social_icon

ನವರಾತ್ರಿಯ ಒಂಭತ್ತು ದಿನ ಏನೇನು ಭಕ್ಷ-ಭೋಜ್ಯಗಳು?

ಪ್ರಾಂತೀಯಗಳಿಗನುಗುಣವಾಗಿ ಭಕ್ತರು ದಸರಾ ಸಮಯದಲ್ಲಿ ವಿಶೇಷ ತಿಂಡಿ-ತಿನಿಸುಗಳನ್ನು ಮಾಡಿ ದೇವಿಗೆ ನೈವೇದ್ಯ-ಪೂಜೆ ಮಾಡಿ ಸೇವಿಸುತ್ತಾರೆ. 

Published: 02nd October 2021 02:56 PM  |   Last Updated: 05th October 2021 02:23 PM   |  A+A-


Special dish during Navratri

ನವರಾತ್ರಿ ಸಮಯದ ತಿನಿಸಿನ ಸಂಗ್ರಹ ಚಿತ್ರ

Posted By : Sumana Upadhyaya
Source : Online Desk

ಪ್ರಾಂತೀಯಗಳಿಗನುಗುಣವಾಗಿ ಭಕ್ತರು ದಸರಾ ಸಮಯದಲ್ಲಿ ವಿಶೇಷ ತಿಂಡಿ-ತಿನಿಸುಗಳನ್ನು ಮಾಡಿ ದೇವಿಗೆ ನೈವೇದ್ಯ-ಪೂಜೆ ಮಾಡಿ ಸೇವಿಸುತ್ತಾರೆ. 

ವಿವಿಧ ಅನ್ನಗಳ ನೈವೇದ್ಯ: ಕರ್ನಾಟಕದಲ್ಲಿ ದೇವಿಗೆ 5 ವಿಧದ ಅನ್ನದ ನೈವೇದ್ಯವನ್ನು ನೀಡಲಾಗುತ್ತದೆ. ಬೆಲ್ಲ ಹಾಕಿದ ಅನ್ನ, ಅರಶಿನದ ಅನ್ನ ಹರಿದ್ರಾಣ, ಕೇಸರಿ ಅನ್ನ, ಮೊಸರನ್ನ, ತರಕಾರಿಗಳನ್ನು ಹಾಕಿ ಶಾಖಾನ್ನಗಳನ್ನು ತಯಾರಿಸುತ್ತಾರೆ. ನಂತರ ಒಬ್ಬಟ್ಟು, ಕರ್ಜಿಕಾಯಿ, ಲಡ್ಡು, ಅಂಬಡೆ, ಪಾಯಸ, ಅನ್ನ ಇತ್ಯಾದಿ ಸಿಹಿ ತಿನಿಸು, ಎಣ್ಣೆ ತಿಂಡಿಗಳನ್ನು ಸಹ ಮಾಡಲಾಗುತ್ತದೆ. 

ಪಶ್ಚಿಮ ಬಂಗಾಳದಲ್ಲಿ ನವರಾತ್ರಿ ಸಮಯದಲ್ಲಿ ರಸಗುಲ್ಲ ನೈವೇದ್ಯ ಮಾಡಿದರೆ, ಗುಜರಾತ್ ರಾಜ್ಯದಲ್ಲಿ ದೋಕ್ಲ ಮಾಡುತ್ತಾರೆ. ಹಿಮಾಲಯ ಕಡೆ ಹೋದರೆ ಸಜ್ಜಿಗೆ ನೈವೇದ್ಯವನ್ನು ಅಮ್ಮನವರಿಗೆ ಮಾಡುತ್ತಾರೆ. ಮಹಾರಾಷ್ಟ್ರದಲ್ಲಿ ಬೇರೆ ತಿಂಡಿಗಳನ್ನು ಮಾಡುತ್ತಾರೆ. ಹಬ್ಬದ ಸಮಯದಲ್ಲಿ ತಿಂಡಿ-ತಿನಿಸುಗಳನ್ನು ತಯಾರಿಸುವುದು ಪ್ರಾಂತೀಯ.

ಕರ್ನಾಟಕದಲ್ಲಿ ಹೇಗೆ?: ಕರ್ನಾಟಕದಲ್ಲಿಯೂ ಮನೆ-ಮನೆಗಳಲ್ಲಿ ಒಂದೊಂದು ರೀತಿಯ ಭಕ್ಷ್ಯ-ಭೋಜ್ಯಗಳನ್ನು ತಯಾರಿಸಲಾಗುತ್ತದೆ. ನವದುರ್ಗೆಯರಲ್ಲಿ ಪ್ರತಿದಿನ ಆಯಾ ದೇವಿಯರ ಕುಂಕುಮಾರ್ಚನೆ ಮಾಡಿ ಪಾಯಸ, ಸಿಹಿ ಪೊಂಗಲ್, ಕೋಸಂಬರಿ, ಕಡಲೆ ಉಸುಲಿ ಹೀಗೆ ತಿನಿಸುಗಳ ನೈವೇದ್ಯ ಮಾಡಿ ಮಂಗಳಾರತಿ ಮಾಡಿ ಸಂಜೆಯ ವೇಳೆಗೆ ಮುತ್ತೈದೆಯರನ್ನು, ಹೆಣ್ಣುಮಕ್ಕಳನ್ನು ಕರೆದು ಬಾಗಿನ, ತೆಂಗೊಳು, ಚಕ್ಕುಲಿ, ಉಂಡೆ ಕೊಟ್ಟು ಆರತಿ ಮಾಡುವ ಪದ್ಧತಿ ಇದೆ.

ಮುತ್ತೈದೆಯರು, ಕನ್ಯೆಯರು, ಪುಟ್ಟ ಮಕ್ಕಳು ಒಬ್ಬರು ಮತ್ತೊಬ್ಬರ ಮನೆಗೆ ಹೋಗುತ್ತಾ ದಸರಾ ಸಂಭ್ರಮದಲ್ಲಿ ಪಾಲ್ಗೊಂಡು ಸಂತೋಷಪಡುತ್ತಾರೆ. ಇದರಿಂದ ನಮ್ಮ ಸಂಪ್ರದಾಯ, ಆಚರಣೆಗಳು ಉಳಿಯುವುದಲ್ಲದೆ ಮುಂದಿನ ಜನಾಂಗಕ್ಕೂ ತೋರಿಸಿಕೊಟ್ಟು ಮಕ್ಕಳಲ್ಲಿ ಪ್ರಜ್ಞೆ ಮೂಡಿದಂತಾಗುತ್ತದೆ ಎನ್ನುತ್ತಾರೆ ಧಾರ್ಮಿಕ ಮತ್ತು ಆಧ್ಮಾತ್ಮಿಕ ಚಿಂತಕಿ ಡಾ. ವಿ.ಬಿ.ಆರತಿ.


Stay up to date on all the latest ಭಕ್ತಿ-ಭವಿಷ್ಯ news
Poll
K Annamalai

ಎನ್‌ಡಿಎಯಿಂದ ಹೊರಬರುವ ಎಐಎಡಿಎಂಕೆ ನಿರ್ಧಾರವು 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಸಾಧನೆ ಮೇಲೆ ಪರಿಣಾಮ ಬೀರಲಿದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp