social_icon

ಆಸ್ಕರ್ ವಿಜೇತೆ ಮಲೇಷ್ಯಾ ಮೂಲದ ಮಿಚೆಲ್ ಯೋಹ್ ಗೆ ಭಾರತದೊಂದಿಗೆ ಇದೆ ವಿಶೇಷ ನಂಟು!

ಮಲೇಷ್ಯಾ ಸಂಜಾತ, ಆಸ್ಕರ್ ಪ್ರಶಸ್ತಿ ಗೆದ್ದ ಮಿಚೆಲ್ ಯೋಹ್, ಬಹುಮುಖಿ ಕಾರ್ಯಕ್ಷಮತೆ ವಿಭಾಗದಲ್ಲಿ ಅತ್ಯುತ್ತಮ ನಟಿಯರಿಗೆ ನೀಡಲಾಗುವ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಏಷ್ಯನ್ ಮಹಿಳೆ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. 

Published: 13th March 2023 04:12 PM  |   Last Updated: 14th March 2023 04:53 PM   |  A+A-


Oscar winner Michelle Yeoh

ಆಸ್ಕರ್ ವಿಜೇತೆ ಮಲೇಷ್ಯಾ ಮೂಲದ ಮಿಚೆಲ್ ಯೋಹ್

Posted By : Srinivas Rao BV
Source : The New Indian Express

ಮಲೇಷ್ಯಾ ಸಂಜಾತ, ಆಸ್ಕರ್ ಪ್ರಶಸ್ತಿ ಗೆದ್ದ ಮಿಚೆಲ್ ಯೋಹ್, ಬಹುಮುಖಿ ಕಾರ್ಯಕ್ಷಮತೆ ವಿಭಾಗದಲ್ಲಿ ಅತ್ಯುತ್ತಮ ನಟಿಯರಿಗೆ ನೀಡಲಾಗುವ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಏಷ್ಯನ್ ಮಹಿಳೆ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. 

ಆಕೆ 2015 ರ ಏಪ್ರಿಲ್ ತಿಂಗಳಲ್ಲಿ ನೇಪಾಳಕ್ಕೆ ಭೇಟಿ ನೀಡಿದ್ದಾಗ ಅಲ್ಲಿ ಸಂಭವಿಸಿದ್ದ ಭೀಕರ ಭೂಕಂಪದಲ್ಲಿ ಸಿಲುಕಿಕೊಂಡಿದ್ದರು. 

ಜೇಮ್ಸ್ ಬಾಂಡ್ ಸಿನಿಮಾ 'Tomorrow Never Dies' ಮತ್ತು 'Crouching Tiger, Hidden Dragon' ನಿಂದ ಖ್ಯಾತಿ ಪಡೆದಿರುವ ಮಿಚೆಲ್ ಯೋಹ್, ಅತ್ಯುತ್ತಮ ನಟಿಗಾಗಿ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ ಮತ್ತು 'ಎವೆರಿಥಿಂಗ್, ಎವೆರಿವೇರ್ ಆಲ್ ಅಟ್ ಒನ್ಸ್' ನಲ್ಲಿನ ಪಾತ್ರದ ಮೂಲಕ  ಇತಿಹಾಸ ನಿರ್ಮಿಸಿದ್ದಾರೆ.

ಇಷ್ಟೆಲ್ಲಾ ಖ್ಯಾತಿ ಹೊಂದಿರುವ ಮಿಚೆಲ್ ಯೋಹ್, ಭಾರತದೊಂದಿಗೆ ವಿಶೇಷವಾದ ನಂಟನ್ನು ಹೊಂದಿದ್ದಾರೆ. ಆಕೆಗೆ ಪ್ರೇರಕ ಶಕ್ತಿಯಾಗಿರುವುದು ಬೌದ್ಧ ನಾಯಕ ಗ್ಯಾಲ್ವಾಂಗ್ ದ್ರುಕ್ಪಾ. ಭಾರತದಲ್ಲಿನ ದ್ರುಕ್ಪಾ ಪರಂಪರೆಯ ನಾಯಕರಾಗಿರುವ ಇವರು ಹಿಮಾಲಯದಾದ್ಯಂತ 1,000ಕ್ಕೂ ಹೆಚ್ಚು ಮಠಗಳನ್ನು ಹೊಂದಿದ್ದಾರೆ. 

ಬೌದ್ಧ ಬಿಕ್ಕು ಗ್ಯಾಲ್ವಾಂಗ್ ದ್ರುಕ್ಪಾ ಅವರ ಅನುಯಾಯಿಯಾಗಿರುವ ಮಿಚೆಲ್, ಗ್ಯಾಲ್ವಾಂಗ್ ಅವರ ಸಲಹೆಯಂತೆಯೇ ನೇಪಾಳದ ಭೂಕಂಪ ಸಂತ್ರಸ್ತರಿಗಾಗಿ ಹಾಲಿವುಡ್ ನಿಂದ 2015 ರಲ್ಲಿ ದೇಣಿಗೆ ಸಂಗ್ರಹಿಸಿ ಅದನ್ನು ದ್ರುಕ್ಪಾ ಅವರ ಲೀವ್ ಟು ಲವ್ ಫೌಂಡೇಷನ್ ಗೆ ತಲುಪಿಸಿದ್ದರು. ಆಗ ಅವರು ಈ ಫೌಂಡೇಷನ್ ನ ರಾಯಭಾರಿಯೂ ಆಗಿದ್ದರು. ನೇಪಾಳದ ಭೂಕಂಪನದಿಂದ ರಕ್ಷಿಸಲ್ಪಟ್ಟ ಮಿಚೆಲ್ ದಂಪತಿ ಪುನಃ ನೇಪಾಳಕ್ಕೆ ಬಂದು ಅಲ್ಲಿನ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ್ದರು.

