ಆಷಾಢ ಮಾಸ ಮುಗಿದು, ಶ್ರಾವಣ ಮಾಸ ಬಂದಿದೆ. ಶ್ರಾವಣ ಮಾಸವನ್ನು ಹಿಂದೂ ಪಂಚಾಂಗದಲ್ಲಿ ಅತ್ಯಂತ ಮಹತ್ವ ಹಾಗೂ ದೈವಿಕ ಮಾಸ ಎಂದೇ ಪರಿಗಣಿಸಲಾಗಿದೆ. ಈ ಮಾಸವನ್ನು ಶಿವನಿಗೆ ಅರ್ಪಿಸಲಾಗಿದ್ದು, ಹಬ್ಬಗಳ ಸಾಲು ಪ್ರಾರಂಭವಾಗುವ ಮಾಸ ಎಂದೇ ಹೇಳಲಾಗುತ್ತದೆ. ಶ್ರಾವಣದಲ್ಲಿ ನಾಗರ ಪಂಚಮಿ ಮಂಗಳ ಗೌರಿ ವ್ರತಗಳನ್ನು ಆಚರಿಸುವ ಪದ್ಧತಿ ಇದ್ದು, ಈ ಮಾಸದ ಸೋಮವಾರಗಳಿಗೆ ವಿಶೇಷ ಮಹತ್ವವಿದೆ.