ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿಗೆ ರಾಹುಲ್ ಭೇಟಿ ನೀಡಿದ್ದ ವೇಳೆ, ಕಾಮರ್ಸ್ ಅಂಧ ವಿದ್ಯಾರ್ಥಿನಿ ಚಂದನಾ, ಅಂಧರು ಬಳಸುವ ವಿಶೇಷ ಸಾಧನಗಳ ಮೇಲಿನ ಸುಂಕದಿಂದ ಅಂಧರಿಗೆ ಯಾವ ರೀತಿ ಕಷ್ಟವಾಗುತ್ತಿದೆ ಎಂದು ವಿವರಿಸಿ, ಮಧ್ಯಪ್ರವೇಶಿಸುವಂತೆ ರಾಹುಲ್ ಗೆ ಮನವಿ ಮಾಡಿದ್ದಳು. ವಿದ್ಯಾರ್ಥಿನಿಯ ಕೋರಿಕೆ ಮೇರೆಗೆ ರಾಹುಲ್ ಗಾಂಧಿ ವಾಣಿಜ್ಯ ಸಚಿವರಿಗೆ ಪತ್ರ ಬರೆದಿದ್ದರು.