ಭಾರತದ ಭೂಮಿಯಲ್ಲಿವೈವಿಧ್ಯತೆ ಇದೆ. ನೆಲದ ಬಗ್ಗೆ ಗಮನ ಕೊಡುವ ಉದಾತ್ತವಾದ ನೆಲಮುಖೀ ಸಂಸ್ಕೃತಿಯ ಸಮೃದ್ಧಿಆಗರವಾಗಿದೆ. ಭಾರತೀಯರಲ್ಲಿರುವ ನಂಬಿಕೆಗಳು, ಪಾರಂಪರಿಕ ಆಚರಣೆಗಳು ಮುಂದುವರೆಯುತ್ತಲೇಹೋಗುತ್ತಿದೆ. ವಿಜ್ಞಾನ ತಂತ್ರಜ್ಞಾನಗಳು ದೇಶದಲ್ಲಿ ಎಷ್ಟೇ ಮುಂದುವರೆಯುತ್ತಿದ್ದರು. ಅವುಗಳಜೊತೆಜೊತೆಗೆ ಮೂಢನಂಬಿಕೆಗಳು ಸಾಗುತ್ತಲೇ ಹೋಗುತ್ತಿದೆ. ಭಾರತದಲ್ಲಿ ವಾಸಿಸುವ ಹಲವು ಭಾರತೀಯರುಜ್ಯೋತಿಷ್ಯ, ವಾಸ್ತು, ಭವಿಷ್ಯ, ಹಸ್ತ ಮುದ್ರಿಕೆ ಇತ್ಯಾದಿಗಳ ಬೆನ್ನು ಬೀಳುತ್ತಲೇ ಇರುತ್ತಾರೆ.
ನಂಬಿಕೆಗಳು ಜನರಮಾನಸಿಕ ಹಾಗೂ ಧಾರ್ಮಿಕ ಆಚರಣೆಗಳಿಗೆ ಬಿಟ್ಟ ವಿಚಾರ. ನಂಬಿಕೆ ಎಂಬುದು ವ್ಯಕ್ತಿಯ ಧನಾತ್ಮಕ ಹಾಗೂಋಣಾತ್ಮಕ ಚಿಂತನೆಗಳನ್ನು ಬದಲಾಯಿಸಬಲ್ಲದು. ಆ ನಂಬಿಕೆಯಿಂದ ಭಾರತೀಯರು ಇಂದಿಗೂ ಹಲವು ಹಿರಿಯರುನಡೆಸಿಕೊಂಡು ಬಂದಿರುವ ಆಚರಣೆಗಳು ಹಾಗೂ ನಂಬಿಕೆಗಳನ್ನು ಪಾರಂಪರಿಕವಾಗಿ ಮುಂದುವರೆಸಿಕೊಂಡುಬರುತ್ತಲಿರುವುದು. ಭಾರತೀಯರಲ್ಲಿ ಮನೆ, ವಾಸ್ತು, ಭವಿಷ್ಯ, ಭೂಮಿ,ಸಂಸ್ಕೃತಿ, ಆಚಾರ ವಿಚಾರಗಳೆಂಬ ನಾನಾ ರೀತಿಯನಂಬಿಕೆಗಳಿದ್ದು, ಈ ನಂಬಿಕೆಗಳಲ್ಲಿ ಗಿಡಗಳೂ ಕೂಡ ಪ್ರಮುಖಪಾತ್ರಹೊಂದಿವೆ. ಗಿಡಗಳಲ್ಲಿ ಕೆಲವು ಸಸ್ಯಗಳು ಮನೆಯಲ್ಲಿ ಉತ್ತಮ ವಾತಾವರಣ ಆರೋಗ್ಯ. ಸಂಪತ್ತುನೀಡುತ್ತದೆ ಎಂಬ ನಂಬಿಕೆಗಳು ಹಿರಿಯರಲ್ಲಿತ್ತು. ಈ ನಂಬಿಕೆಯು ಇಂದಿನ ಆಧುನಿಕ ಜಗತ್ತಿನಲ್ಲಿಯೂಮುಂದುವರೆದುಕೊಂಡು ಬಂದಿದೆ. ವೈಜ್ಞಾನಿಕವೋ ಮೂಢನಂಬಿಕೆಯೋ ಭಾರತೀಯರ ಮನೆಯಲ್ಲಿ ಪ್ರತಿಯೊಂದುಮನೆಯಲ್ಲಿಯೂ ಕನಿಷ್ಟ ಎಂದರೂ ಒಂದು ಗಿಡವನ್ನಾದರೂ ನಾವು ಕಾಣಬಹುದು.
