ಇದು ಭಾರತದ ಆರ್ಥಿಕ, ಸಾಂಪ್ರದಾಯಿಕ ಲೆಕ್ಕಪತ್ರ ಆಗಿರುವುದರಿಂದ ಸಾಂಪ್ರದಾಯಿಕ ಶೈಲಿಯಲ್ಲೇ ಸಂಸತ್ಗೆ ತರಲಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಸೂಟ್ಕೇಸ್ಗೆ ಮುಕ್ತಿ ನೀಡಲಾಗಿದೆ. ಬಜೆಟ್ ಮಂಡನೆಯಲ್ಲೂ ಭಾರತೀಯ ಸಂಸ್ಕೃತಿಗೆ ಆದ್ಯತೆ ನೀಡಲಾಗಿದೆ. ಪಾಶ್ಚಾತ್ಯ ಚಿಂತನೆಯ ದಾಸ್ಯದಿಂದ ನಾವು ಹೊರಬಂದಿದ್ದೇವೆ ಎಂಬುದರ ಸಂಕೇತವಿದು ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಹ್ಮಣ್ಯನ್ ಮಾಹಿತಿ ನೀಡಿದ್ದಾರೆ.