ಕಠ್ಮಂಡು: ದಕ್ಷಿಣ ನೇಪಾಳದ ರೌತಹತ್ ಜಿಲ್ಲೆಯಲ್ಲಿ ಕಾರೊಂದು ಕೆರೆಗೆ ಉರುಳಿ ಬಿದ್ದ ಪರಿಣಾಮ, ನಾಲ್ವರು ಭಾರತೀಯರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಚಾಲಕ ಮತ್ತು ಕಾರಿನಲ್ಲಿದ್ದ ಇತರರು ಕುಡಿದಿದ್ದರೆಂದು ಶಂಕಿಸಲಾಗಿದೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ದಿ ಹಿಮಾಲಯನ್ ಟೈಮ್ಸ್ ವರದಿ ಮಾಡಿದೆ.
ಮೃತರು ಬಿಹಾರ ಮೂಲದವರಾಗಿದ್ದು, ದೀನಾನಾಥ್ ಸಾಹ್ (25), ಅರುಣ್ ಸಾಹ್ (30), ದಿಲೀಪ್ ಮಹತೋ (28) ಮತ್ತು ಅಮಿತ್ ಮಹತೋ (27) ಎಂದು ಗುರುತಿಸಲಾಗಿದೆ.
Advertisement