ಈಶಾನ್ಯ ಮೂಲೆಯಲ್ಲಿ ಶೌಚಾಲಯ ನಿಷಿದ್ಧ: ಈಶಾನ್ಯ ದಿಕ್ಕಿನ ಅಧಿಪತಿ ಸದಾಶಿವನಾದ ಈಶ್ವರನಾಗಿದ್ದು, ಸ್ವಚ್ಛತೆಗೆ ಆದ್ಯತೆ ನೀಡಬೇಕು. ಆದ್ದರಿಂದಲೇ ಈಶಾನ್ಯ ಮೂಲೆಯಲ್ಲಿ ಶೌಚಾಲಯ ನಿರ್ಮಿಸುವುದು ನಿಷಿದ್ಧ ಎಂದು ಹೇಳಲಾಗಿದೆ. ಈಶಾನ್ಯ ಮಾತ್ರವಲ್ಲದೇ ಪೂರ್ವ ದಿಕ್ಕಿನಲ್ಲಿ ಸಹ ಶೌಚಾಲಯ ನಿರ್ಮಾಣ ಸೂಕ್ತವಲ್ಲ, ಪೂರ್ವ ದಿಕ್ಕಿನಲ್ಲಿ ಶೌಚಾಲಯ ನಿರ್ಮಿಸಿದರೆ ಅನಾರೋಗ್ಯ ಎದುರಾಗುವ ಸಂಭವ ಹೆಚ್ಚು ಎಂಬುದು ತಜ್ಞರ ಅಭಿಪ್ರಾಯ. ಅದಕ್ಕಾಗಿಯೇ ದೇವರ ಮನೆಗೆ ಈಶಾನ್ಯ, ನೈರುತ್ಯ, ವಾಯುವ್ಯದಲ್ಲಿ ಬಚ್ಚಲು ಮನೆ, ಶೌಚಾಲಯ ನಿರ್ಮಾಣ, ಉತ್ತರ ಈಶಾನ್ಯದಲ್ಲಿ ನೀರಿನ ಟ್ಯಾಂಕ್, ಬಾವಿ, ನಿರ್ಮಿಸುವುದು ಶುಭ ಹಾಗೂ ಸೂಕ್ತ ಎಂದು ಹೇಳಲಾಗುತ್ತದೆ.