ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ) ಅಧ್ಯಕ್ಷ ರಾಜೇಶ್ಚಂದ್ರ, ಬೇಳೆ ಬೆಲೆ ಹೆಚ್ಚಳವಾಗುವ ಮುನ್ನವೇ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸದ ಪರಿಣಾಮ ಬೆಲೆ ಹೆಚ್ಚಳಕ್ಕೆ ಸರ್ಕಾರವೇ ಹೊಣೆಯಾಗಿದೆ ಎಂದು ಹೇಳಿದರು. ತೊಗರಿ, ಉದ್ದಿನ ಬೇಳೆಗಳ ಬೆಲೆ ಹೆಚ್ಚಳ ಸಂಬಂಧ ಸರ್ಕಾರ ಎಂಎನ್ಸಿ (ಬಹುರಾಷ್ಟ್ರೀಯ ಕಂಪನಿ)ಗಳಿಗೆ ಒಂದು, ಸ್ಥಳೀಯ ಸಗಟುಗಾರರಿಗೆ ಒಂದು ಕಾನೂನು ಜಾರಿಗೊಳಿಸುವ ಮೂಲಕ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.