ಇದಕ್ಕೆ ಒಪ್ಪಿದ ಋಚೀಕ ಸತ್ಯವತಿ ಹಾಗೂ ಆಕೆಯ ತಾಯಿ ಇಬ್ಬರಿಗೂ ಪುತ್ರ ಸಂತಾನವಾಗುವುದಕ್ಕೆ ವ್ರತಾಚರಣೆ ಕೈಗೊಳ್ಳಲು ಹೇಳುತ್ತಾನೆ. ಇಬ್ಬರಿಗೂ ಬೇರೆ ರೀತಿಯಲ್ಲಿ ವ್ರತಾಚರಣೆ ಮಾಡಲು ಹೇಳಿದ್ದರೂ ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಸತ್ಯವತಿಗೆ ಹೇಳಿದ್ದ ವ್ರತವನ್ನು ಅವಳ ತಾಯಿ ಹಾಗೂ ತಾಯಿಯ ವ್ರತವನ್ನು ಸತ್ಯವತಿ ಆಚರಿಸುತ್ತಾರೆ. ಆದ್ದರಿಂದ ಸತ್ಯವತಿ- ಋಚೀಕ ಮಗ ಜಮದಗ್ನಿಗೆ ಕ್ಷಾತ್ರ ಗುಣಗಳಿರುತ್ತದೆ, ಅದೇ ಗುಣಗಳನ್ನು ಜಮದಗ್ನಿಯ ಮಗ ಪರಶುರಾಮನೂ ಪಡೆದಿರುತ್ತಾನೆ, ಆದ್ದರಿಂದಲೇ ತನ್ನ ತಂದೆ ಜಮದಗ್ನಿಯನ್ನು ಕೊಂದ ರಾಜ ಕಾರ್ತಿವೀರ್ಯಾರ್ಜುನನ ಮೇಲೆ ಸೇಡು ತೀರಿಸಿಕೊಳ್ಳಲು ಸಮಸ್ತ ಕ್ಷತ್ರಿಯರನ್ನೇ ನಾಶ ಮಾಡಿ ತನ್ನದೇ ಆದ ಹೊಸ ಭೂ ಪ್ರದೇಶವನ್ನು ಸೃಷ್ಟಿಸುತ್ತಾನೆ. ಈ ಪ್ರದೇಶಕ್ಕೇ ದಕ್ಷಿಣ ಕನ್ನಡ, ಗೋವಾ, ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಕರಾವಳಿ ಪ್ರದೇಶಕ್ಕೆ ಪರಶುರಾಮ ಸೃಷ್ಟಿ ಎಂದು ಹೆಸರು ಬಂದಿದೆ.