ಉಪನಿಷತ್ ಗಳು ವಿಶ್ವಕ್ಕೆ ಭಾರತ ನೀಡಿರುವ ಅನನ್ಯ ಕೊಡುಗೆಯಾಗಿದ್ದು, ಈಶ, ಕೇನ, ಕಠ, ಪ್ರಶ್ನ, ಮುಂಡಕ, ಮಾಂಡೂಕ್ಯ, ಐತರೇಯ ಸೇರಿದಂತೆ 11 ಉಪನಿಷತ್ ಗಳ ಪೈಕಿ ತೈತ್ತಿರೀಯೋಪನಿಷತ್ ಸಹ ಒಂದು. ಇದು ಕೃಷ್ಣ ಯಜುರ್ವೇದದ ತೈತ್ತಿರೀಯ ಆರಣ್ಯಕಕ್ಕೆ ಸೇರಿದ್ದು ಶಿಕ್ಷಾ ವಲ್ಲಿ, ಬ್ರಹ್ಮಾನಂದ ವಲ್ಲಿ, ಭೃಗುವಲ್ಲಿ ಎಂಬ ಮೂರು ಅಧ್ಯಾಯಗಳಿವೆ.