ಹಲವು ರೋಗಗಳಿಗೆ ರಾಮಬಾಣವಾಗಿರುವ ವರದಹಳ್ಳಿಯ ಮತ್ತೊಂದು ವಿಶೇಷವೆಂದರೆ ಇಲ್ಲಿನ ಗೋ ಮುಖದಿಂದ ಹೊರ ಹೊಮ್ಮುವ ತೀರ್ಥ ಜಲ. ಒಮ್ಮೆ ತುಂಬಿಟ್ಟರೆ ಎಷ್ಟೇ ವರ್ಷವಾದರೂ ಹಾಳಾಗದೇ ಉಳಿಯುವುದು ಈ ಜಲದ ವಿಶೇಷತೆ. ಹಾಗೆಯೇ ಇಲ್ಲಿನ ಜನರ ನಂಬಿಕೆಯಂತೆ ಈ ತೀರ್ಥ ಅನೇಕ ಚರ್ಮವ್ಯಾಧಿ ನಿವಾರಕವೂ ಆಗಿದೆ. ಹಾಗಾಗಿಯೇ ಶ್ರೀಧರಾಶ್ರಮಕ್ಕೆ ಭೇಟಿ ನೀಡುವ ಭಕ್ತರು ತಪ್ಪದೇ ತೀರ್ಥ ಸ್ನಾನ ಮಾಡುತ್ತಾರೆ. ಇಲ್ಲಿನ ಪರಿಶುಧ್ದ ಜಲ ಔಷದೀಯ ಗುಣಗಳನ್ನು ಹೊಂದಿದ್ದು ವ್ಯಾಧಿನಿವಾರಕ ,ಮಕ್ಕಳ ಭಯ ನಿವಾರಕ ಎಂದೂ ಪ್ರಸಿದ್ದಿ ಪಡೆದಿದ್ದು, ಶ್ರೀಧರ ಸ್ವಾಮಿಗಳ ತಪೋಭೂಮಿ, ಗೋಮುಖ ತೀರ್ಥ ಅರಸಿ ಬರುವ ಭಕ್ತಾದಿಗಳಿಗೆ ದಿವೌಷಧವಾಗಿದೆ.