ಎಪಿಎಲ್ ಕಾರ್ಡ್‌ದಾರರಿಗೂ 'ಅನ್ನ ಭಾಗ್ಯ' ಯೋಜನೆ ವಿಸ್ತರಣೆ

ಎಪಿಎಲ್ ಕಾರ್ಡ್‌ದಾರರಿಗೂ 'ಅನ್ನ ಭಾಗ್ಯ' ಯೋಜನೆ ವಿಸ್ತರಣೆ
Updated on

ಬೆಂಗಳೂರು: 1 ರು.ಗೆ 1ಕೆಜಿ ಅಕ್ಕಿ ನೀಡುವ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯನ್ನು ಎಪಿಎಲ್ ಕಾರ್ಡ್‍ದಾರರಿಗೂ ವಿಸ್ತರಿಲಾಗಿದೆ.

ಎಪಿಎಲ್ ಕಾರ್ಡ್ ದಾರರಿಗೆ ತಿಂಗಳಿಗೆ ತಲಾ 15 ರೂ.ಗಳಿಗೆ 3 ಕೆಜೆ ಅಕ್ಕಿ. 10ರೂಪಾಯಿಯಂತೆ 2ಕೆಜಿ ಗೋದಿ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಇಂದು ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳು
• ಬಿಪಿಎಲ್ ಪಡಿತರ ಚೀಟಿ ಆಹಾರ ಧಾನ್ಯಗಳ ಘಟಕವಾರು ವಿತರಣಾ ಪದ್ಧತಿ ಅನುಷ್ಠಾನ.
• ಎ.ಎ.ವೈ. ಮತ್ತು ಬಿಪಿಎಲ್ ಕುಟುಂಬಗಳ ಪ್ರತಿ ಸದಸ್ಯನಿಗೆ ತಲಾ 5 ಕೆ.ಜಿ. ಉಚಿತ ಆಹಾರ ಧಾನ್ಯ ನೀಡಿಕೆ. ರಿಯಾಯಿತಿ ದರದಲ್ಲಿ 25 ರೂ.ಗಳಿಗೆ 1 ಲೀಟರ್ ತಾಳೆ ಎಣ್ಣೆ ಮತ್ತು 2 ರೂ.ಗಳಿಗೆ 1 ಕೆ.ಜಿ.ಯಂತೆ ಅಯೋಡಿನಯುಕ್ತ ಉಪ್ಪು ವಿತರಣೆ.
• ಎ.ಪಿ.ಎಲ್. ಪಡಿತರ ಚೀಟಿ ಹೊಂದಿದ ಕುಟುಂಬಗಳಿಗೆ ಒಬ್ಬ ಸದಸ್ಯರಿದ್ದಲ್ಲಿ 5 ಕೆ.ಜಿ. ಆಹಾರಧ್ಯಾನ, ಹೆಚ್ಚು ಸದಸ್ಯರಿದ್ದಲ್ಲಿ 10 ಕೆ.ಜಿ. ಆಹಾರಧಾನ್ಯ, ಪ್ರತೀ ಕೆ.ಜಿ. ಅಕ್ಕಿಗೆ 15 ರೂ. ಮತ್ತು ಪ್ರತೀ ಕೆ.ಜಿ.ಗೋಧಿಗೆ 10 ರೂ. ನಿಗದಿ.
• ಮೇ ತಿಂಗಳ 1ನೇ ತಾರೀಕಿನಿಂದ ಹೊಸ ಪಡಿತರ ಚೀಟಿಗಳಿಗಾಗಿ ಅರ್ಜಿ ಸ್ವೀಕಾರ.
• ಗ್ರಾಹಕರಿಗೆ ನೀಡುವ ಬಿಲ್ಲುಗಳಲ್ಲಿ ತೂಕದ ಜೊತೆಗೆ ಚಿನ್ನದ/ಬೆಲೆಬಾಳುವ ಹರಳುಗಳ ಅಪ್ಪಟತೆ/ಪರಿಶುದ್ಧತೆಯ ಕಡ್ಡಾಯ ನಮೂದು - ನಿಯಮಗಳಿಗೆ ಸೂಕ್ತ ತಿದ್ದುಪಡಿ.
• ಇ-ಮಾಪನ `ಯೋಜನೆ ಜಾರಿ' ಗಣಕೀಕೃತ ಪರಿಶೀಲನಾ ಪ್ರಮಾಣಪತ್ರಗಳು ಮತ್ತು ಲೈಸೆನ್ಸುಗಳ ಆನ್-ಲೈನ್ ವಿತರಣೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com