ಭಾರತೀಯನಂಬಿಕೆಗಳಲ್ಲಿರುವ ಕೆಲವು ಅದೃಷ್ಟ ತರಬಲ್ಲ ಗಿಡಗಳು ಹಾಗೂ ಅದರ ವೈಜ್ಞಾನಿಕ ಗುಣಗಳು ಈಕೆಳಕಂಡಂತೆ ನೋಡಬಹುದು.
ಗಾಜಿನ ಲೋಟದಲ್ಲಿನೀರು ಹಾಕಿ ಅದರಲ್ಲಿ ನಿಂಬೆಹಣ್ಣನ್ನು ಹಾಕಿ ಮನೆಯಲ್ಲಿಡುವುದನ್ನು ನಾವು ಪ್ರತಿನಿತ್ಯ ಕಾಣತ್ತಲೇಇರುತ್ತೇವೆ. ಬಹುತೇಕ ವ್ಯಾಪಾರಸ್ಥ ಅಂಗಡಿಗಳಲ್ಲಿ ಇದುಸಾಮಾನ್ಯವಾಗಿರುತ್ತದೆ. ಇದಕ್ಕೆ ಕಾರಣ ನಿಂಬೆಹಣ್ಣು ದೃಷ್ಟಿಯಾಗದಂತೆರಕ್ಷಣೆ ಮಾಡುತ್ತದೆ ಎಂದು ಬಹುತೇಕ ಜನರು ಇದನ್ನು ಬಳಸುತ್ತಾರೆ. ವೈಜ್ಞಾನಿಕವಾಗಿ ನಿಂಬೆ ಅನೇಕ ರೀತಿಯ ಔಷಧೀಯಗುಣಗಳನ್ನು ಹೊಂದಿದ್ದು, ಇದರಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ.
ಬಿಲ್ವಪತ್ರೆ (Bilvapatre)
ಬಿಲ್ವಪತ್ರೆಯದರ್ಶನದಿಂದ ಪುಣ್ಯ ಲಭಿಸುತ್ತದೆ. ಸ್ಪರ್ಶಿಸುವುದರಿಂದ ಸಕಲ ಪಾಪಗಳೂ ನಾಶವಾಗುತ್ತದೆ. ಒಂದುಬಿಲ್ವಪತ್ರೆಯನ್ನು ಶಿವನಿಗೆ ಭಕ್ತಿ ಶ್ರದ್ಧೆಯಿಂದ ಪೂಜಿಸಿದರೆ ಘೋರವಾದ ಪಾಪಗಳು ನಾಶವಾಗುತ್ತದೆ.ಶುಕ್ರವಾರದಂದು ಈ ಬಿಲ್ವ ಫಲವನ್ನು ಪೂಜಿಸಿ ಮನೆಯಲ್ಲಿ ಇಟ್ಟರೆ ಆರ್ಥಿಕ ಪರಿಸ್ಥಿತಿಯಲ್ಲಿಸುಧಾರಣೆಯಾಗುತ್ತದೆ. ವ್ಯಾಪಾರ ವ್ಯವಹಾರಗಳು ಅಭಿವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.ಆಯುರ್ವೇದದಲ್ಲಿ ಈ ಮರದ ಪ್ರತಿಯೊಂದು ಭಾಗವು ಔಷಧಿಯ ಗುಣದಿಂದ ಕೂಡಿದೆ ಎಂಬ ನಂಬಿಕೆಯಲ್ಲಿ ಈಗಿಡವನ್ನು ಬಳಸುತ್ತಾರೆ. ವೈಜ್ಞಾನಿಕವಾಗಿ ಬಿಲ್ವಪತ್ರೆಯನ್ನು ಪ್ರತಿದಿನ ನೀರಿಗೆ ಹಾಕಿ ಮೂರುಗಂಟೆಗಳ ನಂತರ ಆ ನೀರನ್ನು ಸೇವಿಸಿದರೆ ಆರೋಗ್ಯವೂ ಉತ್ತಮವಾಗಿ ಇರುತ್ತದೆ. ಬಿಲ್ವಪತ್ರೆಯನ್ನುಕ್ರಮವಾಗಿ ಸೇವಿಸಿದರೆ ಮಧುಮೇಹ ನಿಯಂತ್ರಣದಲ್ಲಿರುತ್ತದೆ. ಕಾರಣ ಬಿಲ್ವಪತ್ರೆಯ ಔಷಧಿ ಗುಣದಿಂದಕೂಡಿದೆ. ಎಷ್ಟೋ ಕಾಯಿಲೆಗಳು ಈ ಬಿಲ್ವಪತ್ರೆ ಸೇವನೆಯಿಂದ ವಾಸಿಯಾಗಿದೆ. ಬಿಲ್ವಪತ್ರೆಯ ಹಣ್ಣಿನಸೇವನೆ ಮಾಡಿದರೆ ಅಜೀರ್ಣ, ಅತಿಸಾರ, ರಕ್ತದಿಂದಾಗುವ ತೊಂದರೆಗಳು ಪಿತ್ತ, ವಾತ, ಕಫ, ಕಡಿಮೆಯಾಗುತ್ತದೆ.
