ಧ್ಯಾನದಲ್ಲಿ ಆಸಕ್ತಿಯುಳ್ಳವರಿಗೆ ಸಾಮಾನ್ಯವಾಗಿ ಸ್ಪಟಿಕ ಮಾಲೆ ಧರಿಸಿ ಧ್ಯಾನ ಮಾಡುವುದಕ್ಕೆ ಸೂಚಿಸಲಾಗುತ್ತದೆ. ಅದರಲ್ಲಿರುವ ಶೀತಲ ಗುಣ ಧ್ಯಾನಾಸಕ್ತನಾಗುವ ವ್ಯಕ್ತಿಯಲ್ಲಿನ ಬಾಹ್ಯ, ಆಂತರಿಕ ಒತ್ತಡಗಳನ್ನು ಕಡಿಮೆ ಮಾಡಿ ಮನಸ್ಸನ್ನೂ ಶೀತಲವಾಗಿರಿಸುತ್ತದೆ. ಗಾಯತ್ರಿ ಜಪ, ಸರಸ್ವತಿ ಜಪ, ರಾಮ ಜಪ ಸೇರಿದಂತೆ ಹಲವು ದೇವರುಗಳ ಕುರಿತಾದ ಜಪಗಳಿಗೆ ಸ್ಪಟಿಕ ಮಾಲೆ ಧರಿಸಿ ಜಪ ಮಾಡುವುದು ಸೂಕ್ತ ಎಂಬ ನಂಬಿಕೆ ಇದೆ.