ಜುನಾಗಢದ ಗಿರ್ನಾರ್ ವನ್ಯಜೀವಿ ಅಭಯಾರಣ್ಯದ ಸಿಬ್ಬಂದಿಗೆ ರೈತರೊಬ್ಬರು ಮಾಹಿತಿ ನೀಡಿದ ನಂತರ ಅವರು ಸ್ಥಳಕ್ಕೆ ಆಗಮಿಸಿದ್ದರು. "ಹೆಬ್ಬಾವು ಅಭಯಾರಣ್ಯದ ಸುತ್ತಮುತ್ತ ಸುಳಿದಾಡುತ್ತಿರುತ್ತದೆ, ಆದರೆ ಅದು ಕಣ್ಣಿಗೆ ಬೀಳುವುದು ಕಡಿಮೆ. ದೊಡ್ಡ ಪ್ರಾಣಿಯೊಂದನ್ನು ನುಂಗಿರುವ ವಿಷಯ ನಮಗೆ ದೂರವಾಣಿಯಲ್ಲಿ ತಿಳಿಯಿತು. ನಾವು ಕೂಡಲೇ ರಕ್ಷಣಾ ತಂಡವನ್ನು ಕಳುಹಿಸಿದೆವು, ಆಗ ಹೆಬ್ಬಾವು ನೀಲ್ಗಾಯ್ ಹಿಡಿದು ತಿಂದಿರುವುದಾಗಿ ತಿಳಿಯಿತು" ಎಂದು ಸಹ ವನ್ಯ ಸಂರಕ್ಷಕ ಎಸ್ ಡಿ ತಿಲಾಲ ಹೇಳಿದ್ದಾರೆ.