ಇದನ್ನೂ ಓದಿ: ಭಾರತದ 'RRR', 'ದಿ ಎಲಿಫೆಂಟ್ ವಿಸ್ಪರರ್ಸ್' ಗೆ ಆಸ್ಕರ್ ಪ್ರಶಸ್ತಿ; ಇಲ್ಲಿದೆ 95ನೇ ಅಕಾಡೆಮಿ ಆವಾರ್ಡ್ಸ್ ಪುರಸ್ಕೃತರ ಪಟ್ಟಿ
 
ಮಿಚೆಲ್ ಗೆ ಮಾರ್ಗದರ್ಶಕರಾಗಿರುವ ಗ್ಯಾಲ್ವಾಂಗ್ ದ್ರುಕ್ಪಾ, ಲಡಾಖ್ ನಲ್ಲಿರುವ ಪ್ರಶಸ್ತಿ ಪುರಸ್ಕೃತ ಡ್ರುಕ್ ವೈಟ್ ಲೋಟಸ್ ಸ್ಕೂಲ್ ನ ಸ್ಥಾಪಕರೂ ಆಗಿದ್ದಾರೆ. ಈ ಶಾಲೆಯ ಮಾದರಿ ಅಮೀರ್ ಖಾನ್ ಅವರ 3 ಈಡಿಯೆಟ್ಸ್ ಸಿನಿಮಾದಲ್ಲಿ ರಾಂಚೋ ಸ್ಕೂಲ್ ಹೆಸರಿನಲ್ಲಿ ಜನಪ್ರಿಯತೆ ಗಳಿಸಿತ್ತು. 

ಮಿಚೆಲ್ UNDP ಸುಸ್ಥಿರ ಅಭಿವೃದ್ಧಿ ಗುರಿಗಳಿಗಾಗಿ (SDGs) ಸದ್ಭಾವನಾ ರಾಯಭಾರಿಯೂ ಆಗಿದ್ದಾರೆ. 

ಇನ್ನು ಭಾರತದ ಸಂತ ನರೋಪಾ ಅವರ 1,000 ನೇ ಜನ್ಮದಿನಾಚರಣೆಯ ಭಾಗವಾಗಿ ನಡೆದ ನರೋಪಾ ಹಬ್ಬದಲ್ಲಿ ಭಾಗವಹಿಸಲು ಇಲ್ಲಿಗೆ ಬಂದಿದ್ದ ಮಿಚೆಲ್ ಭಾರತವನ್ನು ನೆನಪಿಸಿಕೊಳ್ಳುವುದು ಹೀಗೆ...  "ಇಲ್ಲಿಯದ್ದು ನನಗೆ ಎಂದಿಗೂ ಆಧ್ಯಾತ್ಮಿಕ ಪ್ರಯಾಣವಾಗಿದೆ. ಎತ್ತರದ ಪರ್ವತ ಹಾದಿಗಳು ಯಾವಾಗಲೂ ಬೌದ್ಧ ಕಲೆ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಭದ್ರಕೋಟೆಯನ್ನು ನನಗೆ ನೆನಪಿಸುತ್ತದೆ ಮತ್ತು ಈ ಶುದ್ಧತೆಯ ಮನೋಭಾವವು ಪ್ರಪಂಚದ ಬೇರೆ ಎಲ್ಲೂ ಕಾಣುವುದಿಲ್ಲ".

ಬೌದ್ಧ ನಾಯಕ ಗ್ಯಾಲ್ವಾಂಗ್ ದ್ರುಕ್ಪಾ 17 ನೇ ಶತಮಾನದ ಹೆಮಿಸ್ ಮಠವನ್ನು ನಡೆಸುತ್ತಿದ್ದು, ಇದು ಲೇಹ್ ನಿಂದ 40 ಕಿ.ಮೀ ದೂರದಲ್ಲಿದೆ. ಬೌದ್ಧಧರ್ಮವನ್ನು ಮಿಚೆಲ್, ತತ್ವಜ್ಞಾನ ಎಂದು ಬಣ್ಣಿಸಿದ್ದಾರೆ.


Stay up to date on all the latest ವಿದೇಶ news
Poll
N R narayana Murty

ಯಾವುದನ್ನೂ ಫ್ರೀಯಾಗಿ ಕೊಡಬಾರದು ಎಂದು ಎನ್ ಆರ್ ನಾರಾಯಣ ಮೂರ್ತಿ ಹೇಳಿದ್ದಾರೆ.


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp