ಗುರುಪೂರ್ಣಿಮೆಯಂದು ಗುರುವಿನಿಂದ ಅನುಗ್ರಹ, ಉಪದೇಶ ಪಡೆದರೆ, ಯಾವುದೇ ವ್ಯಕ್ತಿಯಲ್ಲಿರುವ ಸಂದೇಹ, ಜಿಜ್ಞಾಸೆಗಳು ಬಗೆಹರಿದು ಉತ್ತಮ ಜೀವನ ನಡೆಸಲು ಸಾಧ್ಯ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಗುರುಪೂರ್ಣಿಮೆಯ ದಿನದಂದು, ಸದಾಶಿವ, ವಿಷ್ಣು, ವಸಿಷ್ಠ ಮಹರ್ಷಿ, ಶಕ್ತಿ ಮಹರ್ಷಿ, ಪರಾಶರ ಮಹರ್ಷಿ, ವಿಷ್ಣುವಿನ ರೂಪವಾಗಿರುವ, ವೇದಗಳನ್ನು ವಿಭಾಗಿಸಿದ ವ್ಯಾಸರಿಂದ ಮೊದಲುಗೊಂಡು, ಶುಕಾಚಾರ್ಯರಿಂದ ಮುಂದುವರೆದ ಗುರು ಪರಂಪರೆಯನ್ನು ಆಯಾ ಪರಂಪರೆ ಹಾಗೂ ಸಂಪ್ರದಾಯಗಳಿಗೆ ತಕ್ಕಂತೆ ಆರಾಧಿಸಲಾಗುತ್ತದೆ.