ತುಳಸಿ ಗಿಡವುಒಂದು ಅದ್ಭುತ ಔಷಧಿ ಸಸ್ಯ ಎಂದೇ ಹೆಸರಾಗಿದೆ. ಇದರ ಉಪಯೋಗ ಮತ್ತು ಮಹತ್ವವನ್ನು ಆಯುರ್ವೇದಶಾಸ್ತ್ರದಲ್ಲಿ ಸಾರಿ ಸಾರಿ ಹೇಳಲಾಗಿದೆ. ಯಾರ ಮನೆಯಲ್ಲಿ ಈ ಪವಿತ್ರ ತುಳಸಿ ಬೃಂದಾವನವಿರುತ್ತದೋ, ಆ ಮನೆಗೆ ಯಾವ ದುಷ್ಟ ಶಕ್ತಿಗಳ ಕಾಟಇರುವುದಿಲ್ಲ ಎಂಬ ನಂಬಿಕೆ ಹಿಂದೂ ಸಂಸ್ಕೃತಿಯಲ್ಲಿದೆ. ಜತೆಗೆ ಮನೆಯವರೆಲ್ಲರಿಗೂ ಆರೋಗ್ಯ. ಮನೆಯಸ್ತ್ರೀಗೆ ಸೌಭಾಗ್ಯ ಬರುತ್ತದೆ. ಇದು ಬೆಳೆದ ಸುತ್ತಮುತ್ತಲ ಪ್ರದೇಶವು ಪವಿತ್ರವಾಗುತ್ತದೆ. ಇದರಮೇಲೆ ಬೀಸುವ ಗಾಳಿಯನ್ನು ಸೇವಿಸಿದರೆ ಆರೋಗ್ಯವಂತರಾಗಿ ಮತ್ತು ಜನ್ಮ ಜನ್ಮಾಂತರದ ಪಾಪಗಳಪರಿಹಾರವಾಗುತ್ತದೆ ಎಂಬ ನಂಬಿಕೆಗಳು ಜನರಲ್ಲಿದೆ. ವೈಜ್ಞಾನಿಕವಾಗಿ ಈ ತುಳಸಿ ಗಿಡಮೂಲಕೆಯು ಶೀತ, ತಲೆನೋವು, ಅಜೀರ್ಣ, ಮಲೇರಿಯಾ ಮತ್ತುಹೃದಯ ಸಂಬಂಧದ ಸಮಸ್ಯೆಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ. ಅಲ್ಲದೆ ಶರೀರದಲ್ಲಿರುವ ಹಲವುವಿಷಕ್ರಿಮಿಗಳನ್ನು ಇವು ನಾಶ ಮಾಡುತ್ತದೆ ಎಂದು ಹೇಳಲಾಗುತ್ತದೆ.
ಚೈನೀಸ್ ಎವರ್ಗ್ರೀನ್(Chinese Evergreen)
ಚೈನೀಸ್ ಎವರ್ಗ್ರೀನ್ ಗಿಡವು ಗಾಳಿಯನ್ನು ಶುದ್ಧೀಕರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಆದ್ದರಿಂದಲೇ ಏನೋ ಫೆಂಗ್ ಶುಯಿ ವಾಸ್ತುಶಾಸ್ತ್ರದಲ್ಲಿ ಈ ಗಿಡಕ್ಕೂ ಮಹತ್ವ ನೀಡಲಾಗಿದೆ.
