ಬೆಂಗಳೂರು: ಆಸ್ಕರ್ ವಿದೇಶಿ ಅತ್ಯುತ್ತಮ ಸಿನೆಮಾ ಸ್ಪರ್ಧೆಗೆ ಭಾರತದಿಂದ ಅಧಿಕೃತವಾಗಿ ಆಯ್ಕೆಯಾಗಿದ್ದ ಚಿತ್ರ 'ವಿಸಾರಣೈ' ಎರಡನೇ ಹಂತದಲ್ಲಿ ಸ್ಪರ್ಧೆಯಿಂದ ಹೊರಬಿದ್ದಿದ್ದು ಹಲವರಿಗೆ ನಿರಾಸೆ ತಂದಿತ್ತಾದರೂ, ವೆನಿಸ್ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರಶಸ್ತಿ ಪಡೆದ ಈ ಸಿನೆಮಾದ ನಿರ್ದೇಶಕ ವೆಟ್ರಿಮಾರನ್, ತಾವು ಎದೆಗುಂದಿಲ್ಲ ಎಂದು ತಿಳಿಸಿದ್ದಾರೆ. ೯ ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಮಾತನಾಡಿದ ಅವರು "ನನ್ನನ್ನು ಮುಂದೂಡಿಕೊಳ್ಳಲು ನಾನು ಸಿನೆಮಾ ಮಾಡುವುದಿಲ್ಲ ಬದಲಾಗಿ ನನಗೆ ಯಾವುದಾದರೂ ಸಂಪೂರ್ಣವಾಗಿ ಒಪ್ಪಿತವಾದ ನಂತರವಷ್ಟೇ ನಿರ್ದೇಶನಕ್ಕೆ ಇಳಿಯುವುದು" ಎಂದಿದ್ದಾರೆ.