ಶಂತನು ಹಾಗೂ ಗಂಗೆಯ ಪುತ್ರನಾಗಿ ಹುಟ್ಟಿದ ಭೀಷ್ಮರ ಮೂಲ ಹೆಸರು ದೇವವ್ರತ ಎಂದು. ಬಾಲ್ಯವನ್ನು ತಾಯಿಯೊಂದಿಗೆ ಕಳೆದ ದೇವವ್ರತನಿಗೆ ಭರತ ವರ್ಷದ ಋಷಿ ಶ್ರೇಷ್ಠರಾದ ವಸಿಷ್ಠರು, ದೇವತೆಗಳಿಗೆ ಗುರುವಾಗಿರುವ ಬೃಹಸ್ಪತಿ, ಶುಕ್ರಾಚಾರ್ಯ, ಪರಶುರಾಮರಿಂದ ಶಿಕ್ಷಣ ದೊರೆಯಿತು. ಶಿಕ್ಷಣ ಮುಕ್ತಾಯಗೊಳಿಸುತ್ತಿದ್ದಂತೆಯೇ, ತಾಯಿ ಗಂಗೆ ದೇವವ್ರತನನ್ನು ಮಹಾರಾಜ ಶಂತನುವಿಗೆ ಒಪ್ಪಿಸಿದಳು. ಶಂತನುವಿನ ನಂತರ ದೇವವ್ರತನೇ ಹಸ್ತಿನಾಪುರದ ಸಿಂಹಾಸನಕ್ಕೆ ಉತ್ತರಾಧಿಕಾರಿಯಾಗಿಯೂ ನಿಯೋಜಿತನಾದ. ಸ್ವತಃ ಶಂತನು ತನ್ನ ಮಗ ದೇವವ್ರತನನ್ನು ಹಸ್ತಿನಾವತಿಯ ಉತ್ತರಾಧಿಕಾರಿ ಎಂದು ಘೋಷಿಸುತ್ತಾನೆ. ಆದರೆ ವಿಧಿಯ ಆಟವೇ ಬೇರೆ ಇರುತ್ತದೆ.