ಚಿಕಣಿ ಗುಲಾಬಿಗಿಡ ಸಿಗುವುದು ಅತಿ ವಿರಳ. ಈ ಗುಲಾಬಿಯು ಅದೃಷ್ಟ, ಪ್ರೀತಿ ಸಹನೆ, ಶಾಂತಿಯನ್ನು ವೃದ್ಧಿಸುತ್ತದೆ ಎಂದುಹೇಳುತ್ತಾರೆ. ಈ ಚಿಕಣಿ ಗುಲಾಬಿಯಲ್ಲೂ ವಿವಿಧ ರೀತಿಯಬಣ್ಣಗಳಿದ್ದು, ಪ್ರತಿಯೊಂದು ಬಣ್ಣದ ಗುಲಾಬಿಯೂ ವಿಶಿಷ್ಟಶಕ್ತಿಯನ್ನು ಹೊಂದಿರುತ್ತದೆ. ಆವುಗಳಲ್ಲಿ. ಬಿಳಿಬಣ್ಣದ ಗುಲಾಬಿಯು ಧನಾತ್ಮಕ ಚಿಂತನೆ ಹಾಗೂ ಮಾನಸಿಕ ಶಕ್ತಿಯನ್ನುವೃದ್ಧಿಸುತ್ತದೆ.
ಸೀತೆ ಹೂವಿನ ಗಿಡ (Orchid)
ಪ್ರೀತಿಸುವವ್ಯಕ್ತಿ ನಮ್ಮೊಡನೆ ಆಕರ್ಷಿತರಾಗುವಂತೆ ಈ ಗಿಡ ಮಾಡುತ್ತದೆ ಮತ್ತು ಧೀರ್ಘಕಾಲಿಕ ಸ್ನೇಹಉಳಿಯುವಂತೆ ಮಾಡುತ್ತದೆ ಎಂದು ಹೇಳುತ್ತಾರೆ. ವೈಜ್ಞಾನಿಕವಾಗಿ ಈ ಗಿಡದ ಹೂವಿನ ದಳಗಳು ಪುರುಷರ ಪುರುಷತ್ವವನ್ನುವೃದ್ಧಿಸುತ್ತದೆ. ಮತ್ತು ಮಣ್ಣಿನ ಫಲವತ್ತೆಯನ್ನು ಹೆಚ್ಚಿಸುತ್ತದೆ.
ರೋಸ್ಮೆರಿ (Rosemary)
ಆಸ್ತಿ ಹಣವನ್ನು ಕಾಪಾಡುತ್ತದೆ. ಅಲ್ಲದೆ, ಭೂತಚೇಷ್ಟೆಗಳನ್ನು ದೂರ ಮಾಡುತ್ತದೆ ಎಂದು ಹೇಳುತ್ತಾರೆ. ವೈಜ್ಞಾನಿಕವಾಗಿ ಈ ಗಿಡ ಮಿದುಳಿನ ಶಕ್ತಿವೃದ್ಧಿಸುತ್ತದೆ. ರಾತ್ರಿ ವಿಶ್ರಾಮಕ್ಕೆ ಹಾಗೂ ಧೀರ್ಘಕಾಲಿಕಯುವಕರಂತೆ ಕಾಣುವಂತೆ ಮಾಡಲು ಸಹಾಯವಾಗಿದೆ.
ಸೇಜ್ (Sage)
ಈ ಗಿಡವನ್ನುಬೆಳೆಸುವುದರಿಂದ ಅಮರತ್ವ, ಧೀರ್ಘಾಯುಷ್ಯ. ಬುದ್ಧಿವಂತಿಕೆ ಮತ್ತು ಇಚ್ಛಿಸಿದನ್ನುನೀಡುತ್ತದೆ ಎಂದು ಹೇಳುತ್ತಾರೆ. ಆದರೆ ವೈಜ್ಞಾನಿಕವಾಗಿ ಈ ಗಿಡದಿಂದ ಬುದ್ಧಿಶಕ್ತಿವೃದ್ಧಿಸುವುದರೊಂದಿಗೆ ಧನಾತ್ಮಕ ಚಿಂತನೆ ಹಾಗೂ ಉತ್ತಮ ಆಲೋಚನೆಗಳಿಗೆ ದಾರಿ ಮಾಡುಕೊಡುತ್ತದೆ.
- ಮಂಜುಳ.ವಿ.ಎನ್
Advertisement