PM Modi at Vantara: ಪ್ರಾಣಿ ರಕ್ಷಣೆ, ಪುನರ್ವಸತಿ ಕೇಂದ್ರದ ವಿಶೇಷತೆಗಳೇನು...?

Srinivas Rao BV

ಪ್ರಧಾನಿ ನರೇಂದ್ರ ಮೋದಿ, ಮಾ.04 ರಂದು ಅನಂತ್ ಅಂಬಾನಿಯವರ ಪ್ರಾಣಿಗಳ ರಕ್ಷಣೆ, ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರವಾದ ವಂತಾರಕ್ಕೆ ಭೇಟಿ ನೀಡಿ ಉದ್ಘಾಟಿಸಿದರು.

ಪ್ರಾಣಿ ರಕ್ಷಣಾ ಕೇಂದ್ರ ವಂತಾರ ಅಂಬಾನಿ ಒಡೆತನದ್ದಾಗಿದೆ.

ಅನಾಥ ಪ್ರಾಣಿಗಳನ್ನು ಪ್ರಾಣಿಗಳನ್ನು ಸಂರಕ್ಷಿಸುವ ಉದ್ದೇಶದಿಂದ ರಿಲಯನ್ಸ್ ಫೌಂಡೇಶನ್ ವಂತರಾ ಎಂಬ ಸಮಗ್ರ ಯೋಜನೆಯನ್ನು ಪ್ರಾರಂಭಿಸಿದೆ.

ಬಹ್ರೇನ್‌ನಲ್ಲಿ ಪ್ರಾಣಿ ಸಂಗ್ರಾಹಲಯದಲ್ಲಿ ಪ್ರಾಣಿಗಳನ್ನು ಸಾಕಲು ಸಾಧ್ಯವಾಗದೆ ಕೈಬಿಡಲಾಗಿತ್ತು. ಅಲ್ಲಿಂದ ತರಲಾದ 200 ಪ್ರಾಣಿಗಳಿಗೆ ಜಾಮ್ ನಗರದಲ್ಲಿರುವ ವಂತಾರದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ.

ಪ್ರಧಾನಿ ಈ ಕೇಂದ್ರಕ್ಕೆ ಭೇಟಿ ನೀಡಿ ಸಮಯ ಕಳೆದಿದ್ದಾರೆ. ವಂತಾರದಲ್ಲಿ 2,000 ಕ್ಕೂ ಹೆಚ್ಚು ಪ್ರಭೇದಗಳ ಪ್ರಾಣಿಗಳಿದ್ದು, ರಕ್ಷಿಸಲಾಗಿದೆ

ಅಳಿವಿನಂಚಿನಲ್ಲಿರುವ ಮತ್ತು ಅಪಾಯದಲ್ಲಿರುವ ಪ್ರಾಣಿಗಳು 1.5 ಲಕ್ಷ ಪ್ರಾಣಿಗಳಿಗೆ ಆಶ್ರಯ ಕಲ್ಪಿಸಲಾಗಿದೆ.

ರಿಲಯನ್ಸ್ ಜಾಮ್‌ನಗರ ಸಂಸ್ಕರಣಾಗಾರ ಸಂಕೀರ್ಣದಲ್ಲಿ 3000 ಎಕರೆಗಳಷ್ಟು ವಿಸ್ತಾರವಾಗಿದ್ದು, ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ.

ಪ್ರಧಾನಿ ಮೋದಿ ಒರಾಂಗುಟನ್‌ಗಳು, ಏಷ್ಯಾಟಿಕ್ ಸಿಂಹದ ಮರಿಗಳು, ಬಿಳಿ ಸಿಂಹದ ಮರಿ ಮತ್ತು ಅಪರೂಪದ ಪ್ರಾಣಿಗಳೊಂದಿಗೆ ಸಮಯ ಕಳೆದು ಆಹಾರ ನೀಡಿದರು.

ವಂತಾರಾದ ಕೇಂದ್ರದಲ್ಲಿ ಪ್ರಧಾನಿ ಮೋದಿ ವಿವಿಧ ಸೌಲಭ್ಯಗಳನ್ನು ಅನ್ವೇಷಿಸಿದರು.

Vantara ಉದ್ಘಾಟನೆ, ಒರಾಂಗುಟನ್ ಸಿಂಹದ ಮರಿಯೊಂದಿಗೆ PM Modi : Anant Ambani ಒಡೆತನದ ಪ್ರಾಣಿಗಳ ರಕ್ಷಣೆ ಪುನರ್ವಸತಿ ಕೇಂದ್ರದ ವಿಶೇಷತೆಗಳ ವಿಡಿಯೋ...