ಭಾರತದ ದಾಳಿಯಲ್ಲಿ ಓರ್ವ ಯೋಧ ಸಾವು, ಐವರಿಗೆ ಗಾಯ: ಪಾಕ್

ಕೆಳಗೆ ಬಿದ್ದರೂ  ಮೀಸೆ ಮಣ್ಣಾಗಲಿಲ್ಲ ಎಂಬಂತೆ ಪ್ರತೀ ಬಾರಿ ದಾಳಿ, ಪ್ರತಿದಾಳಿಗಳು ನಡೆದಾಗಲೂ ಎನೂ ಆಗಲಿಲ್ಲ ಎಂಬ ವರ್ತನೆಯನ್ನು ಪಾಕಿಸ್ತಾನ ಮುಂದುವರೆಸಿದೆ. ಗಡಿಯಲ್ಲಿ ಭಾರತೀಯ ಸೇನೆಯ ದಾಳಿಯಲ್ಲಿ ಓರ್ವ ಯೋಧ ಸಾವನ್ನಪ್ಪಿ, ಐವರು ಯೋಧರು ಗಾಯಗೊಂಡಿದ್ದಾರೆಂದು ಪಾಕಿಸ್ತಾನ ಹೇಳಿಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇಸ್ಲಾಮಾಬಾದ್: ಕೆಳಗೆ ಬಿದ್ದರೂ  ಮೀಸೆ ಮಣ್ಣಾಗಲಿಲ್ಲ ಎಂಬಂತೆ ಪ್ರತೀ ಬಾರಿ ದಾಳಿ, ಪ್ರತಿದಾಳಿಗಳು ನಡೆದಾಗಲೂ ಎನೂ ಆಗಲಿಲ್ಲ ಎಂಬ ವರ್ತನೆಯನ್ನು ಪಾಕಿಸ್ತಾನ ಮುಂದುವರೆಸಿದೆ. ಗಡಿಯಲ್ಲಿ ಭಾರತೀಯ ಸೇನೆಯ ದಾಳಿಯಲ್ಲಿ ಓರ್ವ ಯೋಧ ಸಾವನ್ನಪ್ಪಿ, ಐವರು ಯೋಧರು ಗಾಯಗೊಂಡಿದ್ದಾರೆಂದು ಪಾಕಿಸ್ತಾನ ಹೇಳಿಕೊಂಡಿದೆ. 

ನವೆಂಬರ್ 13 ರಂದು ಗಡಿಯಲ್ಲಿ ನಡೆದ ಬೆಳವಣಿಗೆಗಳ ಕುರಿತು ಹೇಳಿಕೆ ನೀಡಿರುವ ಪಾಕಿಸ್ತಾನ ಸೇನಾಪಡೆ, ಗಡಿಯುದ್ದಕ್ಕೂ ಭಾರತೀಯ ಸೇನೆ ಅಪ್ರಚೋದಿತ ಗುಂಡಿನ ದಾಳಿ ಹಾಗೂ ಶೆಲ್ ಗಳಿಂದ ದಾಳಿ ನಡೆಸಿದೆ ಎಂದು ಹೇಳಿದೆ. 

ಭಾರತೀಯ ಸೇನೆಯ ದಾಳಿಯಲ್ಲಿ ಓರ್ವ ಯೋಧ ಸಾವನ್ನಪ್ಪಿದ್ದು, ಐವರು ಯೋಧರು ಗಾಯಗೊಂಡಿದ್ದಾರೆ. ಅಲ್ಲದೆ ನಾಲ್ವರು ನಾಗರೀಕರು ಸಾವನ್ನಪ್ಪಿ, 12 ಮಂದಿ ಗಾಯಗೊಂಡಿದ್ದಾರೆಂದು ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com