social_icon

ಉಕ್ರೇನ್ ಮೇಲಿನ ದಾಳಿ ನಿಲ್ಲಿಸಲು ವಿಶ್ವಸಂಸ್ಥೆಯಲ್ಲಿ ನಿರ್ಣಯ: ಮತದಾನದಿಂದ ದೂರ ಉಳಿದ ಭಾರತ, ವೀಟೋ ಚಲಾಯಿಸಿದ ರಷ್ಯಾ

ಮಿಲಿಟರಿ ಕಾರ್ಯಾಚರಣೆ ಎಂದು ಹೇಳಿ ಉಕ್ರೇನ್ ಮೇಲಿನ ಯುದ್ಧ ನಡೆಸುತ್ತಿರುವ ರಷ್ಯಾ, ಉಕ್ರೇನ್ ನಾಶಕ್ಕೆ ಸಿದ್ದವಾಗಿದೆ. ಪೂರ್ವ ಉಕ್ರೇನ್‌ಗೆ ಸೀಮಿತವಾಗಿದ್ದ ರಷ್ಯಾದ ಪಡೆಗಳು ಶುಕ್ರವಾರ ರಾಜಧಾನಿ ಕೀವ್‌ ಅನ್ನು ಪ್ರವೇಶಿಸಿವೆ.

Published: 26th February 2022 08:50 AM  |   Last Updated: 26th February 2022 01:43 PM   |  A+A-


rassia

ರಷ್ಯಾ ದಾಳಿ ವಿರೋಧಿಸಿ ಪ್ರತಿಭಟನೆ

Posted By : Lingaraj Badiger
Source : Online Desk

ವಿಶ್ವಸಂಸ್ಥೆ: ಮಿಲಿಟರಿ ಕಾರ್ಯಾಚರಣೆ ಎಂದು ಹೇಳಿ ಉಕ್ರೇನ್ ಮೇಲಿನ ಯುದ್ಧ ನಡೆಸುತ್ತಿರುವ ರಷ್ಯಾ, ಉಕ್ರೇನ್ ನಾಶಕ್ಕೆ ಸಿದ್ದವಾಗಿದೆ. ಪೂರ್ವ ಉಕ್ರೇನ್‌ಗೆ ಸೀಮಿತವಾಗಿದ್ದ ರಷ್ಯಾದ ಪಡೆಗಳು ಶುಕ್ರವಾರ ರಾಜಧಾನಿ ಕೀವ್‌ ಅನ್ನು ಪ್ರವೇಶಿಸಿವೆ. ಈ ಮಧ್ಯೆ ಉಕ್ರೇನ್ ಮೇಲಿನ ದಾಳಿ ನಿಲ್ಲಿಸುವಂತೆ ಮತ್ತು ರಷ್ಯಾ ತನ್ನ ಎಲ್ಲಾ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. 

ವಿಶ್ವಸಂಸ್ಥೆಯಲ್ಲಿ ಕಾಯಂ ಸದಸ್ಯತ್ವ ಮತ್ತು ವಿಟೋ ಅಧಿಕಾರ ಹೊಂದಿರುವ ರಷ್ಯಾ ವಿರುದ್ಧ ಅಮೆರಿಕ ಮತ್ತು ಅಲ್ಬೇನಿಯ ಸಲ್ಲಿಸಿರುವ ನಿರ್ಣಯವನ್ನು ಮತದಾನಕ್ಕೆ ಹಾಕಲಾಯಿತು. ಭಾರತ, ಚೀನಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಮತದಾನದಿಂದ ದೂರ ಉಳಿದಿವೆ. ಆದರೆ ರಷ್ಯಾ ತನ್ನ ವಿಟೋ ಅಧಿಕಾರ ಚಲಾಯಿಸಿ ವಿಶ್ವಸಂಸ್ಥೆಯ ನಿರ್ಣಯವನ್ನು ತಡೆದಿದೆ.

ಇದನ್ನು ಓದಿ: ರಷ್ಯಾದ ಸೇನಾ ದಾಳಿಯ ನಡುವೆ ಉಕ್ರೇನ್‌ನಿಂದ ತನ್ನ ಪ್ರಜೆಗಳನ್ನು ಸ್ಥಳಾಂತರಿಸುವ ಪ್ರಯತ್ನಗಳನ್ನು ತೀವ್ರಗೊಳಿಸಿದ ಭಾರತ!

