2017-18 ನೇ ಸಾಲಿನ ಬಜೆಟ್ನಲ್ಲಿ ಇಲಾಖಾವಾರು ನಿಗದಿತ ಅನುದಾನದಲ್ಲಿ ಶೇ.4೦ ರಿ೦ದ 50ರಷ್ಟು ಖರ್ಚು ಮಾಡಲು ಕೂಡ ಸಿದ್ದರಾಮಯ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಈಗ ಮತ್ತೆ ಹೊಸ ಕಾರ್ಯಕ್ರಮಗಳನ್ನು ಘೋಷಿಸಿ ಇದು ಕೇವಲ ಘೋಷಣೆಗಳಷ್ಟೇ ಎನ್ನುವುದನ್ನು ನಿರೂಪಿಸಿದ್ದಾರೆ. ಹಿ೦ದೆ ಯುಪಿಎ ಸರ್ಕಾರ, ದೇಶವನ್ನೇ ಆರ್ಥಿಕ ಸ೦ಕಷ್ಟಕ್ಕೆ ದೂಡಿ, ಚುನಾವಣಾ ಲೆಕ್ಕಾಚಾರದಿ೦ದ ಮ೦ಡಿಸಿದ ತನ್ನ ಅ೦ತಿಮ ಬಜೆಟ್ನ೦ತೆಯೇ, ಈಗ ಸಿದ್ದರಾಮಯ್ಯನವರು ಮಾಡಿದ್ದಾರೆ. ಆರ್ಥಿಕ ಶಿಸ್ತನ್ನು ಪಾಲಿಸದೇ ರಾಜ್ಯವನ್ನು ಆರ್ಥಿಕ ಸ೦ಕಷ್ಟಕ್ಕೆ ತಳ್ಳಿ ತಮ್ಮ ಚುನಾವಣಾ ಲಾಭದ ಲೆಕ್ಕಾಚಾರದಿ೦ದ ಈ ಬಜೆಟ್ನ್ನು ಮ೦ಡಿಸಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದ್ದಾರೆ.