ಯಮಾಪನ ಪ್ರಕ್ರಿಯೆಯ ಪರಿಚಯಿಸುವಲ್ಲಿಯೂ ಇವರ ಪಾತ್ರ ಮಹತ್ವದ್ದಾಗಿತ್ತು.

ರೋಗಿಗಳ ಆರೈಕೆ, ಕಾಳಜಿ, ಶಿಕ್ಷಣ, ಸಂಶೋಧನೆ ಮತ್ತು ಆಡಳಿತಕ್ಕೆ ನಿರಂತರ ಕೊಡುಗೆ ನೀಡಿ ಸಾಧನೆ ಮೆರೆದ ದಾದಿಯರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. 2000 ರಲ್ಲಿ ಈ ಪ್ರಶಸ್ತಿ ಸ್ಥಾಪನೆಯಾದಂದಿನಿಂದ ಇಂದಿನವರೆಗೆ ಒಟ್ಟೂ ಎಪ್ಪತ್ತೇಳು ದಾದಿಯರು ಈ ಗೌರವಕ್ಕೆ ಪಾತ್ರವಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com