೮ ನಗರಗಳಲ್ಲಿ ಟಿಟಿಡಿ ಶ್ರೀನಿವಾಸ ಕಲ್ಯಾಣ

ವೆಂಕಟೇಶ್ವರ ಸ್ವಾಮಿಯ ಮಹಿಮೆಯನ್ನು ಎಲ್ಲೆಡೆ ಸಾರಲು ಮತ್ತು ತಿರುಮಲಕ್ಕೆ ಬರಲಾಗದ ಭಕ್ತರಿಗೆ ವೆಂಕಟೇಶ್ವರ ಸ್ವಾಮಿಯ ಆಶೀರ್ವಾದ ಪಡೆಯಲು ಅನುವಾಗಲು
ತಿರುಮಲ
ತಿರುಮಲ

ತಿರುಪತಿ: ವೆಂಕಟೇಶ್ವರ ಸ್ವಾಮಿಯ ಮಹಿಮೆಯನ್ನು ಎಲ್ಲೆಡೆ ಸಾರಲು ಮತ್ತು ತಿರುಮಲಕ್ಕೆ ಬರಲಾಗದ ಭಕ್ತರಿಗೆ ವೆಂಕಟೇಶ್ವರ ಸ್ವಾಮಿಯ ಆಶೀರ್ವಾದ ಪಡೆಯಲು ಅನುವಾಗಲು ಟಿಟಿಡಿ ಅಧಿಕಾರಿಗಳು ಮಾರ್ಚ್ ೭ ರಂದು ದೆಹಲಿಯ ಶ್ರೀ ವೆಂಕಟೇಶ್ವರ ಕಾಲೇಜು ಮೈದಾನದಲ್ಲಿ 'ಶ್ರೀನಿವಾಸ ಕಲ್ಯಾಣ' ಕಾರ್ಯಕ್ರಮ ನಡೆಸಲು ಮುಂದಾಗಿದ್ದಾರೆ.

ಅಲ್ಲದೆ ಒಟ್ಟಾಗಿ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಎಂಟು ನಗರಗಳಲ್ಲಿ ಕೂಡ 'ಶ್ರೀನಿವಾಸ ಕಲ್ಯಾಣ' ಕಾರ್ಯಕ್ರಮ ನಡೆಸಲು ಮುಂದಾಗಿದ್ದಾರೆ.

ದೆಹಲಿಯನ್ನು ಹೊರತುಪಡಿಸಿ ಮಾರ್ಚ್ ೮ ರಂದು ಹರ್ಯಾಣದ ಕುರುಕ್ಷೇತ್ರದಲ್ಲಿ ಕಟ್ಟಲಾಗುತ್ತಿರುವ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ, ಮಾರ್ಚ್ ೯ ರಂದು ಪಂಜಾಬಿನ ಲುಧಿಯಾನಾದ ಕೃಷಿ ಕಾಲೇಜಿನ ಮೈದಾನದಲ್ಲಿ ಹಾಗು ಮಾರ್ಚ್ ೧೦ ರಂದು ಉತ್ತರಾಖಾಂಡದ ಡೆಹ್ರಾಡೂನಿನ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ 'ಶ್ರೀನಿವಾಸ ಕಲ್ಯಾಣ' ಕಾರ್ಯಕ್ರಮ ನಡೆಯಲಿದೆ.

ದಕ್ಷಿಣ ಭಾರತದಲ್ಲಿ ಪ್ರಕಾಶಂ ಜಿಲ್ಲೆಯ ಪಮರು ಮತ್ತು ದೊರ್ನಾಲ ದಲ್ಲಿ ಕ್ರಮವಾಗಿ ಮಾರ್ಚ್ ೧೭ ಮತ್ತು ೧೮ ರಂದು 'ಶ್ರೀನಿವಾಸ ಕಲ್ಯಾಣ' ಕಾರ್ಯಕ್ರಮ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com