ಜೇಟ್ಲಿ ಅವರು ತಮ್ಮ ಬಜೆಟ್ ನಲ್ಲಿ ಕೃಷಿ ಮತ್ತು ರೈತರ ಕಲ್ಯಾಣಕ್ಕಾಗಿ 51,026 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದ್ದು, ಈ ಸಾಲಿನ ಬಜೆಟ್ ಗ್ರಾಮೀಣ ಪ್ರದೇಶದವರಿಗೆ ಅಚ್ಛೇ ದಿನ್ ತರುವಂತಹದ್ದಾಗಿದೆ. ರೈತರು, ಗ್ರಾಮೀಣ ಜನತೆ, ಯುವಜನತೆ, ಬಡವರು, ಮೂಲಸೌಕರ್ಯ, ಹಣಕಾಸು ಕ್ಷೇತ್ರ, ಡಿಜಿಟಲ್ ಎಕಾನಮಿ, ಪಬ್ಲಿಕ್ ಸರ್ವಿಸ್, ಆರ್ಥಿಕ ವ್ಯವಸ್ಥೆ, ತೆರಿಗೆ ನಿರ್ವಹಣೆ ಸೇರಿದಂತೆ ಒಟ್ಟು 10 ಪ್ರಮುಖ ಗುರಿಯನ್ನು ಇಟ್ಟುಕೊಂಡ ಬಜೆಟ್ ಮಂಡಿಸಲಾಗಿದೆ.