ಸರಿಯಾದ ಸಮಯದಲ್ಲಿ ಮಳೆ ಬಾರದೇ ಇರುವುದರಿಂದ ಮತ್ತಷ್ಟು ಕಾಫಿ ಉತ್ಪಾದನೆ ಸಾಧ್ಯವಾಗುತ್ತಿಲ್ಲ. ಭೂಮಿಯಲ್ಲಿ ನೀರಿನಂಶ ಪೂರ್ಣವಾಗಿ ಬತ್ತುಹೋಗಿದ್ದು, ಬೆಳೆದಿರುವ ಕೆಲವು ಕಾಫಿ ಗಿಡಗಳು ಒಣಗಿ ಹೋಗಿದೆ. ಬಾಣವಾರ, ಅಬ್ಬುರಕಟ್ಟೆ, ಎಡವರೆ ಮತ್ತು ಯಡವನಾಡು ಕಾಫಿ ಬೆಳಗಾರರು ಕಂಗಾಲಾಗಿದ್ದಾರೆ ಎಂದು ಮಡಿಕೇರಿ ಕಾಫಿ ಮಂಡಳಿ ಉಪ ನಿರ್ದೇಶಕ ಅನಂತ ಕುಮಾರ್ ತಿಳಿಸಿದ್ದಾರೆ.