ರಷ್ಯಾದ ವೀಟೋ ನಂತರ, ಸಾಮಾನ್ಯ ಸಭೆಯ ಮೂಲಕ ನಿರ್ಣಯವನ್ನು ಅಂಗೀಕರಿಸಲು ವಿಶ್ವಸಂಸ್ಥೆ ಯೋಜಿಸಿದೆ ಎಂದು ತಿಳಿದುಬಂದಿದೆ, ಅಲ್ಲಿ ಯಾವುದೇ ವಿಟೋವನ್ನು ಚಲಾಯಿಸಲಾಗುವುದಿಲ್ಲ. ಬಿಕ್ಕಟ್ಟಿನ ಸಂಕೀರ್ಣತೆ ಮತ್ತು ಅದರ ಐತಿಹಾಸಿಕ ಪರಂಪರೆಯ ಹೊರತಾಗಿಯೂ ರಷ್ಯಾ, ಕಾನೂನು ಮತ್ತು ಯುಎನ್ ಚಾರ್ಟರ್ ಹೊರತುಪಡಿಸಿ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ಅಂತರರಾಷ್ಟ್ರೀಯ ಮಾನದಂಡಗಳನ್ನು ಉಲ್ಲಂಘಿಸಿರುವುದರಿಂದ ಕಠಿಣ ನಿರ್ಣಯವು ಸಾಮಾನ್ಯ ಸಭೆಯನ್ನು ಅಂಗೀಕರಿಸುತ್ತದೆ ಎಂಬುದು ಸ್ಪಷ್ಟವಾಗಿದೆ.

ರಷ್ಯಾದ ಆಕ್ರಮಣವನ್ನು ತಡೆಯಲು ಉಕ್ರೇನಿಯನ್ ಪಡೆಗಳು ಶ್ರಮಿಸುತ್ತಿವೆ. ಶತ್ರುಗಳು ಪ್ರಮುಖ ನಗರಗಳನ್ನು ಪ್ರವೇಶಿಸದಂತೆ ತಡೆಯಲು ಪ್ರತಿದಾಳಿ ನಡೆಸುತ್ತಿದೆ. ಯುದ್ಧದಲ್ಲಿ ಸಾವಿರಕ್ಕೂ ಹೆಚ್ಚು ರಷ್ಯಾದ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ಹೇಳಿದೆ.

ರಷ್ಯಾದ ದಾಳಿಯಲ್ಲಿ ಇದುವರೆಗೆ 137 ನಾಗರಿಕರು ಮತ್ತು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಘೋಷಿಸಿದ್ದಾರೆ. ಸೇನಾ ನೆಲೆಗಳ ಮೇಲೆ ದಾಳಿ ಮಾಡುವುದಾಗಿ, ಶಾಂತಿಯುತ ಜನವಸತಿ ಪ್ರದೇಶಗಳ ಮೇಲೆ ದಾಳಿ ನಡೆಸಿ ಸಾಮಾನ್ಉ ಜನರನ್ನ ಕೊಲ್ಲುತ್ತಿರುವ ರಷ್ಯಾ, ಈ ತಪ್ಪನ್ನು ಮಾಡಿದ ರಷ್ಯಾವನ್ನ ಆ ದೇಶ ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ರಾಜಧಾನಿ ಕಿವ್ ನಂತರ ರಷ್ಯಾ ಪಡೆಗಳು ಖಾರ್ಕಿವ್‌ನಂತಹ ನಗರಗಳನ್ನು ಪ್ರವೇಶಿಸಿವೆ ಎಂಬ ಮಾಹಿತಿ. ಉಕ್ರೇನ್‌ನ 118 ಸೇನಾ ನೆಲೆಗಳನ್ನು ನಾಶಪಡಿಸಿರುವುದಾಗಿ ರಷ್ಯಾ ಹೇಳಿದೆ.


Stay up to date on all the latest ವಿದೇಶ news
Poll
Khalistani militant Hardeep Singh Nijjar

ಸಿಖ್ ಪ್ರತ್ಯೇಕತಾವಾದಿ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪವನ್ನು ನೀವು ನಂಬುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp